May 19, 2024

Bhavana Tv

Its Your Channel

ಹಣ್ಣಿನಂಗಡಿಗೆ ಆಕಸ್ಮಿಕ ಬೆಂಕಿ

ಭಟ್ಕಳ : ಪಟ್ಟಣದ ಮುಖ್ಯರಸ್ತೆ ಬದಿಯ ಹಣ್ಣಿನಂಗಡಿಗೆ ಆಕಸ್ಮಿಕ ಬೆಂಕಿ ಬಿದ್ದ ಘಟನೆ ರಾತ್ರಿ ಸಂಭವಿಸಿದೆ.

ಅರ್ಬನ್ ಬ್ಯಾಂಕ್ ಎದುರಿಗಿರುವ ಗುಳ್ಮಿಯ ಮೆಹಬೂಬ್ ಅಲಿ ಎಂಬುವವರಿಗೆ ಸೇರಿದ ಹಣ್ಣಿನಂಗಡಿಯಾಗಿದೆ. ರಾತ್ರಿ ಸೊಳ್ಳೆ ಕಾಟ ತಪ್ಪಿಸಲು ಬತ್ತಿಯನ್ನ ಹಚ್ಚಿದ್ದರೆನ್ನಲಾಗಿದೆ. ಈ ವೇಳೆ ಅಂಗಡಿಯ ತಾಡಪತ್ರಿಗೆ ಬೆಂಕಿ ತಗುಲಿದ್ದರಿಂದ ಇಡೀ ಅಂಗಡಿಗೆ ಬೆಂಕಿ ಆವರಿಸಿಕೊಂಡಿದೆ. ಪರಿಣಾಮವಾಗಿ ಅಂಗಡಿಯಲ್ಲಿದ್ದ ವಿವಿಧ ತರಹದ ಹಣ್ಣು, ಹಣ್ಣಿನ ಬಾಕ್ಸ್ ಸುಟ್ಟು ಹೋಗಿದೆ.

ಅಗ್ನಿಶಾಮಕ ದಳ ಸಿಬ್ಬಂದಿಗಳು ಮತ್ತು ಹೆಸ್ಕಾಂ ಇಲಾಖೆ ಸಿಬ್ಬಂದಿಗಳು ಬೆಂಕಿ ನಂದಿಸುವ ಪ್ರಯತ್ನ ಮಾಡಿದರು. ಘಟನಾ ಸಂದರ್ಭದಲ್ಲಿ ಸಾರ್ವಜನಿಕರು ಕೂಡ ಅಳಿದುಳಿದ ಹಣ್ಣುಗಳನ್ನ ಆರಿಸುವಲ್ಲಿ ನೆರವಾದರು. ಅಗ್ನಿ ಅನಾಹುತದಲ್ಲಿ ಸಾವಿರಾರು ರೂಪಾಯಿ ಮೌಲ್ಯದ ಮಾಲುಗಳಿಗೆ ಹಾನಿಯಾಗಿವೆ

error: