ಕಾರ್ಕಳ ಶ್ರೀ ವೆಂಕಟ್ರಮಣ ದೇವಸ್ಥಾನದ ಎಕಾಹ ಭಜನಾ ಸಪ್ತಾಹ, ಇಂದು ಶ್ರೀ.ಶ್ರೀ. ಶ್ರೀ ಪರಮ ಪೂಜ್ಯ ಕೈವಲ್ಯ ಮಠದ ಶಿವಾನಂದ ಸರಸ್ವತಿ ಸ್ವಾಮೀಜಿ ಭೇಟಿ ನೀಡಿ ಆಶೀರ್ವಚನ ಮಾಡಿ ಭಗವಂತನಲ್ಲಿ ಸದಾ ಭಕ್ತಿಯನ್ನು ಇಟ್ಟು ಕೊಳ್ಳಬೇಕು .ಕಾರ್ಕಳ ವೆಂಕಟ್ರಮಣ ಭಜನಾ ಮಂಡಳಿ ತುಂಬಾ ಪ್ರಸಿದ್ಧಿಯನ್ನು ಪಡೆದಿದೆ ಇನ್ನೂ ನಿರಂತರವಾಗಿ ಭಜನಾ ಕಾರ್ಯಕ್ರಮ ಶ್ರೀ ವೆಂಕಟ್ರಮಣ ದೇವರ ಸನ್ನಿಧಾನದಲ್ಲಿ ವರ್ಷವೂ ನಡೆಯುತ್ತಾ ಇರಲಿ ಎಂದು ಆಶೀರ್ವದಿಸಿದರು. ಭಜನೆಯನ್ನು ನಿರಂತರ ಮಾಡುವುದರಿಂದ ಮನಸ್ಸಿಗೆ ಶಾಂತಿ,ಸಮಾಧಾನ ಹಾಗೂ ರೋಗ ರುಜಿನಗಳು ದೂರವಾಗುತ್ತದೆ ಎಂದರು.
ಕಾರ್ಕಳ, ಶ್ರೀ ವೆಂಕಟ್ರಮಣ ಭಜನಾ ಮಂಡಳಿಪ್ರಾರAಭವಾಗಿ ಐವತ್ತೊಂದನೆಯ ವರ್ಷ ನಿತ್ಯ ಭಜನಾ ಕಾರ್ಯಕ್ರಮವನ್ನು ದೇವಸ್ಥಾನದಲ್ಲಿ ಮಾಡಿ ಹಲವು ಮಂದಿ ಮಕ್ಕಳಿಗೆ ಭಜನೆಯನ್ನು ಕಲಿಸಿ ಭಜನಾ ಪಾಠವನ್ನು ಮಾಡಿ ಉತ್ತಮ ಸಂಗೀತಗಾರರನ್ನಾಗಿ ಮಾಡಿದ ಕೀರ್ತಿ ಶ್ರೀ ವೆಂಕಟ್ರಮಣ ಭಜನಾ ಮಂಡಳಿ,ಕಾರ್ಕಳ. ಭಜನಾ ಸಪ್ತಾಹ ನಿರಂತರ ಎಳು ದಿನಗಳಿಂದ ಭಜನೆ ನಡೆದುಕೊಂಡು ಬಂದಿದ್ದು ಸುಮಾರು ೧೮೦ ಭಜನಾ ಮಂಡಳಿಗಳು ಜಿ. ಎಸ್. ಬಿ. ಸಮಾಜದ ಊರ ಹಾಗೂ ಪರ ಊರ ಹಲವಾರು ಭಜನಾ ಮಂಡಳಿಗಳು ಸಪ್ತಾಹ ನಿರಂತರ ಭಜನಾ ಕಾರ್ಯ ಕ್ರಮದಲ್ಲಿ ಭಾಗವಹಿಸಿದರು.
ಭಜನಾ ಸಪ್ತಾಹ ಕುರಿತು ಮಾದ್ಯಕ್ಕೆ ಬೋಳ ಪ್ರಭಾಕರ್ ಕಾಮತ್ ಅಧ್ಯಕ್ಷರು ಶ್ರೀ ವೆಂಕಟರಮಣ ಭಜನಾ ಮಂಡಳಿ ಕಾರ್ಕಳ ವಿವರ ನೀಡಿದರು.
ವರದಿ: ಅರುಣ ಭಟ್ ಕಾರ್ಕಳ
More Stories
ಕಾರ್ಕಳ ಪರಶುರಾಮ ಮೂರ್ತಿ ಸಾಕ್ಷಿ ನಾಶ ಯತ್ನ: ಉದಯ ಕುಮಾರ್ ಶೆಟ್ಟಿ
ಅಜೆಕಾರು ವಿಷ್ಣುಮೂರ್ತಿ ದೇವಸ್ಥಾನದ ವಾರ್ಷಿಕ ರಥೋತ್ಸವ: ಸಾವಿರಾರು ಭಕ್ತರು ಭಾಗಿ
ಕಾರ್ಕಳ ಮುಸ್ಲಿಂ ಬಾಂಧವರಿAದ ರಂಜಾನ್ ವಿಶೇಷ ಪಾರ್ಥನೆ,