May 3, 2024

Bhavana Tv

Its Your Channel

ಮುರತ್ತಂಗಡಿಯಲ್ಲಿ ಅಪಘಾತ -ವಿದ್ಯಾರ್ಥಿ ಸಾವು

ಕಾರ್ಕಳ : ಸಾಣೂರು ಸಮೀಪ ಮುರತ್ತಂಗಡಿಯಲ್ಲಿ ಶುಕ್ರವಾರ ನಡೆದ ಅಪಘಾತದಲ್ಲಿ ಕಾರ್ಕಳ ಭುವನೇಂದ್ರ ಕಾಲೇಜಿನ ಪ್ರಥಮ ಬಿಸಿಎ ವಿದ್ಯಾರ್ಥಿ ರೆಂಜಾಳ ಗ್ರಾಮದ ಮನನ್ (19) ಮೃತಪಟ್ಟಿದ್ದಾರೆ.

ಪರೀಕ್ಷೆ ಮುಗಿಸಿ ಕಾಲೇಜಿನಿಂದ ಮನೆಗೆ ಬೈಕ್‌ನಲ್ಲಿ ತೆರಳುತ್ತಿದ್ದ ಸಂದರ್ಭ ಮುರತ್ತಂಗಡಿಯಲ್ಲಿ ಹಾಲು ಸಾಗಾಟದ ಟೆಂಪೊಗೆ ಡಿಕ್ಕಿಯಾಗಿದ್ದು, ರಸ್ತೆಗೆಸೆಯಲ್ಪಟ್ಟಿದ್ದಾರೆ. ತಕ್ಷಣವೇ ಮನನ್ ಮೇಲೆ ಟಿಪ್ಪರ್ ಹರಿದು ಹೋಗಿದೆ. ಗಂಭೀರವಾಗಿ ಗಾಯಗೊಂಡ ಆತನನ್ನು ಕೂಡಲೇ ಮಣಿಪಾಲ ಆಸ್ಪತ್ರೆಗೆ ಕರೆತರಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೇ ಸಂಜೆ ವೇಳೆ ಮನನ್ ಪ್ರಾಣ ಪಕ್ಷಿ ಹಾರಿಹೋಗಿದೆ. ಎನ್‌ಎನ್‌ಸಿಯಲ್ಲಿ ತೊಡಗಿಸಿಕೊಂಡಿದ್ದ ಈತ ಹೆತ್ತವರಿಗೆ ಓರ್ವನೇ ಮಗನಾಗಿದ್ದ. ಮನನ್ ತಂದೆಯೂ 4 ವರ್ಷಗಳ ಹಿಂದೆ ಮೃತಪಟ್ಟಿದ್ದು ತಾಯಿ ಕರುಳ ಕುಡಿಯನ್ನು ಕಳೆದುಕೊಂಡು ದಿಕ್ಕು ತೋಚದಂತಾಗಿದ್ದಾರೆ

ವರದಿ: ಅರುಣ ಭಟ್ ಕಾರ್ಕಳ

error: