ಕಾರ್ಕಳ: ಯುವಕ ಮಂಡಲ (ರಿ.) ಅತ್ತೂರು ಇದರ 43ನೇ ವರ್ಷದ ವಾರ್ಷಿಕೋತ್ಸವವು ದಿನಾಂಕ 11-02-2023 ಶನಿವಾರ ರಜತ ವೇದಿಕೆಯಲ್ಲಿ ನಡೆಯಿತು.
ಕಾರ್ಯಕ್ರಮದ ದ್ವಜಾರೋಹಣವು ಬೆಳಗ್ಗೆ 9.30ಕ್ಕೆ ಸಿವಿಲ್ ಇಂಜಿನಿಯರಿAಗ್ ಅಸೋಸಿಯೇಷನ್ ಕಾರ್ಕಳ ಇದರ ಮಾಜಿ ಅಧ್ಯಕ್ಷರು ಹರೀಶ್ ಅಂಚನ್ ಇವರು ನೆರೆವೇರಿಸಿದರು, ಸಂಘಟನ ಕಾರ್ಯದರ್ಶಿಯಾದ ಕವನ್ ಹೆಗ್ಡೆ ಅವರು ಕಾರ್ಯಕ್ರಮವನ್ನು ಉದ್ದೇಶಿಸಿ ಮಾತಾಡಿದರು.
ಸಾಯಂಕಾಲ ಗಂಟೆ 7ಕ್ಕೆ ಸರಿಯಾಗಿ ಅಂಗನವಾಡಿ ಮಕ್ಕಳಿಂದ ಹಾಗೂ ಸ್ಥಳೀಯ ಪ್ರತಿಭೆಗಳಿಂದ ನೃತ್ಯ ಕಾರ್ಯಕ್ರಮ ಆರಂಭಗೊoಡು 9 ಘಂಟೆಗೆ ಸರಿಯಾಗಿ ಸಭಾ ಕಾರ್ಯಕ್ರಮ ನಡೆಯಿತು. ಸಭಾ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಮರ್ಥ್ ಶೆಣೈ ಬಿ ಅಸಿಸ್ಟೆಂಟ್ ಪ್ರೊಫೆಸರ್ ಸಹ್ಯಾದ್ರಿ ಕಾಲೇಜು ಮಂಗಳೂರು ಇವರು ಆಗಮಿಸಿ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಧನುಷ್ ಆಚಾರ್ಯ ವಹಿಸಿದ್ದರು ಮತ್ತು ಘನ ಉಪಸ್ಥಿತಿಯಲ್ಲಿ ಬೋಳ ಶ್ರೀನಿವಾಸ್ ಕಾಮತ್, ಬಾಲಕೃಷ್ಣ ಹೆಗ್ಡೆ, ಮನ್ಮಥ ಜೆ ಶೆಟ್ಟಿ, ಶಿಲ್ಪಿ ರಾಮಚಂದ್ರ ಆಚಾರ್ಯ, ಉಮೇಶ್ ಆಚಾರ್ಯ, ಚೇತನ್ ಕೆ ಕೋಟ್ಯಾನ್. ಈ ಕಾರ್ಯಕ್ರಮದ ಸ್ವಾಗತವನ್ನು ಧನುಷ್ ಆಚಾರ್ಯ ನೆರೆವೆರೆಸಿದರು, ಸಂಘದ ವರದಿ ವಚನವನ್ನು ಕಾರ್ಯದರ್ಶಿಯದ ಸುಭಾಷ್ ಕುಂದರ್ ವಾಚಿಸಿದರು, ಪ್ರಾಸ್ಥವಿಕ ಭಾಷಣವನ್ನು ಬಾಲಕೃಷ್ಣ ಹೆಗ್ಡೆ ಇವರು ಮಾಡಿದರು. ಸಂದೇಶ ವಚನವನ್ನು ಸಂಪತ್ ಇವರು ಮಂಡಿಸಿದರು, ಧನ್ಯವಾದವನ್ನು ದರ್ಶಿತ್ ಇವರು ನಡೆಸಿದರು, ಕಾರ್ಯಕ್ರಮದ ನಿರೂಪಣೆಯನ್ನು ಕೌಶಿಕ್ ಅಮೀನ್ ಮುನಿಯಲ್ ಮತ್ತು ನಿಖಿತಾ ಪೂಜಾರಿ ಏರ್ಲಪಾಡಿ ನೆರೆವೆರಿಸಿದರು.ರಾತ್ರಿ ಗಂಟೆ 11ಕ್ಕೆ ಸರಿಯಾಗಿ ಲಯನ್ ಡಿ ಶೆಟ್ರೇನ ಶ್ರೀ ಲಲಿತಾ ಕಲಾವಿದರಿಂದ ಗರುಡ ಪಂಚಮಿ ನಾಟಕ ನಡೆಯಿತು.
ವರದಿ: ಅರುಣ ಭಟ್ ಕಾರ್ಕಳ
More Stories
ಅಜೆಕಾರು ವಿಷ್ಣುಮೂರ್ತಿ ದೇವಸ್ಥಾನದ ವಾರ್ಷಿಕ ರಥೋತ್ಸವ: ಸಾವಿರಾರು ಭಕ್ತರು ಭಾಗಿ
ಕಾರ್ಕಳ ಮುಸ್ಲಿಂ ಬಾಂಧವರಿAದ ರಂಜಾನ್ ವಿಶೇಷ ಪಾರ್ಥನೆ,
ಕಾಬೆಟ್ಟು ಎಳ್ನಾಡು ಗುತ್ತು ಮಾರಿದೊಂಪದ ಬಲಿ ನೇಮೋತ್ಸವದ ಸಭಾ ಕಾರ್ಯಕ್ರಮ.