May 17, 2024

Bhavana Tv

Its Your Channel

ಮಕ್ಕಳಿಂದ ಮೂಡಿಬಂದ ಪರಿಸರಸ್ನೇಹಿ ಅರಿಶಿನ ಗಣಪತಿ

ಕಾರ್ಕಳ: ಕಾರ್ಕಳದ ಯೂತ್ ಫಾರ್ ಸೇವಾ ತಂಡವು ಮಕ್ಕಳಿಗಾಗಿ ಪರಿಸರ ಸ್ನೇಹಿ ಗಣಪತಿ ಕಾರ್ಯಕ್ರಮವನ್ನು ವೀಣಾ ಶಾನುಭೋಗ ಇವರ ಅಜ್ಜಿ ಮನೆಯಲ್ಲಿ ಕಾರ್ಯಕ್ರಮವನ್ನು ಹಮ್ಮಿಕೊಂಡರು. ಡೇ ಕ್ಯಾರೆನ ೧೫ ಮಕ್ಕಳು, ಆನ್ ಲೈನ್‌ಅಲ್ಲಿ ೧೬ ಮಕ್ಕಳು ಖುಷಿ ಇಂದ ಕಾರ್ಯಕ್ರಮದಲ್ಲಿ ಪಾಲ್ಗೊಂಡರು. ಮುದ್ದು ಮುದ್ದು ಮಕ್ಕಳು ಗೋಧಿಹಿಟ್ಟು ಮತ್ತು ಅರಿಶಿನವನ್ನು ಸೇರಿಸಿ ಗಣಪತಿಯನ್ನು ಮಾಡಿ ಪರಿಸರ ಉಳಿಸಿ ಪರಿಸರ ಬೆಳಸಿ ಎಂಬುವ ಕಾರ್ಯಕ್ರಮಕ್ಕೆ ಸಂಕೇತವಾದರು.
ಕಾರ್ಯಕ್ರಮದಲ್ಲಿ ಯೂತ್ ಫಾರ್ ಸೇವ ದ ರಮಿತಾ ಶೈಲೇಂದ್ರ ರಾವ್, ಚಂದ್ರಿಕಾ, ಶ್ರೀಮತಿ ಗಾಯತ್ರಿ, ಮಂಜುನಾಥ್ ಪೈ ಸುದೀಪ್ ಕಾಮತ್ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು

ವರದಿ: ಅರುಣ ಭಟ್ ಕಾರ್ಕಳ

error: