April 26, 2024

Bhavana Tv

Its Your Channel

ಕಾರ್ಕಳ ಪುರಸಭಾ ವತಿಯಿಂದ ಕೋವಿಡ್ ಬಗ್ಗೆ ಮಕ್ಕಳಿಗೆ ಜಾಗೃತಿ ಕಾರ್ಯಕ್ರಮ

ಕಾರ್ಕಳ :- ಕಾರ್ಕಳ ಪುರಸಭಾ ವತಿಯಿಂದ ಕೋವಿಡ್‌ನ ಬಗ್ಗೆ ಮಕ್ಕಳಿಗೆ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಪುರಸಭಾ ಅಧ್ಯಕ್ಷೆ ಸುಮಾ ಕೇಶವ್,ಹಾಗೂ ಪುರಸಭಾ ಮುಖ್ಯಾಧಿಕಾರಿ ರೂಪಾ ಟಿ ಶೆಟ್ಟಿ ಹಾಗೂ ಪುರಸಭಾ ೩ ನೆಯ ವಾರ್ಡ್ ಸದಸ್ಯೆ ನೀತ ಆಚಾರ್ಯ, ಭುವನೇಂದ್ರ ಕಾಲೇಜು ಹಾಗೂ ಪೇರ್ವಾಜೇ ಸರಕಾರಿ ಶಾಲೆ ಹಾಗೂ ಎಸ್.ವಿ. ಟಿ.ಮಹಿಳಾ ಕಾಲೇಜು ಗಳಿಗೆ ಭೇಟಿ ನೀಡಿ ನಂತರ ಮಾತನಾಡಿದ ಅವರು ಕೋವಿಡ್ ನಿಯಮ ಸಾಮಾಜಿಕ ಅಂತರ ಕಾಪಾಡಿ,ಮಾಸ್ಕ್ ಖಡ್ಡಾಯವಾಗಿ ಧರಿಸಿ ,ಎಂದು ಹೇಳಿದರು ನಂತರ ಮಾದ್ಯಮ ದೊಂದಿಗೆ ಮಾತನಾಡಿದರು.ಪುರಸಭಾ ಅಧ್ಯಕ್ಷೆ ಸುಮಾ ಕೇಶವ್ ,ಪುರಸಭಾ ಮುಖ್ಯಧಿಕಾರಿ ರೂಪಾ ಟಿ. ಶೆಟ್ಟಿ, ಪುರಸಭಾ ಸದಸ್ಯೆ ನೀತಾ ಆಚಾರ್ಯ,ಹಾಗೂ ಎಸ್.ವಿ. ಟಿ. ಮಹಿಳಾ ಕಾಲೇಜಿನ ಪ್ರಾಂಶುಪಾಲ ರಾದ ಉಷಾ ನಾಯಕ್ , ಉಪಸ್ಥಿತರಿದ್ದರು.

ವರದಿ: ಅರುಣ ಭಟ್ ಕಾರ್ಕಳ

error: