April 27, 2024

Bhavana Tv

Its Your Channel

ಹಟ್ಟಿಯಂಗಡಿ ಸಿದ್ಧಿವಿನಾಯಕ ವಸತಿ ಶಾಲೆಯಲ್ಲಿ ಭಾವಾಂತರ0ಗ ಕೌಶಲ್ಯಾಧಾರಿತ ಕಾರ್ಯಾಗಾರ

????????????????????????????????????

‘ನಹಿ ಜ್ಞಾನೇನ ಸದೃಶಂ ಪವಿತ್ರಮಿಹ ವಿದ್ಯತೇ’ ಎಂಬ ಧ್ಯೇಯವಾಕ್ಯದಂತೆ ಜ್ಞಾನದಾನವೇ ವಿದ್ಯಾಸಂಸ್ಥೆಗಳ ಪ್ರಧಾನಕರ‍್ಯ. ಅದು ಕೇವಲ ಪಠ್ಯಪುಸ್ತಕದ ಶಿಕ್ಷಣಕ್ಕೆ ಸೀಮಿತವಾಗಿರದೆ, ವಿದ್ಯರ‍್ಥಿಗಳಲ್ಲಿ ಕ್ರಿಯಾಶೀಲತೆಯನ್ನು ಮೂಡಿಸುವ, ಅವರಲ್ಲಿ ಚಿಂತನಾಶೀಲತೆಯನ್ನು ಉದ್ದೀಪನಗೊಳಿಸುವ ಕರ‍್ಯಕ್ರಮಗಳನ್ನೂ ಆಯೋಜಿಸುತ್ತಿರಬೇಕು. ಈ ನಾಡಿನ ಕಲೆ, ಸಾಹಿತ್ಯ, ಸಂಗೀತ ಮತ್ತು ಸಂಸ್ಕೃತಿಗಳ ಸಾರವನ್ನು ವಿದ್ಯರ‍್ಥಿ ಸಮೂಹಕ್ಕೆ ತಲುಪಿಸುವ ಕರ‍್ಯವಾಗಬೇಕು. ಆ ನಿಟ್ಟಿನಲ್ಲಿ ಶ್ರೀ ಸಿದ್ಧಿವಿನಾಯಕ ವಸತಿ ಶಾಲೆ, ಹಟ್ಟಿಅಂಗಡಿಯಲ್ಲಿ ಭಾವಾಂತರಂಗ””” – ಪರಿಪರ‍್ಣ ಬದುಕಿನೆಡೆ ನಮ್ಮ ಪಯಣ ಎನ್ನುವ ಸಂಪರ‍್ಣ ಚಟುವಟಿಕೆ ಆಧಾರಿತ ವ್ಯಕ್ತಿತ್ವ ವಿಕಸನ ಕರ‍್ಯಾಗಾರವನ್ನು ಹತ್ತು ರ‍್ಷಗಳಿಂದ ನಡೆಸುತ್ತಿದ್ದು, ಈ ರ‍್ಷ ೧೨-೦೮-೨೦೨೩ರ ಶನಿವಾರದಂದು ಹಮ್ಮಿಕೊಳ್ಳಲಾಯಿತು. ಈ ಕರ‍್ಯಾಗಾರವನ್ನು ಕರ‍್ಯಕ್ರಮಕ್ಕೆ ಆಗಮಿಸಿದ ಸ೦ಪನ್ಮೂಲ ವ್ಯಕ್ತಿಗಳು ಶಾಲೆಯ ರಜತಮಹೋತ್ಸವದ ಲಾಂಛನದ ಕಲಾಕೃತಿಯ ನರ‍್ಮಾಣ ಮಾಡಿ, ಖ್ಯಾತ ಪರಿಸರ ವಾದಿ ಶ್ರೀಯುತ ಶಿವಾನಂದ ಕಳವೆ, ಸಿರಸಿ ಇವರ ಅಮೃತಹಸ್ತದಿಂದ ವಿನೂತನ ರೀತಿಯಲ್ಲಿ ಉದ್ಘಾಟಿಸಲಾಯಿತು.
ಈ ಕರ‍್ಯಾಗಾರವನ್ನು ಆಯೋಜಿಸುವ ಕುರಿತಾಗಿ ಮಾತನಾಡಿದ ಶ್ರೀ ಸಿದ್ಧಿ ಶೈಕ್ಷಣಿಕ ಪ್ರತಿಷ್ಠಾನದ ಕರ‍್ಯರ‍್ಶಿಗಳೂ ಮತ್ತು ಶಾಲಾ ಪ್ರಾಂಶುಪಾಲರಾದ ಶ್ರೀ ಶರಣ ಕುಮಾರ “ ಶ್ರೀ ಸಿದ್ಧಿವಿನಾಯಕನ ಕೃಪೆ, ಸಂಸ್ಥಾಪಕರಾದ ದಿವಂಗತ ವೇದಮರ‍್ತಿ ರಾಮಚಂದ್ರ ಭಟ್ಟರ ಸದಾಶಯಗಳಿಂದಲೇ ಮುಂದುವರಿಯುತ್ತಿರುವ ಈ ಸಂಸ್ಥೆ ಹತ್ತು ರ‍್ಷಗಳಿಂದ ಭಾವಾಂತರಂಗ ಕರ‍್ಯಕ್ರಮವನ್ನು ನಡೆಸಿಕೊಂಡು ಬಂದಿದೆ. ಗುರಿಯನ್ನು ಸದಾ ಸ್ಮರಿಸಿಕೊಂಡು ಪ್ರತಿನಿತ್ಯ ಪ್ರಯತ್ನಿಸಿದರೆ ಅಸಾಧ್ಯವೆಂಬುದೇನೂ ಇಲ್ಲ. ವಿಭಿನ್ನವಾದ ಕರ‍್ಯಗಳ ಮೂಲಕ ಸಾಧಿಸುವವಗೆ ಯಶಸ್ಸು ಸಿಗುತ್ತದೆ. ಯಾವುದೇ ಕರ‍್ಯ ಎರಡು ರೀತಿಯಲ್ಲಿ ಪ್ರೇರಣೆ ನೀಡಬಹುದು. ಅದರಲ್ಲಿ ಸಕಾರಾತ್ಮಕವಾದ ಮರ‍್ಗವನ್ನಷ್ಟೇ ಆಯ್ಕೆ ಮಾಡಿಕೊಳ್ಳಬೇಕು. ಇಂದು ವಿದ್ಯರ‍್ಥಿಗಳು ಪಡೆದುಕೊಳ್ಳುವ ಅತ್ಯಲ್ಪ ಮಾಹಿತಿಯೂ ಕೂಡ ಅವರ ಮುಂದಿನ ಜೀವನಕ್ಕೆ ನೆರವು ನೀಡಬಹುದೆನ್ನುವ ನಿರೀಕ್ಷೆ ನಮ್ಮದು. ಅವರು ಕಲಿತು, ತಾವು ಕಲಿತದ್ದನ್ನು ತಮ್ಮವರೊಂದಿಗೆ ಹಂಚಿಕೊಡರೆ, ನಮ್ಮ ಪ್ರಯತ್ನ ಸರ‍್ಥಕ” ಎಂದು ತಿಳಿಸಿದರು.
ಈ ಸಂರ‍್ಭದಲ್ಲಿ ೪೬ ವಿವಿಧ ಬಗೆಯ ಕರ‍್ಯಾಗಾರಗಳನ್ನು ನುರಿತ ಸಂಪನ್ಮೂಲ ವ್ಯಕ್ತಿಗಳಿಂದ ನಡೆಸಲಾಯಿತು. ಶ್ರೀ ಶಿವಾನಂದ ಕಳವೆಯವರು ಪರಿಸರ ಶಿಕ್ಷಣದ ಕುರಿತು ಮಾಹಿತಿ ನೀಡಿದರೆ, ಶ್ರೀ ಜನರ‍್ದನ ಹಾವಂಜೆಯವರು ಕಾವಿಕಲೆಯ ಬಗ್ಗೆ ಮಕ್ಕಳಿಗೆ ತಿಳಿಸಿಕೊಟ್ಟರು. ಶ್ರೀಮತಿ ಪ್ರಸನ್ನಾ ಪ್ರಸಾದ್ ಭಟ್ ಕಸಿಕಟ್ಟುವುದರ ಬಗ್ಗೆ ಮಾಹಿತಿ ನೀಡಿ ಕಸೆ ಕಟ್ಟಿ ತೋರಿಸಿದರೆ, ಶ್ರೀ ನಾರಾಯಣ ಜಿ. ಶೇರುಗಾರರು ಬದುಕಿಗೆ ಉಸಿರು ತುಂಬಿದವರು ಎಂಬ ವಿಚಾರದಲ್ಲಿ ಮಾಹಿತಿ ನೀಡಿದರು. ಶ್ರೀ ಸಂದೀಪ ಭಟ್ಟ ಈ ಜಗ-ಸೋಜಿಗವೆಂಬ ವಿಚಾರವನ್ನು ಪ್ರಸ್ತುತಪಡಿಸಿದರೆ, ಶ್ರೀ ಯೋಗೀಶ್ ಬಂಕೇಶ್ವರರು – ರಂಗಶಿಕ್ಷಣದ ಬಗ್ಗೆ ತಿಳಿಸಿಕೊಟ್ಟರು. ಶ್ರೀಸತ್ಯನಾ ಕೊಡೇರಿಯವರು ರಂಗಕಲೆಯ ಬಗ್ಗೆ ತಿಳಿಸಿದರೆ, ಶ್ರೀ ಸದ್ಗುರುಭಟ್ಟ ಮತ್ತು ಶ್ರೀಪ್ರಕಾಶ್ ಭಟ್ಟರು ಜಂತರ್ – ಮಂತರ್ ವಿಚಾರಗಳನ್ನು ತಿಳಿಸಿದರು. ಶ್ರೀ ಗಣಪತಿ ಹೆಗಡೆ ಮತ್ತು ಶ್ರೀಗಣೇಶ ಹೆಗಡೆಯವರು ಬಹುಮುಖಿ ಬದುಕು ಎಂಬ ವಿಚಾರಗಳನ್ನು ಪ್ರಸ್ತುತ ಪಡಿಸಿದರೆ ಶ್ರೀ ವಿ. ಟಿ. ಹೆಗಡೆಯವರು ತೆಂಗಿನ ಗರಿಗಳ ಮೂಲಕ ವಿವಿಧ ಕಲಾಕೃತಿಗಳನ್ನು ರಚಿಸಲು ತಿಳಿಸಿಕೊಟ್ಟರು. ಶ್ರೀರವಿಪ್ರಸಾದ್ ಆಚಾರ್ ಕಲಾಚಿತ್ತಾರದ ಬಗ್ಗೆ ತಿಳಿಸಿದರೆ ಶ್ರೀಮತಿ ನಾಗರತ್ನ ಹರ‍್ಳೆ ಸ್ಥಿರಚಿತ್ತದ ಚಿತ್ತಾರವೆಂಬ ಶರ‍್ಷಿಕೆಯಡಿಯಲ್ಲಿ ತಿಳಿಸಿಕೊಟ್ಟರು. ಶ್ರೀ ನರೇಂದ್ರ ಎಸ್. ಗಂಗೊಳ್ಳಿಯವರು ಬರಹ ಬಂಧದ ವಿಚಾರಗಳನ್ನು ತಿಳಿಸಿದರೆ, ಶ್ರೀ ಬೈಂದೂರು ಚಂದ್ರಶೇಖರ ನಾವುಡರು ಸೃಜನಾತ್ಮಕ ಬರವಣಿಗೆಯನ್ನು ಪರಿಚಯಿಸಿದರು. ಶ್ರೀ ರಾಘವೇಂದ್ರ ಕೊಡ್ಲಾಡಿಯವರು ತರಕಾರಿಗಳಲ್ಲಿ ಕಲೆಯನ್ನು ಅರಳಿಸಲು ತಿಳಿಸಿದರೆ, ಶ್ರೀ ವಿನಯಚಂದ್ರರು ಬೀಜದುಂಡೆಗಳ ರಚನೆಯನ್ನು ತಿಳಿಸಿದರು. ಶ್ರೀಮತಿ ಯಶೋಧಾರವರು ವಿವಿಧ ಬಗೆಯ ಹೂಬುಟ್ಟಿ ತಯಾರಿಕೆಯನ್ನು ಮಕ್ಕಳಿಗೆ ತಿಳಿಸಿಕೊಟ್ಟರೆ ಕುಮಾರಿ ವೈಷ್ಣವಿ ಮೆಹಂದಿ ಹಚ್ಚುವ ಕಲೆಗಳನ್ನು ತಿಳಿಸಿಕೊಟ್ಟರು. ಶ್ರೀಮತಿ ಲತಾಡಿ.ಶೆಟ್ಟಿ ಹೂಗುಚ್ಚ ತಯಾರಿಕೆಯನ್ನು ತಿಳಿಸಿ ಕೊಟ್ಟರೆ, ಶ್ರೀಮತಿ ವನಿತಾಶೆಟ್ಟಿಯವರು ಏಕಪಾತ್ರಾಭಿನಯಗಳ ಮೂಲಕ ಅದನ್ನು ನಡೆಸುವ ಕಲೆಗಳನ್ನು ತಿಳಿಸಿಕೊಟ್ಟರು. ಶ್ರೀಮತಿ ಸವಿತಾ ರ‍್ಮಾಳ್ ವ್ಯಕ್ತಿತ್ವವಿಕಸನದ ಮರ‍್ಗರ‍್ಶನ ನೀಡಿದರೆ, ಕುಮಾರಿ ಶಾಂಭವಿಕಾ. ಶ್ರೀ. ಭತ್ತದಿಂದ ವಿವಿಧ ಕಲಾಕೃತಿ ರಚನೆಯನ್ನು ಮಕ್ಕಳಿಗೆ ಬೋಧಿಸಿ, ಮಾಡಿಸಿದರು. ಶ್ರೀಮತಿ ವೀಣಾಪಿ. ಶ್ಯಾನುಭೋಗ್- ಸ್ಮರಣಶಕ್ತಿಯನ್ನು ವೃದ್ಧಿಸಿಕೊಳ್ಳುವ ವಿವಿಧ ಆಟಗಳನ್ನು ಪರಿಚಯಿಸಿದರೆ, ಶ್ರೀಮತಿ ಸಹನಾ ಕೆ. ಹೆಬ್ಬಾರ್ ಬೆಂಕಿಬಳಸದೆ ಅಡುಗೆ ತಯಾರಿ ನಡೆಸಿ ಮಕ್ಕಳಿಗೆ ಸವಿರುಚಿಯ ಅನುಭವ ನೀಡಿದರು. ಕುಮಾರಿ ಪ್ರಗತಿ ಗಾಳಿಪಟ ತಯಾರಿಕೆಯ ಮಾಹಿತಿ ನೀಡಿದರೆ, ಶ್ರೀಮತಿ ಸುಮತಿ ಕಾಮತ್ ಸಿ. ಡಿ. ಮೂಲಕ ವಾಲ್ ಹ್ಯಾಂಗಿಂಗ್ ತಯಾರಿಕೆಯನ್ನು ತಿಳಿಸಿಕೊಟ್ಟರು. ಶ್ರೀಮತಿ ಉಷಾ ಕೆ. ಕೀಬಂಚ್ ತಯಾರಿಕೆಯ ಬಗ್ಗೆ ತಿಳಿಸಿಕೊಟ್ಟರೆ ಕುಮಾರಿ ತನುಶ್ರೀ ಬಿ. ವಾಲ್ ಕೀ ಹೋಲ್ಡರ್ ಬಗ್ಗೆ ಮಕ್ಕಳಿಗೆ ತಿಳಿಸಿದರು. ಕುಮಾರಿ ಪೃಥ್ವಿ ಶೆಟ್ಟಿಯವರು ಮಂಡಲ ಕಲೆ ಬಗ್ಗೆ ತಿಳಿಸಿದರೆ, ಶ್ರೀಮತಿ ಸುರೇಖಾ ಭಟ್ ವಿವಿಧ ರಂಗೋಲಿಗಳ ರಚನೆಯನ್ನು ತಿಳಿಸಿದರು. ಶ್ರೀಮತಿ ಪ್ರಿಯಾ ಕಾಮತ್ ಕ್ರಾಫ್ಟ್ ಬಗ್ಗೆ ತಿಳಿಸಿದರೆ ಶ್ರೀಮತಿ ತಾರಕೇಶ್ವರಿ ತೆಂಗಿನ ಚಿಪ್ಪಿನಿಂದ ವಿವಿಧ ಕಲಾಕೃತಿಗಳ ರಚನೆಯನ್ನು ಪರಿಚಯಿಸಿದರು. ಶ್ರೀಮತಿ ಜ್ಯೋತಿ ಶೇಟ್ ಪೇಪರ್ ರ‍್ಟ್ ಬಗ್ಗೆ ತಿಳಿಸಿದರೆ, ಶ್ರೀಮತಿ ಜ್ಯೋತಿ ಪ್ರಶಾಂತ್ ಜೀವನ ಕೌಶಲ್ಯಗಳ ಬಗ್ಗೆ ಮಾಹಿತಿ ನೀಡಿದರು. ಶ್ರೀಮತಿ ವಂದನಾಕೃಷ್ಣ ಮ್ಯಾಕ್ರೇಮ್ ಬಗ್ಗೆ ಮಾಹಿತಿ ನೀಡಿದರೆ, ಕುಮಾರಿ ಚಿನ್ಮಯಿ ಶೆಟ್ಟಿ ಡ್ರೀಮ್ ಕ್ಯಾಪ್ಚರ್ ಬಗ್ಗೆ ತಿಳಿಸಿದರು. ಶ್ರೀ ರಾಜಶೇಖರ ತಾಳಿಕೋಟೆಯವರು ವಿವಿಧ ಮುಖವಾಡ ತಯಾರಿಕೆಯ ಬಗ್ಗೆ ತಿಳಿಸಿದರೆ, ಶ್ರೀ ವೇಣುಗೋಪಾಲ ಶೆಟ್ಟಿ ಲ್ಯಾಂಡ್ ಸ್ಕೇಪ್ ಬಗ್ಗೆ ತಿಳಿಸಿದರು. ಶ್ರೀ ಉದಯ ನಾಯ್ಕ ಇವರು ಭಾಷಣ ಕಲೆಯ ಬಗ್ಗೆ ತಿಳಿಸಿದರೆ, ಶ್ರೀ ಶ್ರೀನಿವಾಸರು ಬರವಣಿಗೆಯನ್ನು ತಿಳಿಸಿಕೊಟ್ಟರೆ, ಶ್ರೀ ಮಂಜುನಾಥ ದೇವಾಡಿಗರು ಬಲೂನ್ ರ‍್ಟ್ ಬಗ್ಗೆ ತಿಳಿಸಿದರು. ಶ್ರೀಮತಿ ಪರ‍್ಣಿಮಾರವರು ಆಡುತ ಪದ್ಯವ ಹೆಣೆಯೋಣ ಎನ್ನುತ್ತಾ ಪದ್ಯ ರಚನೆಯ ಕೌಶಲಗಳನ್ನು ತಿಳಿಸಿಕೊಟ್ಟರು. ಶ್ರೀಮತಿ ಮಾಲಿನಿ ಎಂ. ಪಿ. ಹಾಡು-ಪಾಡುಗಳ ಬಗ್ಗೆ ತಿಳಿಸಿಕೊಟ್ಟರೆ ಶ್ರೀ ದೇವರಾಜ ಬಿ. ಮತ್ತು ಶ್ರೀ ನಾಗರ‍್ಜುನ ನಾಯ್ಕ ಇವರು ದೈನಂದಿನ ಜೀವನದಲ್ಲಿ ವಿಜ್ಞಾನ ವೆಂಬ ವಿಷಯದಲ್ಲಿ ಮಾಹಿತಿ ನೀಡಿದರು. ರಮೇಶ್ ರೆಬಿನಾಳ್ ರವರು ಬಣ್ಣದಲೋಕದಲ್ಲಿ ಪುಟಾಣಿಗಳನ್ನು ತೇಲಿಸಿದರೆ ಬೇಬಿ. ಎಸ್. ನಾಯಕ್ ರವರು ಪೇಪರ್ ಗೊಂಬೆಗಳ ತಯಾರಿಕೆಯನ್ನು ತಿಳಿಸಿದರು.
ಈ ಸಂರ‍್ಭದಲ್ಲಿ ಶ್ರೀ ರವಿಪ್ರಸಾದ್ ಆಚಾರ್ ತಮ್ಮ ಯಕ್ಷಗಾನ ಕಲಾಕೃತಿಯನ್ನು ಸಂಸ್ಥೆಗೆ ಹಸ್ತಾಂತರಿಸಿದರು. ಶಾಲಾ ಆಡಳಿತಾಧಿಕಾರಿ ವೀಣಾ ರಶ್ಮೀ ಎಂ, ಪ್ರಾಥಮಿಕ ಶಾಲಾ ಮುಖ್ಯ ಶಿಕ್ಷಕಿ ಸುಜಾತ ಸದಾರಾಮ್, ಶಿಕ್ಷಕ-ಶಿಕ್ಷಕೇತರ ವೃಂದ ಮತ್ತು ವಿದ್ಯರ‍್ಥಿಗಳು ಉದ್ಘಾಟನಾ ಸಮಾರಂಭದಲ್ಲಿ ಉಪಸ್ಥಿತರಿದ್ದರು. ಉಪ ಪ್ರಾಂಶುಪಾಲರಾದ ರಾಮ ದೇವಾಡಿಗ ರ‍್ರನ್ನು ಸ್ವಾಗತಿಸಿ, ಕರ‍್ಯಕ್ರಮ ನಿರೂಪಿಸಿದರು.

error: