ಕಾರ್ಕಳ : ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕು ಪುರಸಭಾ ವತಿಯಿಂದ ಮಾಸ್ಕ್ ಧರಿಸದೆ ಇದ್ದವರ ವಿರುದ್ದ ರೂಪಾಯಿ ನೂರು ದಂಡ ವಿಧಿಸಲಾಯಿತು.ಬಸ್ ನಿಲ್ದಾಣ , ಮಾರ್ಕೆಟ್ ರಸ್ತೆ, ಹಾಗೂ ಅಂಗಡಿ ಮುಂಗಟ್ಟುಗಳಿಗೆ ಭೇಟಿ ನೀಡಿದ ಪುರಸಭಾ ಮುಖ್ಯಾಧಿಕಾರಿ ರೂಪಾ ಟಿ.ಶೆಟ್ಟಿ ಹಾಗೂ ಪುರಸಭಾ ಅಧಿಕಾರಿ ,ಸಿಬ್ಬಂದಿ ವರ್ಗದವರು ಕೋವಿಡ್ ಹಿನ್ನಲೆಯಲ್ಲಿ ಸಾರ್ವಜನಿಕರಲ್ಲಿ ಮಾಸ್ಕ್ ಧರಿಸುವಂತೆ ಮನವಿ ಮಾಡಿದರು.
ಉಡುಪಿ ಜಿಲ್ಲೆಯಾದ್ಯಂತ ವಾರಾಂತ್ಯ ಕರ್ಫ್ಯೂ ಜಾರಿಯಲ್ಲಿದ್ದು ದಿನಬಳಕೆಯ ವಸ್ತುಗಳು ಅಂಗಡಿಗಳಲ್ಲದೆ ಕೆಲವು ಮೊಬೈಲ್ ಅಂಗಡಿ, ರೆಡಿ ಮೇಡ್ ಬಟ್ಟೆ ಅಂಗಡಿ ತೆರೆದಿದ್ದು ಆ ಅಂಗಡಿಗಳನ್ನು ಕೂಡಲೇ ಮುಚ್ಚಿಸಿದರು. ವಾರದ ಸಂತೆ ಶನಿವಾರ ವಾಗಿದ್ದು ಮಾರ್ಕೆಟ್ ರಸ್ತೆ ಹಾಗೂ ಬಸ್ ನಿಲ್ದಾಣದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಜನರು ಸೇರಿದ್ದರು.ಈ ಕುರಿತು ಮಾದ್ಯಮಕ್ಕೆ ರೂಪಾ ಟಿ.ಶೆಟ್ಟಿ ವಿವರ ನೀಡಿದರು.
ವರದಿ: ಅರುಣ ಭಟ್ ಕಾರ್ಕಳ
More Stories
ಕಾರ್ಕಳ ಪರಶುರಾಮ ಮೂರ್ತಿ ಸಾಕ್ಷಿ ನಾಶ ಯತ್ನ: ಉದಯ ಕುಮಾರ್ ಶೆಟ್ಟಿ
ಅಜೆಕಾರು ವಿಷ್ಣುಮೂರ್ತಿ ದೇವಸ್ಥಾನದ ವಾರ್ಷಿಕ ರಥೋತ್ಸವ: ಸಾವಿರಾರು ಭಕ್ತರು ಭಾಗಿ
ಕಾರ್ಕಳ ಮುಸ್ಲಿಂ ಬಾಂಧವರಿAದ ರಂಜಾನ್ ವಿಶೇಷ ಪಾರ್ಥನೆ,