May 2, 2024

Bhavana Tv

Its Your Channel

ಪ್ರತಿಭಟನೆಯನ್ನು ಹತ್ತಿಕ್ಕಲು ಸುಳ್ಳು ಹೇಳಿಕೆ- ದಾಖಲೆಯಿಂದ ಬಹಿರಂಗ- ಬಿಜೆಪಿ ಕ್ಷೇತ್ರಾದ್ಯಕ್ಷರು ಜನತೆಯಲ್ಲಿ ಬಹಿರಂಗ ಕ್ಷಮೆ ಕೇಳಬೇಕು-ಶುಭದರಾವ್ ಆಗ್ರಹ

ಕಾರ್ಕಳ: ಪುರಸಭಾ ವ್ಯಾಪ್ತಿಯ ಮೂರು ಮಾರ್ಗದಿಂದ ಅನೆಕೆರೆ ಮಸೀದಿ ರಸ್ತೆಯ ಅವ್ಯವಸ್ಥೆಯ ಬಗ್ಗೆ ಸಾರ್ವಜನಿಕರ ಮುತುವರ್ಜಿಯಿಂದ ಪ್ರತಿಭಟನೆಯನ್ನು ಹಮ್ಮಿಕೊಂಡಾಗ ಈ ರಸ್ತೆ ಕಾಮಗಾರಿಗೆ ಟೆಂಡರ್ ಆಗಿದೆ, ಕೇವಲ ಪ್ರಚಾರಕ್ಕಾಗಿ ಪ್ರತಿಭಟನೆ ಮಾಡಲಾಗುತ್ತದೆ ಎಂದು ಬಿಜೆಪಿ ಕ್ಷೇತ್ರಾದ್ಯಕ್ಷರು ಹೇಳಿದ್ದ ಸುಳ್ಳು ಲೋಕೋಪಯೋಗಿ ಇಲಾಖೆಯಿಂದ ಪಡೆದ ದಾಖಲೆಯಿಂದ ಬಹಿರಂಗಗೊAಡಿದೆ ಹಾಗಾಗಿ ಅವರು ಬಹಿರಂಗ ಕ್ಷಮೆಯಾಚಿಸಬೇಕು ಎಂದು ಆಗ್ರಹಿಸುತ್ತೇನೆಂದು ಕಾರ್ಕಳ ಪುರಸಭೆ ಸದ್ಯಸ್ಯ ಶುಭದರಾವ್ ಹೇಳಿದರು

ಸಾರ್ವಜನಿಕರು ತಮಗೆ ಸಮಸ್ಯೆಯಾದಾಗ ಮನವಿ ನೀಡುವುದು ಮತ್ತು ಅದಕ್ಕೆ ಸರಿಯಾದ ಸ್ಪಂದನೆ ಸಿಗದಿದ್ದಾಗ ಪ್ರತಿಭಟಿಸುವುದು ಸರ್ವೇ ಸಾಮಾನ್ಯ ಜವಾಬ್ದಾರಿ ಸ್ಥಾನದಲ್ಲಿರುವವರು ಪರಿಸ್ಥಿತಿಯ ಗಂಭೀರತೆಯನ್ನು ಅರಿತು ತಾಳ್ಮೆಯಿಂದ ಸಮಸ್ಯೆಗಳಿಗೆ ಸ್ಪಂದಿಸುವ ಪ್ರಯತ್ನ ಮಾಡಬೇಕೆ ಹೊರತು ಸುಳ್ಳು ಹೇಳಿ ದಿಕ್ಕು ತಪ್ಪಿಸಬಾರದು. ಒಂದು ವೇಳೆ ಟೆಂಡರ್ ಆಗಿದೆ ಎಂದಾದರೆ ಯಾರಿಗೆ ಆಗಿದೆ ಎಂದು ಹೇಳಬೇಕಾಗುತ್ತದೆ ಆದರೆ ಇಲ್ಲಿ ಪ್ರಕ್ರಿಯೆ ನಡೆಯುತಿದೆ ಹೊರತು ಅಂತಿಮವಾಗಿಲ್ಲ. ಒಂದು ವೇಳೆ ಸಾರ್ವಜನಿಕರ ಪ್ರತಿಭಟನೆ ನಾಟಕವೆಂದಾದರೆ ಕೆಲವು ಸಮಯಗಳ ಹಿಂದೆ ಇದೇ ರಸ್ತೆಯಲ್ಲಿ ನಿಮ್ಮದೇ ಪಕ್ಷದ ಮಾಜಿ ಪುರಸಭಾ ಸದಸ್ಯ ಮಾಡಿದ ಪ್ರತಿಭಟನೆ ನಾಟಕವೇ? ಎಂಬುದು ನನ್ನ ಪ್ರಶ್ನೆ.

ಕ್ಷೇತ್ರ ಬಿಜೆಪಿ ಅಧ್ಯಕ್ಷರಿಗೆ ಪ್ರಶ್ನೆ
ಕಳೆದ ನಾಲ್ಕು ವರ್ಷಗಳಿಂದ ಪುರಸಭಾ ವ್ಯಾಪ್ತಿಯಲ್ಲಿ ಸಿಂಗಲ್ ಲೇಔಟ್ ಸಮಸ್ಯೆಯಿಂದ ನೂರಾರು ಕುಟುಂಬಗಳು ಮನೆ ಕಟ್ಟಲಾಗದೆ ಸಂಕಟ ಅನುಭವಿಸಿದ್ದಾರೆ, ಸಾಲ ಮಾಡಿ ಜಮೀನು ಖರೀದಿಸಿದವರು ಆತಂಕಕ್ಕೆ ಒಳಗಾಗಿದ್ದಾರೆ ಇವರ ಪರ ತಾವು ಎಂದಾದರೂ ಮಾತನಾಡಿದ್ದೀರಾ?
ತಾತ್ಕಾಲಿಕ ಹಕ್ಕುಪತ್ರ ನೀಡಿ ಬಡವ ಮುಗ್ದರನ್ನು ವಂಚಿಸಲಾಗಿದೆ ಒಂದು ವೇಳೆ ಅದೇ ಶಾಶ್ವತ ಹಕ್ಕುಪತ್ರವಾಗಿದ್ದರೆ ಈಗ ಯಾಕೆ ಹಕ್ಕು ಪತ್ರ ವಿತರಣೆಯಾಗುತ್ತಿಲ್ಲ?

ಪುರಸಭಾ ವ್ಯಾಪ್ತಿಯಲ್ಲಿ ನಡೆದ ಒಳಚರಂಡಿಯ ಕಳಪೆ ಕಾಮಗಾರಿಯಿಂದ ಪೇಟೆಯ ಜನರು ಸಂಕಟ ಪಡುತ್ತಿದ್ದಾಗ ಮೌನವಾಗಿದ್ದ ತಮಗೆ ಈಗ ಪ್ರತಿಭಟನೆಯ ಬಗ್ಗೆ ಮಾತನಾಡುವ ನೈತಿಕತೆ ಇದೆಯಾ?

ಹಿರಿಯರ ಚಾಳಿ ಮನೆಮಂದಿಗೆಲ್ಲ ಎಂಬAತೆ ನಿಮ್ಮ ಸುಳ್ಳನ್ನು ಸತ್ಯವಾಗಿಸಲು ಮತ್ತು ಪ್ರತಿಭಟನಾಕಾರರನ್ನು ಬೆದರಿಸಿ ಅವಮಾನಿಸಲು ಯುವ ಮೋರ್ಚಾ ಪ್ರಯತ್ನಿಸುತಿದೆ ಅವರ ಪ್ರಯತ್ನಕ್ಕೆ ಯಶಸ್ಸು ಸಿಗದು ಎಂದು ಹೇಳೀದರು
ಪತ್ರಿಕಾ ಗೋಷ್ಟಿಯಲ್ಲಿ ನಾಗೇಶ್ ಹೆಗ್ಡೆ, ಸುನೀಲ್ ಭಂಡಾರಿ ಉಪಸ್ಥಿತರಿದ್ದರು

ವರದಿ: ಅರುಣ ಭಟ್ ಕಾರ್ಕಳ

error: