April 27, 2024

Bhavana Tv

Its Your Channel

ಶ್ರೀ ಸಿದ್ಧಿವಿನಾಯಕ ವಸತಿ ಶಾಲೆ, ಹಟ್ಟಿಅಂಗಡಿಗೆ, ಶ್ರೀ ಶ್ರೀ ರಾಘವೇಶ್ವರ ಭಾರತೀ ಸ್ವಾಮೀಜಿಗಳ ಭೇಟಿ

ಹಟ್ಟಿಅಂಗಡಿ ; ಶ್ರೀ ಸಿದ್ಧಿವಿನಾಯಕ ವಸತಿ ಶಾಲೆ, ಹಟ್ಟಿಅಂಗಡಿಗೆ ದಿನಾಂಕ – ೧೬-೦೩-೨೦೨೪ ರಂದು ಶ್ರೀ ಶ್ರೀ ರಾಘವೇಶ್ವರ ಭಾರತೀ ಸ್ವಾಮಿಗಳು ರಾಮಚಂದ್ರಾಪುರ ಮಠ ಭೇಟಿ ನೀಡಿ, ಶಾಲೆಯ ಕಣಾದವನ, ಮತಂಗವನ, ಶೃಂಗವನ, ಶಿಬಿವನಗಳನ್ನು ವೀಕ್ಷಿಸಿ, ಶಾಲೆಯ ಅಭಿವೃದ್ಧಿಯನ್ನು ನೋಡಿ ಹರ್ಷವನ್ನು ವ್ಯಕ್ತಪಡಿಸಿದರು.
ಈ ಸುಸಮಯದಲ್ಲಿ ವಿದ್ಯಾರ್ಥಿಗಳು ಭಜನೆಗಳನ್ನು ಹಾಡಿ ಶ್ರೀಗಳನ್ನು ಸಂತೋಷಪಡಿಸಿದರು. ಶ್ರೀ ಸಿದ್ಧಿ ಶೈಕ್ಷಣಿಕ ಪ್ರತಿಷ್ಠಾನದ ಕಾರ್ಯದರ್ಶಿಗಳು, ಶಾಲಾ ಪ್ರಾಂಶುಪಾಲರೂ ಆದ ಶರಣ ಕುಮಾರ ತುಳಸಿ ಮತ್ತು ಸ್ಫಟಿಕದ ಮಾಲೆ ಫಲವಸ್ತçಗಳನ್ನು ಸಮರ್ಪಿಸಿ, ಶ್ರೀಗಳ ಆಶೀರ್ವಾದಗಳನ್ನು ಕೇಳಿಕೊಂಡರು. ಶ್ರೀ ಗಳು “ಸಂಸ್ಥೆಯು ಉತ್ಕರ್ಷತೆಯನ್ನು ಹೊಂದಲಿ” ಎಂದು ಆಶೀರ್ವದಿಸಿದರು.
ಈ ಸಮಯದಲ್ಲಿ ಆಡಳಿತಾಧಿಕಾರಿ ಶ್ರೀಮತಿ ವೀಣಾರಶ್ಮಿ ಎಮ್., ಉಪಪ್ರಾಂಶುಪಾಲರಾದ ರಾಮ ದೇವಾಡಿಗ, ಶಿಕ್ಷಕರು, ಶಿಕ್ಷಕೇತರ ವೃಂದದವರೂ ಉಪಸ್ಥಿತರಿದ್ದು ಶ್ರೀಗಳಿಂದ ಆಶೀರ್ವಾದ-ಮಂತ್ರಾಕ್ಷತೆಯನ್ನು ಸ್ವೀಕರಿಸಿದರು.

error: