ಕಾರ್ಕಳ : ಭಾರತ ಸ್ಕೌಟ್ಸ್. ಮತ್ತು ಗೈಡ್ಸ್ ರಾಜ್ಯ ಸಂಸ್ಥೆ ಕರ್ನಾಟಕ ಜಿಲ್ಲಾ ಸಂಸ್ಥೆ. ಉಡುಪಿ ಸ್ಥಳೀಯ ಸಂಸ್ಥೆ ಕಾರ್ಕಳ ಇದರ ವತಿಯಿಂದ ಕಾರ್ಕಳ ತಾಲೂಕಿನ ವಿವಿಧ ಶಾಲೆಯ ಸ್ಕೌಟ್ಸ್ ಗೈಡ್ಸ್ ವಿದ್ಯಾರ್ಥಿಗಳಿಗೆ ಫುಟಾಣಿ ಟ್ರಾಫಿಕ್ ಪೊಲೀಸ್ ರಸ್ತೆ ಸಂಚಾರ ನಿಯಮ ಮಾಹಿತಿಯನ್ನು ಹಾಗೂ ಪ್ರಾತ್ಯಕ್ಷಿಕೆಯ ಮೂಲಕ ರಸ್ತೆ. ಸಂಚಾರ ನಿಯಮಗಳನ್ನು ಮತ್ತು ವಾಹನಗಳು ದಟ್ಟಣೆಯಾಗದಂತೆ ಹೇಗೆ ಟ್ರಾಫಿಕ್ ಸಿಗ್ನಲ್ ಗಳನ್ನು ನೀಡುವುದು ಎನ್ನುವುದರ ಅರಿವನ್ನು ನೀಡುವುದರ ಮೂಲಕ ವಿದ್ಯಾರ್ಥಿಗಳೇ ಕರ್ತವ್ಯಗಳನ್ನು ಸಾಂದರ್ಭಿಕವಾಗಿ ಹೇಗೆ ನಿರ್ವಹಿಸಬಹುದು ಎಂಬುದಾಗಿ ಕಾರ್ಕಳ ನಗರ ರಾಣೆಯ ಸಬ್ ಇನ್ಸ್ಪೆಕ್ಟರ್ ದಾಮೋದರ್ ಹಾಗೂ ಹೆಡ್ ಕಾನ್ಸ್ಟೇಬಲ್ ರವೀಂದ್ರ ರವರು ತಿಳಿಸಿಕೊಟ್ಟರು .
ಈ ಸಂದರ್ಭದಲ್ಲಿ ಜಿಲ್ಲಾ ಗೈಡ್ ಕಮೀಷನರ್ ಶ್ರೀಮತಿ ಜ್ಯೋತಿ ಜೆ ಪೈರವರು ಉಪಸ್ಥಿತರಿದ್ದು ಪೊಲೀಸ್ ಇಲಾಖೆಯ ಸಹಕಾರಕ್ಕೆ ಮೆಚ್ಚುಗೆ. ವ್ಯಕ್ತಪಡಿಸಿದ್ದರು ಕಾರ್ಕಳ ಸ್ಙಳೀಯ ಸಂಸ್ಥೆ ಉಪಾಧ್ಯಕ್ಷ ಜಗದೀಶ್ ಹೆಗ್ಡೆ ಉಪಸ್ಥಿತರಿದ್ದುಕಾರ್ಯಕ್ರಮಕ್ಕೆ ಶುಭ ಹಾರೈಸಿದರು ಭುವನೇಂದ್ರ ಪ್ರೌಢ ಶಾಲೆಯ ಮುಖ್ಯ ಶಿಕ್ಷಕಿ ವೃಂದಾ ಶೆಣೈ ಉಪಸ್ಥಿತರಿದ್ದು ಅತಿಥಿಗಳಿಗೆ ಸ್ಮರಣಿಕೆ ನೀಡಿ ಗೌರವಿಸಿದರು.ಎಸ್ ವಿಟಿ ಶಾಲಾ ಗೈಡ್ ಶಿಕ್ಷಕಿ ಪ್ರಭಾ , ಭುವನೇಂದ್ರ ಸಂಸ್ಥೆಯ ಪ್ರಾಥಮಿಕ ಶಾಲಾ ಗೈಡ್ ಶಿಕ್ಷಕಿ ಸೀಮಾ ಕಾಮತ್ ಉಪಸ್ಥಿತರಿದ್ದರು. ಕಾರ್ಕಳ ವಲಯ ಕ್ಷೇತ್ರ ಶಿಕ್ಷಣಾಧಿಕಾರಿ ವೆಂಕಟೇಶ್ ಜಿ ನಾಯಕ್ ಉಡುಪಿ ಜಿಲ್ಲಾ. ಗೈಡ್ ತರಬೇತು ಕಮೀಷನರ್ ಸಾವಿತ್ರಿ ಮನೋಹರ್ ಸ್ಥಳೀಯ ಸಂಸ್ಥೆ ಅಧ್ಯಕ್ಷ ಎಂ ಕೆ ವಿಜಯಕುಮಾರ್ ರವರು ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು. ಸ್ಥಳೀಯ ಸಂಸ್ಥೆ ಕಾರ್ಯದರ್ಶಿ ಭುವನೇಂದ್ರ ಪ್ರೌಢ ಶಾಲಾ ಸ್ಕೌಟ್ ಶಿಕ್ಷಕ ಗಣೇಶ್ ಜಾಲ್ಸೂರು ಕಾರ್ಯಕ್ರಮ ಆಯೋಜಿಸಿ ನಿರೂಪಿಸಿದರು ಭುವನೇಂದ್ರ ಪ್ರೌಢ ಶಾಲಾ ಗೈಡ್ ಶಿಕ್ಷಕಿ ಇಂದಿರಾ ಪಿ ನಾಯಕ್ ಧನ್ಯವಾದವಿತ್ತರು.ಸ್ಕೌಟ್ಸ್ ಗೈಡ್ಸ್ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಬಹಳ ಉತ್ಸಾಹದಿಂದ ಭಾಗವಹಿಸಿ ಹೊಸ ಅನುಭವ ಪಡೆದುಕೊಂಡರು.
ವರದಿ: ಅರುಣ ಭಟ್ ಕಾರ್ಕಳ
More Stories
ಕಾರ್ಕಳ ಪರಶುರಾಮ ಮೂರ್ತಿ ಸಾಕ್ಷಿ ನಾಶ ಯತ್ನ: ಉದಯ ಕುಮಾರ್ ಶೆಟ್ಟಿ
ಅಜೆಕಾರು ವಿಷ್ಣುಮೂರ್ತಿ ದೇವಸ್ಥಾನದ ವಾರ್ಷಿಕ ರಥೋತ್ಸವ: ಸಾವಿರಾರು ಭಕ್ತರು ಭಾಗಿ
ಕಾರ್ಕಳ ಮುಸ್ಲಿಂ ಬಾಂಧವರಿAದ ರಂಜಾನ್ ವಿಶೇಷ ಪಾರ್ಥನೆ,