May 1, 2024

Bhavana Tv

Its Your Channel

ಕಾರ್ಕಳದಲ್ಲಿ ನಾಲ್ಕನೇ ಗ್ಯಾರೆಂಟಿ ಯೋಜನೆಗೆ ಚಾಲನೆ

ಕಾರ್ಕಳ ; ಕರ್ನಾಟಕ ಸರ್ಕಾರದ ಐದು ಗ್ಯಾರಂಟಿ ಯೋಜನೆಗಳಲ್ಲಿ ನಾಲ್ಕನೇ ಗ್ಯಾರಂಟಿ ಯೋಜನೆಯ ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯನವರು ವಿಧಾನಸೌಧದಲ್ಲಿ ಚಾಲನೆ ನೀಡಿದ್ದರು. ಕಾರ್ಕಳದ ಪುರಸಭೆಯ ಮುಖ್ಯ ಅಧಿಕಾರಿಯಾದ ರೂಪಶೆಟ್ಟಿಯವರು ಈ ಯೋಜನೆಯನ್ನು ಕಾರ್ಕಳದಲ್ಲಿ ಚಾಲನೆ ನೀಡಿ ನಂತರ ಮಾತನಾಡಿದ ಅವರು ಕಾರ್ಕಳ ಪುರಸಭಾ ವ್ಯಾಪ್ತಿಯ ಮೂರೂ ಕಡೆ ಅರ್ಜಿಯ ನೊಂದಣಿ ಮಾಡಲು ಅವಕಾಶ ಇದೆ ಇದರ ಸದುಪಯೋಗವನ್ನು ಎಲ್ಲರೂ ಪಡೆದುಕೊಳ್ಳಬೇಕೆಂದು ಹೇಳಿದರು. ನಂತರ ಪುರಸಭೆ ಸದಸ್ಯರಾದ ಶುಭದ ರಾವ್ ಮಾತನಾಡಿದವರು. ನಾವು ಯೋಜನೆಯ ಪ್ರಯೋಜನ ಪಡೆಯಲು ಬರುವವರಿಗೆ ಸ್ವಾಗತ ಕೋರಲು ಬಂದಿರುತ್ತೇವೆ. ಬಿಜೆಪಿಯವರು ಈ ಯೋಜನೆಗೆ ಬಿಟ್ಟಿ ಭಾಗ್ಯ ಎಂದು ಟೀಕಿಸಿದ್ದಾರೆ ಇದು ಬಿಟ್ಟ ಭಾಗ್ಯವಲ್ಲ ಮನೆಯಲ್ಲಿರುವ ಗ್ರಹಣಿಗೆ ಆರ್ಥಿಕವಾಗಿ ಸಹಾಯವಾಗುವ ನಿಟ್ಟಿನಲ್ಲಿ ಕರ್ನಾಟಕ ಸರಕಾರ ಇಂತ ಯೋಜನೆ ಜಾರಿಗೆ ತಂದಿರುತ್ತದೆ ಎಂದು ಹೇಳಿದರು.

error: