ಕಾರ್ಕಳ ನಗರದ ಮುಖ್ಯ ಬಸ್ಟ್ಯಾಂಡ್ ಬಳಿ ಹಾಗೂ ಅನಂತಶಯನ ಸರ್ಕಲ್ ನಲ್ಲಿ ಶ್ರೀ ಭುವನೇಂದ್ರ ಆಂಗ್ಲಮಾಧ್ಯಮ ಶಾಲೆ ಕಾರ್ಕಳ ಇಲ್ಲಿನ ಸ್ಕೌಟ್ಸ್ ಗೈಡ್ಸ್ ಮಕ್ಕಳಿಂದ ಒಮಿಕ್ರೋನ್ ವೈರಸ್ ಕುರಿತಾದ ಬೀದಿ ನಾಟಕ ನಡೆಯಿತು.
ಮಕ್ಕಳು ಒಮಿಕ್ರೋನ್ ಹರಡುವ ಬಗ್ಗೆ ಲಕ್ಷಣ, ಮುಂಜಾಗ್ರರೂಕತೆಯ ಕುರಿತಾಗಿ ಕಾರ್ಕಳದ ಜನತೆಗೆ ಜಾಗೃತಿಯನ್ನು ಮೂಡಿಸಿದರು.
ಈ ಸಂದರ್ಭದಲ್ಲಿ ಕಾರ್ಕಳದ ನಗರ ಠಾಣೆಯ ಎಸ್ಐ ದಾಮೋದರ ಹಾಗೂ ಎ ಎಸ್ ರಾಜೇಶ್ ಅವರು ಜೊತೆಗಿದ್ದು ಜನತೆಗೆ ಸೈಬರ್ ಕ್ರೈಮ್ ಹಾಗೂ ಯಾವುದೇ ಆಪತ್ಕಾಲದ ಸಂಧರ್ಭದಲ್ಲಿ ೧೧೨ ಗೆ ಕರೆ ಮಾಡಿದರೆ ತಮ್ಮ ನೆರವನ್ನು ನೀಡುವುದಾಗಿ ತಿಳಿಸಿದರು.
ಕಾರ್ಕಳ ಪುರಸಭೆಯ ಕಾರ್ಯನಿರ್ವಹಣಾಧಿಕಾರಿ ರೂಪಾ ಶೆಟ್ಟಿ ಮಾತನಾಡಿ ಕೋವಿಡ್ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುವ ಅಗತ್ಯತೆ ಹಾಗೂ ಈ ಕುರಿತಾದ ಮಕ್ಕಳ ಬೀದಿ ನಾಟಕವನ್ನು ಶ್ಲಾಘಿಸಿದರು.
ಈ ಸಂದರ್ಭದಲ್ಲಿ ಉಡುಪಿ ಜಿಲ್ಲಾ ಗೈಡ್ ಕಮಿಷನರ್ ಜ್ಯೋತಿ ಜೆ ಪೈ ,ಜಿಲ್ಲಾ ತರಬೇತಿ ಆಯುಕ್ತರಾದ ಸಾವಿತ್ರಿ ಮನೋಹರ್, ರೋವರ್ ಶರತ್,ಸ್ಥಳೀಯ ಸಂಸ್ಥೆಯ ಕಾರ್ಯದರ್ಶಿಗಳಾದ ಗಣೇಶ್ ಜಾಲ್ಸೂರು ,ಪುರಸಭಾ ಮಾಜಿ ಸದಸ್ಯರಾದ ಪ್ರಕಾಶ್, ಚಿತ್ರಕಲಾ ಶಿಕ್ಷಕ ಮಂಜು ನವೀನ್ ಕುಮಾರ್ ಎಸ್ ಎನ್ ವಿ ಉಪಸ್ಥಿತರಿದ್ದರು. ಬೀದಿನಾಟಕದ ಪಾತ್ರಧಾರಿಗಳಾದ ಹಸ್ನ,ಮಾನ್ಸಿ,ಓಂಕಾರ್,ದಿಶಾ,ಪಲ್ಲವಿ,ಆಶ್ರಯ್,ಸಾನ್ವಿ,ಶಿಫಾಲಿ,ಯಶೀಕ,ಧೀರಜ್,ಪ್ರಥ್ವಿರಾಜ್,ಇಶಾ ಇವರನ್ನು ಬೀದಿ ನಾಟಕಕ್ಕೆ ತಯಾರುಗೊಳಿಸಿದ ಗೈಡ್ ಶಿಕ್ಷಕಿ ಸೀಮಾ ಕಾಮತ್ ಉಪಸ್ಥಿತರಿದ್ದರು
ವರದಿ: ಅರುಣ ಭಟ್ ಕಾರ್ಕಳ
More Stories
ಕಾರ್ಕಳ ಪರಶುರಾಮ ಮೂರ್ತಿ ಸಾಕ್ಷಿ ನಾಶ ಯತ್ನ: ಉದಯ ಕುಮಾರ್ ಶೆಟ್ಟಿ
ಅಜೆಕಾರು ವಿಷ್ಣುಮೂರ್ತಿ ದೇವಸ್ಥಾನದ ವಾರ್ಷಿಕ ರಥೋತ್ಸವ: ಸಾವಿರಾರು ಭಕ್ತರು ಭಾಗಿ
ಕಾರ್ಕಳ ಮುಸ್ಲಿಂ ಬಾಂಧವರಿAದ ರಂಜಾನ್ ವಿಶೇಷ ಪಾರ್ಥನೆ,