ಕಾರ್ಕಳ: ಶ್ರೀ ಮಹಾಲಿಂಗೇಶ್ವರ ಯುವಕ ಮಂಡಲ (ರಿ.) ಮತ್ತು ಮಹಿಳಾ ಮಂಡಲ (ರಿ.) ಪತ್ತೊಂಜಿಕಟ್ಟೆ, ಪೆವಾ೯ಜೆ ಕಾಕ೯ಳ ಇದರ ವತಿಯಿಂದ ಪತ್ತೊಂಜಿಕಟ್ಟೆಯ ಕುಮಾರಿ ವಂದನಾ ರಾವ್ ಹಾಗೂ ಗುಂಡ್ಯದ ಶ್ರೀಶಾ ಎಂಬ ಬಡ ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕಾಗಿ ತಲಾ ರೂ೫೦೦೦ ಧನಸಹಾಯವನ್ನು ನೀಡಲಾಯಿತು. ಯುವಕ ಮಂಡಲದ ಅಧ್ಯಕ್ಷರಾದ ಸುರೇಶ್ ಸುವರ್ಣ ಮತ್ತು ಮಹಿಳಾ ಮಂಡಲದ ಅಧ್ಯಕ್ಷೆ ಜ್ಯೋತಿ ಗಣೇಶ್ ಶೆಟ್ಟಿ ಇವರು ಧನಸಹಾಯವನ್ನು ಸಂಘದ ಕಚೇರಿಯಲ್ಲಿ ಹಸ್ತಾಂತರಿಸಿದರು.
ಈ ಸಂದರ್ಭದಲ್ಲಿ ಯುವಕ ಮಂಡಲದ ಉಪಾಧ್ಯಕ್ಷರಾದ ಸದಾನಂದ ಗುತ್ತಬೈಲು, ಕಾಯ೯ದಶಿ೯ ರಾಘವೇಂದ್ರ ಶೆಟ್ಟಿ, ಕೋಶಾಧಿಕಾರಿ ಪ್ರಜ್ವಲ್ ದೇವಾಡಿಗ, ಮಹಿಳಾ ಮಂಡಲದ ಕಾಯ೯ದಶಿ೯ ಶುಭಾ ಕಿಶೋರ್, ಕೋಶಾಧಿಕಾರಿ ಆರುಂಧತಿ ಬಿ. ಆಚಾರ್, ಲೆಕ್ಕಪರಿಶೋಧಕರಾದ ಅಶೋಕ್ ಸುವರ್ಣ ಮತ್ತು ಪ್ರಸನ್ನ ರಾವ್, ಗೌರವ ಸಲಹೆಗಾರರಾದ ಕೆ. ಪ್ರಭಾಕರ ಬಂಗೇರ, ಎಂ ಗಣೇಶ್ ಶೆಟ್ಟಿ, ಸುಭಾಷ್ ಸುವರ್ಣ, ಪ್ರಸಾದ್ ದೇವಾಡಿಗ ಹಾಗೂ ಇತರೆ ಸದಸ್ಯರು, ವಿದ್ಯಾರ್ಥಿಗಳ ಪೋಷಕರು ಉಪಸ್ಥಿತರಿದ್ದರು. ಕೋಶಾಧಿಕಾರಿ ಆರುಂಧತಿ ಬಿ. ಆಚಾರ್ ಧನ್ಯವಾದವಿತ್ತರು. ನವೀನ್ ಎಂ. ಸುವರ್ಣ ಕಾಯ೯ಕ್ರಮ ನಿರೂಪಿಸಿದರು.
ವರದಿ: ಅರುಣ ಭಟ್ ಕಾರ್ಕಳ
More Stories
ಕಾರ್ಕಳ ಪರಶುರಾಮ ಮೂರ್ತಿ ಸಾಕ್ಷಿ ನಾಶ ಯತ್ನ: ಉದಯ ಕುಮಾರ್ ಶೆಟ್ಟಿ
ಅಜೆಕಾರು ವಿಷ್ಣುಮೂರ್ತಿ ದೇವಸ್ಥಾನದ ವಾರ್ಷಿಕ ರಥೋತ್ಸವ: ಸಾವಿರಾರು ಭಕ್ತರು ಭಾಗಿ
ಕಾರ್ಕಳ ಮುಸ್ಲಿಂ ಬಾಂಧವರಿAದ ರಂಜಾನ್ ವಿಶೇಷ ಪಾರ್ಥನೆ,