May 16, 2024

Bhavana Tv

Its Your Channel

ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ ಹಿರಿಂಗಡಿ ಕ್ಷತ್ರಿಯ ಮರಾಠ ಸಮಾಜ ಹಾಗೂ ಯೂತ್ ಫೋರ್ ಸೇವಾ ಇವರ ಜಂಟಿ ಆಶ್ರಯದಲ್ಲಿ ಆಯುಷ್ಮಾನ್ ಅಭಾ ಕಾರ್ಡ್ ವಿತರಣೆ,

ಕಾರ್ಕಳ : ಇ -ಶ್ರಮ ನೊಂದಾವಣಿ ಮತ್ತು ಸ್ಥಳದಲ್ಲಿ ವಿತರಣಾ ಶಿಬಿರ ಕಾರ್ಯಕ್ರಮವು ಕಾರ್ಕಳದ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ನಡೆಯಿತು. ಶಿಬಿರವನ್ನು ಉದ್ಘಾಟಿಸಿದ ಕ್ಷತ್ರಿಯ ಮರಾಠ ಸಮಾಜದ ಅಧ್ಯಕ್ಷ ಶುಭದ ರಾವ್ ಮಾತಾಡಿ ಸರಕಾರದ ಸವಲತ್ತುಗಳನ್ನು ಸಮಾಜದ ಕಟ್ಟ ಕಡೆಯ ವ್ಯಕ್ತಿಗೂ ತಲುಪಿಸುವುದು ಸಮಾಜದ ಮುಖಂಡರ ಕರ್ತವ್ಯವಾಗುತ್ತದೆ. ಈ ನಿಟ್ಟಿನಲ್ಲಿ ದೇವಸ್ಥಾನದ ಆಡಳಿತ ಮಂಡಳಿ ಮತ್ತು ಸಮಾಜದ ವತಿಯಿಂದ ಈ ಕಾರ್ಯಕ್ರಮವನ್ನು ಆಯೋಜಿಸಿದೆ ಸಾರ್ವಜನಿಕರು ಕೂಡ ಇದರ ಸದುಪಯೋಗ ಪಡೆದುಕೊಳ್ಳಲು ಬೇಕಾಗಿ ವಿನಂತಿಸಿಕೊAಡರು. ಯೂತ್ ಫೋರ್ ಸೇವಾ ರಮಿತಾ ಶೈಲೇಂದ್ರ ಅವರು ಆಯುಷ್ಮಾನ್ ಕಾರ್ಡ್ ಮತ್ತು ಇ -ಶ್ರಮ ಸೌಲಭ್ಯದ ಬಗ್ಗೆ ಮಾಹಿತಿಯನ್ನು ನೀಡಿದರು. ಈ ಸಂದರ್ಭದಲ್ಲಿ ದೇವಸ್ಥಾನದ ಮೊಕ್ತೇಸರಾಗಿರುವ ಗಣೇಶ್ ರಾವ್ ಸುಧೀಂದ್ರ ರಾವ್ ಸಮಾಜದ ಮುಖ್ಯಸ್ಥರಾಗಿರುವ ಸುರೇಂದ್ರ ರಾವ್ ಮತ್ತಿತರರು ಉಪಸ್ಥಿತರಿದ್ದರು.
ವರದಿ; ಅರುಣ ಭಟ್, ಕಾರ್ಕಳ

error: