April 28, 2024

Bhavana Tv

Its Your Channel

ಶ್ರೀ ಸಿದ್ಧಿವಿನಾಯಕ ವಸತಿ ಶಾಲೆ, ಹಟ್ಟಿಯಂಗಡಿಯಲ್ಲಿ77ನೇ ಸ್ವಾತಂತ್ರ‍್ಯ ದಿನದ ಸಂಭ್ರಮಾಚರಣೆ

ವಿದ್ಯಾರ್ಥಿಗಳಲ್ಲಿ ದೇಶಭಕ್ತಿ, ದೇಶದ ಬಗ್ಗೆ ಅಭಿಮಾನ ಮೂಡಿಸುತ್ತಾ, ಸಮಾಜಕ್ಕೆ ಉತ್ತಮ ಭಾರತೀಯರನ್ನು ನೀಡಬೇಕೆಂಬ ಹಂಬಲದಿAದ ಕಾರ್ಯಕ್ರಮಗಳನ್ನು ಆಯೋಜಿಸುತ್ತಿರುವ ಶ್ರೀ ಸಿದ್ಧಿವಿನಾಯಕ ವಸತಿ ಶಾಲೆ, ಹಟ್ಟಿಯಂಗಡಿಯಲ್ಲಿ ದಿನಾಂಕ 15-08-2023 ರಂದು ಸ್ವಾತಂತ್ರ‍್ಯದಿನವನ್ನು ಸಂಭ್ರಮದಿAದ ಆಚರಿಸಲಾಯಿತು.
ಶ್ರೀ ಸಿದ್ಧಿ ಶೈಕ್ಷಣಿಕ ಪ್ರತಿಷ್ಠಾನದ ಕಾರ್ಯದರ್ಶಿಗಳೂ, ಪ್ರಾಂಶುಪಾಲರೂ ಆದ ಶರಣ ಕುಮಾರ ಇವರ ಅಧ್ಯಕ್ಷತೆಯಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ದೇಶವೇ ಶ್ರೇಷ್ಠ. ಅದನ್ನು ಕಾಯುವ ಸೈನಿಕ ನಮ್ಮ ಹೆಮ್ಮೆ. ಎಂಬ ಧ್ಯೇಯದೊಂದಿಗೆ ನಮ್ಮ ತಾಯಿನಾಡಿನಲ್ಲಿರುವ ಕೇಂದ್ರೀಯ ಮೀಸಲು ಪೋಲೀಸ್ ಪಡೆಯ ಯೋಧರಾದ ನಾಗರಾಜ ದೇವಾಡಿಗರನ್ನು ಆದರದಿಂದ ಬರಮಾಡಿಕೊಂಡು ಅವರಿಂದ ಧ್ವಜಾರೋಹಣವನ್ನು ನಡೆಸಲಾಯಿತು.
ಸಾಕ್ಷರರ ದೇಶವೆಂಬ ಹೆಮ್ಮೆ ನಮ್ಮಲ್ಲಿ ಸದಾ ಉಳಿಯಬೇಕಾದರೆ ವಿದ್ಯಾರ್ಥಿಗಳು ವಿದ್ಯಾಭ್ಯಾಸವನ್ನು ಉತ್ತಮವಾಗಿ ನಡೆಸಬೇಕು. ತಂದೆ ತಾಯಿಯನ್ನು ಗೌರವಿಸುವಂತೆ ದೇಶವನ್ನೂ ಗೌರವಿಸಬೇಕು. ಪ್ರತಿಯೊಬ್ಬ ಪ್ರಜೆಯೂ ತನ್ನ ಹಿತವನ್ನು ದೇಶದ ಹಿತದಲ್ಲಿ ಕಾಣಬೇಕು. ದೇಶ ವಿರೋಧಿ ಸಂಘಟನೆಗಳಿ0ದ ದೂರ ಉಳಿಯಬೇಕು. ಮಹಾಭಾರತದಲ್ಲಿ ಅರ್ಜುನನಿಗೆ ಶ್ರೀ ಕೃಷ್ಣನಂತೆ ಮುಂದೆ ದೇಶ ನಡೆಸತಕ್ಕ ಈ ವಿದ್ಯಾರ್ಥಿ ವೃಂದದವರಿಗೆ ಸನ್ಮಾರ್ಗದರ್ಶನ ಸಿಗುವಂತಾಗಬೇಕು. ಎಂದು ಮಕ್ಕಳಿಗೆ ಮನಮುಟ್ಟುವಂತೆ ಮಾರ್ಗದರ್ಶನವಿತ್ತರು.
ಈ ಸಂದರ್ಭದಲ್ಲಿ ಶಾಲಾ ವಾರ್ಷಿಕ ಸಂಚಿಕೆಯಾದ ಜ್ಯೋತಿಷ್ಮತಿಯನ್ನು ಬಿಡುಗಡೆ ಮಾಡಲಾಯಿತು. ಜ್ಯೋತಿಷ್ಮತಿ ಸಂಚಿಕೆಯ ಸಂಪಾದಕ ಮಂಡಲಿಯ ಶ್ರೀಮಧು ಕೆ.ಎಲ್. ಇವರು ಸಂಚಿಕೆಯ ವಿಶೇಷತೆಯನ್ನು ತಿಳಿಸಿದರು.
ಈ ಕಾರ್ಯಕ್ರಮದಲ್ಲಿ ಶಾಲಾ ಆಡಳಿತಾಧಿಕಾರಿ ಶ್ರೀಮತೀ ವೀಣಾ ರಶ್ಮಿ ಎಮ್., ಉಪಪ್ರಾಂಶುಪಾಲರಾದ ರಾಮ ದೇವಾಡಿಗ, ಪ್ರಾಥಮಿಕ ಶಾಲಾ ಮುಖ್ಯೋಪಾಧ್ಯಾಯಿನಿ ಸುಜಾತಾ ಸದಾರಾಮ್, ಶಿಕ್ಷಕ ಶಿಕ್ಷಕೇತರ ವೃಂದ ಹಾಗೂ ವಿದ್ಯಾರ್ಥಿಗಳು ಧ್ವಜವಂದನೆ, ಪಥಸಂಚಲನ, ರಾಷ್ಟ್ರಭಕ್ತಿಯ ಗೀತೆಗಳ ಗಾಯನವನ್ನು ನಡೆಸಿದರು. ವಿದ್ಯಾರ್ಥಿಯಾದ ನೈಮಿಷ ಉಡುಪ ಸ್ವಾಗತಿಸಿದರೆ, ಭಕ್ತಿ ರಾವ್ ಧನ್ಯವಾದ ಸಮರ್ಪಿಸಿದಳು. ವಿದ್ಯಾರ್ಥಿ ದೀಪಕ್ ಎಮ್. ಎಸ್. ಕಾರ್ಯಕ್ರಮವನ್ನು ನಿರೂಪಿಸಿದನು.

error: