May 19, 2024

Bhavana Tv

Its Your Channel

ಹಿಂದೂ ಸಂಗಮ ಕಾರ್ಯಕ್ರಮದ ಪೂರ್ವಭಾವಿಯಾಗಿ ಮಾತೃ ಸಮಾವೇಶ

ಕಾರ್ಕಳ: ಡಿಸೆಂಬರ್ ೧೨ ಕಾರ್ಕಳದಲ್ಲಿ ನಡೆಯುವ ಐತಿಹಾಸಿಕ ಹಿಂದೂ ಸಂಗಮ ಕಾರ್ಯಕ್ರಮದ ಪೂರ್ವಭಾವಿಯಾಗಿ ಮಾತೃ ಸಮಾವೇಶ ಭಾನುವಾರ ಮಧ್ಯಾಹ್ನ ೩:೩೦ಗಂಟೆಗೆ ಅನಂತಶಯನದಿoದ ವೇಣುಗೋಪಾಲ ದೇವಸ್ಥಾನದ ವರೆಗೆ ಭವ್ಯ ಮೆರವಣಿಗೆ ಮೂಲಕ ಸಾಗಿ ಬಂದು ದೇವಸ್ಥಾನದ ಸಭಾಂಗಣದಲ್ಲಿ ಸಭಾ ಕಾರ್ಯಕ್ರಮ ನಡೆಯಿತು.

ವಿಶ್ವ ಹಿಂದೂ ಪರಿಷತ್ ಪ್ರಾಂತ ಸಹ ಕಾರ್ಯದರ್ಶಿ ಕೃಷ್ಣಮೂರ್ತಿ, ಬಜರಂಗದಳ ಪ್ರಾಂತ ಸಂಯೋಜಕ್ ಸುನಿಲ್ ಕೆ ಆರ್, ಮಾತೃ ಶಕ್ತಿ ಜಿಲ್ಲಾ ಪ್ರಮುಖ್ ಪೂರ್ಣಿಮಾ ಸುರೇಶ್, ವಿಶ್ವ ಹಿಂದೂ ಪರಿಷದ್ ತಾಲೂಕು ಉಪಾಧ್ಯಕ್ಷ ಅಶೋಕ್ ಕುಮಾರ್ ಜೈನ್, ದುರ್ಗಾವಾಹಿನಿ ತಾಲೂಕು ಸಂಯೋಜಕಿ ಸುರಕ್ಷಾ ಉಪಸ್ಥಿತಿ ಇದ್ದರು.

ವರದಿ; ಅರುಣ ಭಟ್ ಕಾರ್ಕಳ

error: