April 26, 2024

Bhavana Tv

Its Your Channel

ಕೊರೋನಾ ಮಹಾಮಾರಿ ತೊಲಗಲಿ ಎಂಬ ಸಂಕಲ್ಪದೊOದಿಗೆ ಸಾಸ್ತಾನದಿಂದ ತಿರುಪತಿಗೆ ಪಾದಯಾತ್ರೆ

ಕಾರ್ಕಳ: ಸಾಸ್ತಾನದಿಂದ ತಿರುಪತಿಯತ್ತ ಸತತವಾಗಿ ೧೧ವರ್ಷಗಳಿಂದ ವೇಕಟೇಶ್ವರ ಸ್ವೀಟ್ಸ್ ಮಾಲಕರಾದ ಶ್ರೀ ಲಕ್ಷೀನಾರಾಯಣ್ ರಾವ್ ರವರ ಮಾರ್ಗದರ್ಶನ ಮತ್ತು ಸಾರಥ್ಯದಲ್ಲಿ ಸೆ -೧೩ರಿಂದ ೧೩೦ ಪಾದಯಾತ್ರಿಗಳು ಹೊರಟಿದ್ದಾರೆ, ಪ್ರತಿದಿನ ೪೦-೪೫ ಕಿ ಮೀ ಕ್ರಮಿಸಲಿದ್ದಾರೆ,
ಪಾದಯಾತ್ರೆಯು ಸಾಸ್ತಾನದಿಂದ ಕೊಂಡಾಡಿ, ಹೊಸ್ಮಾರ್ ಲಕ್ಷ್ಮೀ ವೆಂಕಟೇಶ ಭಜನಾ ಮಂದಿರ, ಧರ್ಮಸ್ಥಳ, ಗುಂಡ್ಯಾ, ಸಕಲೇಶಪುರ, ಹಾಸನ, ಶೆಟ್ಟಿ ಹಳ್ಳಿ,ಕುಣಿಗಲ್ ಯಡಿಯೂರು, ಶಿವಗಂಗೆ, ರಾಜಘಟ್ಟ, ಕೈವಾರ, ರಾಯಲ್ಪಾಡು, ವಾಯಲ್ಪಾಡು ಪಿಲೇರು, ಬಾಕ್ರ ಪೇಟೆ, ಶ್ರೀನಿವಾಸಮಂಗಾಪುರ, ಶ್ರಿವಾರಿ ಮೆಟ್ಟಿಲಿನಿಂದ ತಿರುಪತಿ ತಿಮ್ಮಪ್ಪನ ದರ್ಶನವನ್ನು ಸೆ ೨೯ರಂದು ಮಾಡಲಿದ್ದಾರೆ, ಈ ವರ್ಷದ ಯಾತ್ರೆ ಮಹಾಮಾರಿ ಕೊರೋನ ತೊಲಗಲಿ ಎನ್ನುವ ಸಂಕಲ್ಪದಿoದ ಹೊರಟಿದ್ದಾರೆ…

ವರದಿ: ಅರುಣ ಭಟ್ ಕಾರ್ಕಳ

error: