ಕಾರ್ಕಳ:-ಜಾಗೃತಿ -ಸಾಹಿತ್ಯಾಸಕ್ತ ಮಹಿಳಾ ಸಂಘಟನೆ, ಕಾರ್ಕಳ,ಇದರ ಆಶ್ರಯದಲ್ಲಿ ಶ್ರೀಮತಿ ಮಾಲತಿ ವಸಂತರಾಜ್, ಕಾರ್ಕಳ, ಇವರ ಕವನ ಸಂಕಲನ ಅಂತರ್ಮನನ ದ ಬಿಡುಗಡೆ ಸಮಾರಂಭವು ಶನಿವಾರ ದಂದು ಜರುಗಿತು.
ಹಿರಿಯ ನ್ಯಾಯವಾದಿ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ಎಮ್.ಕೆ.ವಿಜಯ ಕುಮಾರ್ ಇವರು ಕೃತಿ ಲೋಕಾರ್ಪಣೆಗೈದು ಸಾಹಿತ್ಯದ ಓದು ನಮ್ಮನ್ನು ಮುದಗೊಳಿಸುತ್ತದೆ ಎಂದರು.
ಸಾಹಿತಿ,ಅಧ್ಯಾಪಕ ಕೃತಿಗೆ ಮುನ್ನುಡಿ ಬರೆದ ಮೋಹನ್ ಎಸ್ ಜೈನ್ ರವರು ಕೃತಿಯ ಬಗ್ಗೆ ತಮ್ಮ ಅನಿಸಿಕೆಗಳನ್ನು ಹಂಚಿಕೊAಡರು
ಜಾಗೃತಿ ಬಳಗದ ಅಧ್ಯಕ್ಷೆ ಮಿತ್ರಪ್ರಭಾ ಹೆಗ್ಡೆ ಸಮಾರಂಭದ ಅಧ್ಯಕ್ಷತೆ ವಹಿಸಿ ,ಕೃತಿ ಯ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿದರು.
ಅನುಪಮ ಚಿಪ್ಳೂಂಕರ್ ರವರು ಅತಿಥಿ ಅಭ್ಯಾಗತರನ್ನು ಸ್ವಾಗತಿಸಿ, ಜೆ.ಕೃಷ್ಣವೇಣಿಯವರು ವಂದನಾರ್ಪಣೆಗೈದರು. ಉಪನ್ಯಾಸಕಿ ಮಾಲತಿ ಜಿ.ಪೈ. ಯವರು ನಿರೂಪಿಸಿದ ಈ ಕಾರ್ಯಕ್ರಮ ದಲ್ಲಿ ಕುಮಾರಿ ಸಂಪ್ರತಿ ಜೈನ್ ರವರು ಪ್ರಾರ್ಥನೆ ಮಾಡಿದರು.ಕುಮಾರಿ ಪ್ರಾಂಜಲಿ ಜೈನ್ ಶಾಂತಿ ಮಂತ್ರ ಪಠಿಸಿದರು.
ವರದಿ:ಅರುಣ ಭಟ್ ಕಾರ್ಕಳ
More Stories
ಕಾರ್ಕಳ ಪರಶುರಾಮ ಮೂರ್ತಿ ಸಾಕ್ಷಿ ನಾಶ ಯತ್ನ: ಉದಯ ಕುಮಾರ್ ಶೆಟ್ಟಿ
ಅಜೆಕಾರು ವಿಷ್ಣುಮೂರ್ತಿ ದೇವಸ್ಥಾನದ ವಾರ್ಷಿಕ ರಥೋತ್ಸವ: ಸಾವಿರಾರು ಭಕ್ತರು ಭಾಗಿ
ಕಾರ್ಕಳ ಮುಸ್ಲಿಂ ಬಾಂಧವರಿAದ ರಂಜಾನ್ ವಿಶೇಷ ಪಾರ್ಥನೆ,