May 19, 2024

Bhavana Tv

Its Your Channel

ಕಾಡುಹೊಳೆಯ ಜಂಗಮೇಶ್ವರ ಮಠದಲ್ಲಿ ಸಂಭ್ರಮದ ಶಿವರಾತ್ರಿ ಆಚರಣೆ, ಜಾಗರಣೆ ಪ್ರಯುಕ್ತ ಆಹೋರಾತ್ರಿ ಭಜನಾ ಮಂಗಲೋತ್ಸವ

ಕಾರ್ಕಳ: ಹೆಬ್ರಿ ತಾಲೂಕಿನ ಮುನಿಯಾಲು ಕಾಡುಹೊಳೆಯ ಇತಿಹಾಸ ಪ್ರಸಿದ್ಧ ಶ್ರೀ ಜಂಗಮೇಶ್ವರ ಮಠದಲ್ಲಿ ಮಹಾಶಿವರಾತ್ರಿ ಪ್ರಯುಕ್ತ ಮಂಗಳವಾರದAದು ವಿಶೇಷ ಧಾರ್ಮಿಕ ಪೂಜಾ ಕಾರ್ಯಕ್ರಮವು ನಡೆಯಿತು.
ದೇವಳದ ಅರ್ಚಕರಾದ ರಾಘವೇಂದ್ರ ಭಟ್ ನೇತೃತ್ವದಲ್ಲಿ ಈಶ್ವರನಿಗೆ ಕ್ಷೀರಾಭಿಷೇಕ, ಅರಸಿನಾಭಿಷೇಕ, ಸೀಯಾಳಭಿಷೇಕ ,ರುದ್ರಾಭಿಷೇಕ ಸಹಿತ ವಿವಿಧ ಪೂಜಾ ವಿಧಿವಿಧಾನಗಳು ನೆರವೇರಿಸಲಾಯಿತು.
ಮಹಾಶಿವರಾತ್ರಿಯ ಪ್ರಯುಕ್ತ ನಡೆದ ಕಾರ್ಯಕ್ರಮದಲ್ಲಿ ನೂರಾರು ಭಕ್ತಾದಿಗಳು ಭಕ್ತಿಯಿಂದ ಪಾಲ್ಗೊಂಡಿದ್ದರು.
ಶಿವರಾತ್ರಿ ಜಾಗರಣೆ ಪ್ರಯುಕ್ತ ಸಾಯಂಕಾಲದಿAದ ಬುಧವಾರ ಮುಂಜಾನೆಯವರೆಗೆ ಕಾಡುಹೊಳೆ ಜಂಗಮೇಶ್ವರ ಭಜನಾ ಮಂಡಳಿಯ ವತಿಯಿಂದ ಭಜನಾ ಮಂಗಲೋತ್ಸವ ಕಾರ್ಯಕ್ರಮ ನಡೆಯಲಿದ್ದು, ಬುಧವಾರ ಮಧ್ಯಾಹ್ನ ಮಹಾ ಪೂಜೆಯ ಬಳಿಕ ಅನ್ನಸಂತರ್ಪಣೆಯೊAದಿಗೆ ಶಿವರಾತ್ರಿ ಆಚರಣೆ ಸಂಪನ್ನಗೊಳ್ಳಲಿದೆ

ವರದಿ: ಅರುಣ ಭಟ್ ಕಾರ್ಕಳ

error: