May 19, 2024

Bhavana Tv

Its Your Channel

ಕಾರ್ಕಳ ಉತ್ಸವದ ಪೂರ್ವಭಾವಿಯಾಗಿ ನಡೆದ ಉತ್ಸವ ಸ್ವಚ್ಚತೆ ಕಾರ್ಯಕ್ರಮ

ಕಾರ್ಕಳ: ಮಾ.೧೦ ರಿಂದ ೨೦ರ ವರೆಗೆ ಹಮ್ಮಿಕೊಂಡಿರುವ ಕಾರ್ಕಳ ಉತ್ಸವದ ಪೂರ್ವಭಾವಿಯಾಗಿ ನಡೆದ ಉತ್ಸವ ಸ್ವಚ್ಚತೆ ಕಾರ್ಯಕ್ರಮವು ಯಶಸ್ವಿಯಾಗಿ ನಡೆಯಿತು . ನಗರದಲ್ಲಿ ಸುಮಾರು ೭೦೦೦ ಮಂದಿ ಏಕಕಾಲದಲ್ಲಿ ಸ್ವಚ್ಚತೆಯಲ್ಲಿ ಭಾಗಿಯಾಗಿದ್ದು ವಿಶೇಷವಾಗಿತ್ತು ಉತ್ಸವ ಸ್ವಚ್ಚತೆ ಕಾರ್ಯಕ್ರಮದಲ್ಲಿ ಕಾರ್ಕಳ ನಗರದ ಎನ್ ಎಸ್ ಎಸ್, ಎನ್ ಸಿಸಿ, ರೋವರ್ ರೇರ‍್ಸ್ ,ರೆಡ್ಕಾçಸ್ ,ಜ್ಞಾನಸುಧಾ ಕಾಲೇಜು ,ಭುವನೇಂದ್ರ ಕಾಲೇಜು, ಮಂಜುನಾಥ ಪೈ ತಾಂತ್ರಿಕ, ಡಿಪ್ಲೋಮ ಕಾಲೇಜು , ಎಸ್ ವಿ ಟಿ ವಿದ್ಯಾಸಂಸ್ಥೆ, ಕ್ರಿಯೇಟಿವ್ ಕಾಲೇಜು, ಮದರಸ ವಿದ್ಯಾರ್ಥಿಗಳು ಸೇರಿದಂತೆ ನಗರದ ೨೦ ಕ್ಕೂ ಹೆಚ್ಚು ಶಾಲಾ ಕಾಲೇಜುಗಳ ವಿದ್ಯಾರ್ಥಿಗಳು ಭಾಗಿಯಾದರು.
ಸ್ವಚ್ಚ ಬ್ರಿಗೇಡ್ , ಕಾರ್ಕಳ ತಾಲೂಕು ವ್ಯಾಪ್ತಿಯ ಪಂಚಾಯತ್ ಸದಸ್ಯರು, ಸ್ವಸಹಾಯ ಗುಂಪುಗಳ ಸದಸ್ಯರು ಭಾಗವಹಿಸಿದ್ದರು . ಉಡುಪಿ ಜಿಲ್ಲೆಯ ಜಿಲ್ಲಾಧಿಕಾರಿ ಕೂರ್ಮರಾವ್ , ಅಪರ ಜಿಲ್ಲಾಧಿಕಾರಿ ಸದಾಶಿವ ಪ್ರಭು , ತಹಸಿಲ್ದಾರ್ ಪುರಂದರ ಕೆ, ಕಾರ್ಕಳ ಪುರಸಭೆ ಮುಖ್ಯಾಧಿಕಾರಿ ರೂಪಾ. ಟಿ.ಶೆಟ್ಟಿ , ಪುರಸಭಾ ಅಧ್ಯಕ್ಷೆ ಸುಮಕೇಶವ್ , ಉಪಾಧ್ಯಕ್ಷೆ ಪಲ್ಲವಿ ಪ್ರವೀಣ್ ಮತ್ತು ಪುರಸಭೆಯ ಎಲ್ಲಾ ಅಧಿಕಾರಿಗಳು , ಸಿಬ್ಬಂದಿ ವರ್ಗದವರು , ಪುರಸಭಾ ಸದಸ್ಯರು ಮೊದಲಾದವರು ಸ್ವಚ್ಛತಾ ಕಾರ್ಯಕ್ರಮದಲ್ಲಿ ಭಾಗವಹಿಸಿದರು.

ವರದಿ: ಅರುಣ ಭಟ್ ಕಾರ್ಕಳ

error: