May 16, 2024

Bhavana Tv

Its Your Channel

ಸಿಂಗಲ್ ಲೇಔಟ್ ಸಮಸ್ಯೆ- ಭರವಸೆ ಮೂಡಿಸಿದ ಹೈಕೋಟ್ ಆದೇಶ , ಕೋರ್ಟ್ ಆದೇಶ ಪಾಲಿಸಿ ಎಲ್ಲ ಅರ್ಜಿದರರಿಗೂ ಖಾತಾ ನೀಡಿ- ಶುಭದರಾವ್ ಆಗ್ರಹ

ಕಾರ್ಕಳ: ಕಳೆದ ಹಲವು ವರ್ಷಗಳಿಂದ ಕಾರ್ಕಳ ಪುರಸಭಾ ವ್ಯಾಪ್ತಿಯಲ್ಲಿ ಸಿಂಗಲ್ ಲೇಔಟ್ ಸಮಸ್ಯೆಯಿಂದ ಜಮೀನು ಖರೀದಿ, ಮಾರಾಟ ಮತ್ತು ಮನೆ ನಿರ್ಮಾಣ ಅಸಾಧ್ಯವಾಗಿದ್ದು ನೂರಾರು ಕುಟುಂಬಗಳು ಆತಂಕದಲ್ಲಿದ್ದವು, ಸಮಸ್ಯೆಗೆ ಸ್ಪಂದಿಸಬೇಕಾದ ಸರಕಾರ ಮತ್ತು ಜನಪ್ರತಿನಿದಿಗಳು ನಿರ್ಲಕ್ಷವಹಿಸಿದ್ದ ಕಾರಣ ಪರಿಹಾರ ಸಾಧ್ಯವಾಗಲಿಲ್ಲ. ಆದರೆ ರಾಜ್ಯ ಉಚ್ಚ ನ್ಯಾಯಾಲಯ ನೀಡಿದ ತೀರ್ಪು ಜನರಲ್ಲಿ ಭರವಸೆಯನ್ನು ಮೂಡಿಸಿದೆ. ಈ ಆದೇಶವನ್ನೇ ಮಾದರಿಯಾಗಿ ಎಲ್ಲಾ ಅರ್ಜಿದಾರರಿಗೂ ಖಾತಾ ನೀಡುವಂತೆ ಪುರಸಭಾ ಸದಸ್ಯ ಶುಭದರಾವ್ ಆಗ್ರಹಿಸಿದ್ದಾರೆ.

ಇಂದು ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಕಾರ್ಕಳದ ವಕೀಲರೊಬ್ಬರು ತಮ್ಮದೇ ಜಮೀನಿಗೆ ಸಂಬAಧಿಸಿದAತೆ ಖಾತಾ (ನಮೂನೆ-3) ಸಮಸ್ಯೆಯ ಬಗ್ಗೆ ರಾಜ್ಯ ಉಚ್ಚ ನ್ಯಾಯಾಲಯದಲ್ಲಿ ರಿಟ್ ಪಿಟಿಶನ್ (1921/2022) ದಾಖಲಿಸಿದ್ದು ಸದ್ರಿ ಪ್ರಕರಣದಲ್ಲಿ ದಿನಾಂಕ 3:09:2022 ರಂದು 8 ವಾರದ ಒಳಗಾಗಿ ಖಾತಾ ನೀಡಬೇಕೆಂದು ಆದೇಶವಾಗಿದ್ದೆ ಈ ಆದೇಶದಂತೆ ಖಾತಾ ನೀಡುವಂತೆ ಅವರು ಪುರಸಭೆಗೆ ಮನವಿಯನ್ನು ಸಲ್ಲಿಸಿದ್ದಾರೆ. ಇದು ಆತಂಕದಲ್ಲಿದ ಜನರಲ್ಲಿ ಭರವಸೆಯನ್ನು ಮೂಡಿಸಿದೆ ಎಂದರು.

ಸರಕಾರ ಮತ್ತು ಜನಪ್ರತಿನಿಧಿಗಳು ಪರಿಹರಿಸಬೇಕಿದ್ದ ಸಮಸ್ಯೆಯೊಂದಕ್ಕೆ ವಕೀಲರ ಪ್ರಯತ್ನದಿಂದ ಪರಿಹಾರ ಸಿಗುವ ಸಾಧ್ಯತೆ ಇದೆ ಅವರನ್ನು ಜನತೆಯ ಪರವಾಗಿ ಅಭಿನಂದಿಸುತ್ತೇನೆ. ಖಾತಾ ಸಮಸ್ಯೆಗೆ ನಾನಾ ಕಾರಣಗಳನ್ನು ಕೊಡುತ್ತಿದ್ದ ಸಚಿವ ಸುನೀಲ್ ಕುಮಾರ್ ರವರು ಇದಕ್ಕೆ ಉತ್ತರಿಸಬೇಕಾದ ಅನಿವಾರ್ಯತೆ ಇದೆ ಎಂದರು.

ಸಿAಗಲ್ ಲೇಔಟ್ ಸಮಸ್ಯೆಗೆ ತಿಂಗಳೊಳಗೆ ಪರಿಹಾರ ಎಂದು ಅವರು ಕಳೆದ ವರ್ಷ ಇಂಜಿನಿಯರ್ ದಿನಾಚರಣೆಯ ಕಾರ್ಯಕ್ರದಲ್ಲಿ ನೀಡಿದ ಹೇಳಿಕೆಗೆ ಒಂದು ವರ್ಷವಾಗಿದೆ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವ ಇಚ್ಚಾಶಕ್ತಿ ಇದಿದ್ದರೆ ತಮ್ಮದೇ ಸರ್ಕಾರದ ಮಟ್ಟದಲ್ಲಿ ಪ್ರಯತ್ನಿಸಿ ಪರಿಹಾರ ಕಂಡುಕೊಳ್ಳಬಹುದಿತ್ತು ಎಂದರು.

ಈಗಾಗಲೆ ವಿದಾನಸಭೆಯ ಅಧಿವೇಶನದಲ್ಲಿ ಹೊಸ ಕಾನೂನು ರೂಪಿಸುವ ಅನುಮೋದನೆ ದೊರಕ್ಕಿದ್ದು ಅದು ಶೀಘ್ರ ಜಾರಿಯಾಗಿ ಶಾಶ್ವತ ಪರಿಹಾರ ಸಿಗುವುವಂತೆ ಪ್ರಯತ್ನಿಸಿ ಎಂದು ಆಗ್ರಹಿಸಿದ್ದಾರೆ.

ಪ್ರತಿಕಾಗೋಷ್ಟಿಯಲ್ಲಿ ಪುರಸಭಾ ಸದಸ್ಯ ಹರೀಶ್ ಕುಮಾರ್ ಉಪಸ್ಥಿತಿತರಿದ್ದರು

ವರದಿ:ಅರುಣ ಭಟ್ ಕಾರ್ಕಳ

error: