ಕಾರ್ಕಳ: ಗಾಂಜಾ ಅಫೀಮು ಸೇವನೆಯಂತಹ ಪ್ರಕರಣಗಲು ಹೆಚ್ಚುತಿದ್ದು ಯುವಜನತೆ ನೇರವಾಗಿ ಭಾಗಿಯಾಗುತ್ತಿದೆ . ಅದಕ್ಕೆ ಪ್ರೌಢಶಾಲೆ ಹಾಗೂ ಕಾಲೇಜು ವಿದ್ಯಾರ್ಥಿಗಳಿಗೆ ಅದರ ವಿರುದ್ಧ ಜಾಗೃತಿ ಮೂಡಿಸಬೇಕು ಎಂದು ಅಜೆಕಾರು ಠಾಣೆ ಠಾಣಾಧಿಕಾರಿ ತಿಮ್ಮೇಶ್ ಬಿ ಎನ್ ಹೇಳಿದರು ಅವರು ಬುಧವಾರ ಅಜೆಕಾರು ಬಸ್ ನಿಲ್ದಾಣ ಸಮೀಪ ಅಪರಾಧ ತಡೆ ಮಾಸಾಚರಣೆ ಜಾಥಕ್ಕೆ ಚಾಲನೆ ನೀಡಿ ಮಾತನಾಡಿದರು .
ಕಳ್ಳತನ ಪ್ರಕರಣ ಗಳು ಹೆಚ್ಚುತಿದ್ದು ಅಪರಿಚಿತ ಸಂಶಯಾಸ್ಪದ ವ್ಯಕ್ತಿಗಳ ವಿರುದ್ಧ ಮಾಹಿತಿ ನೀಡಿ ಅದರಂತೆ ಪಟ್ಟಣದ ನಿವಾಸಿಗಳು ಮನೆಗಳನ್ನು ಬೀಗ ಹಾಕಿ ಬೇರೆಡೆಗೆ ಹೋಗುವಾಗ ಪೊಲೀಸ್ ಠಾಣೆಗೆ ಲಿಖಿತ ಪತ್ರದೊಂದಿಗೆ ಮಾಹಿತಿ ನೀಡಬೇಕು ಎಂದರು. ಅಪರಾಧ ತಡೆಯಲು ಪೋಲಿಸ್ ಇಲಾಖೆ ನಿಮ್ಮ ಜೊತೆಗಿದೆ ಎಂದು ಹೇಳಿದರು.
ಜಾಥದಲ್ಲಿ ಎ.ಎಸ್ ಐ ಚಂದ್ರ ಎ.ಕೆ ,ಸಂಜಯ್ ಸೇರಿದಂತೆ ಠಾಣಾ ಪೋಲೀಸ್ ಸಿಬ್ಬಂದಿಗಳು ಸಾರ್ವಜನಿಕರು ಭಾಗವಹಿಸಿದ್ದರು.
ವರದಿ:- ಅರುಣ ಭಟ್ಟ
More Stories
ಅಜೆಕಾರು ವಿಷ್ಣುಮೂರ್ತಿ ದೇವಸ್ಥಾನದ ವಾರ್ಷಿಕ ರಥೋತ್ಸವ: ಸಾವಿರಾರು ಭಕ್ತರು ಭಾಗಿ
ಕಾರ್ಕಳ ಮುಸ್ಲಿಂ ಬಾಂಧವರಿAದ ರಂಜಾನ್ ವಿಶೇಷ ಪಾರ್ಥನೆ,
ಕಾಬೆಟ್ಟು ಎಳ್ನಾಡು ಗುತ್ತು ಮಾರಿದೊಂಪದ ಬಲಿ ನೇಮೋತ್ಸವದ ಸಭಾ ಕಾರ್ಯಕ್ರಮ.