April 29, 2024

Bhavana Tv

Its Your Channel

ಕಾರ್ಕಳ ಸಾರ್ವಜನಿಕ ಸರಕಾರಿ ಆಸ್ಪತ್ರೆಗೆ ಉದಯ ಶೆಟ್ಟಿ ಬೇಟಿ,

ಖಾಲಿ ಹುದ್ದೆ ಬರ್ತಿ ಮಾಡುವ ಭರವಸೆ, ಸೇವಾ ಮಾನೋಬಾವನೆಯಿಂದ ಕರ್ತವ್ಯ ನಿರ್ವಹಿಸುವಂತೆ ಮನವಿ.

ಕಾರ್ಕಳ ; ಸಾರ್ವಜನಿಕ ಸರಕಾರಿ ಆಸ್ಪತ್ರೆಗೆ ಕಾಂಗ್ರೇಸ್ ಮುಖಂಡ ಉದಯ್ ಶೆಟ್ಟಿ ಬೇಟಿ ನೀಡಿ ವೈದ್ಯಾದಿಕಾರಿ ಕೆ. ಎಸ್ ರಾವ್ ಇವರಲ್ಲಿ ಮಾಹಿತಿಯನ್ನು ಪಡೆದರು. ಆಸ್ಪತ್ರೆಯಲ್ಲಿರುವ ಎಲ್ಲಾ ಖಾಲಿ ಹುದ್ದೆಗಳನ್ನು ಶೀಘ್ರದಲ್ಲಿ ಭರ್ತಿ ಮಾಡುವಲ್ಲಿ ಪ್ರಯತ್ನಿಸುದಾಗಿ ತಿಳಿಸಿದರು, ಅತೀ ಪ್ರಮುಖವಾಗಿ ಹಿರಿಯ ಪ್ರಸೂತಿ ತಜ್ಞರ ಹುದ್ದೆ ಖಾಲಿ ಇರುವುದರಿಂದ ನಮ್ಮೂರಿನ ಮಹಿಳೆಯರು ಹೆರಿಗೆಗಾಗಿ ದೂರದ ಊರನ್ನು ಅವಲಂಬಿಸಬೇಕಾಗಿದೆ ಹಾಗಾಗಿ ಈ ಹುದ್ದೆಯ ನೇಮಕಾತಿ ಅತೀ ಶೀಘ್ರದಲ್ಲಿ ಆಗಬೇಕಿದೆ ಜೊತೆಯಲ್ಲಿ ಇತರ ಕೆಲವು ಹುದ್ದೆಗಳು ಖಾಲಿ ಇರುವುದರಿಂದ ಸಾರ್ವಜನಿಕರಿಗೆ ಸೂಕ್ತ ಸಮಯಕ್ಕೆ ಸೇವೆ ನೀಡುವಲ್ಲಿ ವಿಳಂಬವಾಗುತ್ತದೆ, ಮಕ್ಕಳ ಪೌಷ್ಟಿಕಾಂಶ ಪುನರ್ವಸತಿ ಕೇಂದ್ರ ಮತ್ತು ಡಯಾಲಿಸಿಸ್ ಕೇಂದ್ರದಲ್ಲಿ ವೈದ್ಯರ ಮತ್ತು ಸಿಬಂದಿಗಳ ಅಗತ್ಯವಿದೆ, ಈ ಬಗ್ಗೆ ಆರೋಗ್ಯ ಸಚಿವರಲ್ಲಿ ಮನವಿ ಮಾಡಿ ಕ್ರಮ ಜರುಗಿಸುವಲ್ಲಿ ಪ್ರಯತ್ನಿಸುದಾಗಿ ತಿಳಿಸಿದರು. ಎಲ್ಲಾ ಸಿಬಂದಿಗಳು ಸೇವಾ ಮನೋಬಾವನೆಯಿಂದ ಕರ್ತವ್ಯ ನಿರ್ವಹಿಸಬೇಕು ನಿಮ್ಮ ಮೇಲೆ ನಂಬಿಕೆ ಇಟ್ಟು ಬರುವ ಪ್ರತಿಯೊಬ್ಬ ಅನಾರೋಗ್ಯ ಪೀಡಿತರಿಗೂ ಉತ್ತಮ ಸೇವೆ ನೀಡಬೇಕು, ಎಂದು ಮನವಿ ಮಾಡಿದರು. ಕರ್ತವ್ಯದ ನಿರ್ವಹಿಸುವ ಸಂದರ್ಬದಲ್ಲಿ ನಿಮಗೆ ಸಮಸ್ಯೆಯಾದರೆ ನನನ್ನು ಸಂಪರ್ಕಿಸಿ ಸದಾ ನಿಮ್ಮ ಜೊತೆ ನಾನಿದ್ದೇನೆ ಎಂದರು. ಈ ಸಂದರ್ಭದಲ್ಲಿ ಸಹಾಯಕ ಆಡಳಿತ ವೈದ್ಯಾದಿಕಾರಿ ಭಾರತಿ, ಆಸ್ಪತ್ರೆಯ ಇತರ ವೈದ್ಯಾದಿಕಾರಿಗಳು, ಶುಶ್ರೂಷಕರ ಅದೀಕ್ಷಕರು, ಸಿಬಂದಿಗಳು, ಪುರಸಭಾ ಸದಸ್ಯರುಗಳು ಉಪಸ್ಥಿತರಿದ್ದರು.
ವರದಿ ; ಅರುಣ ಭಟ್ ಕಾರ್ಕಳ

error: