ಹೊನ್ನಾವರ ; ತಾಲೂಕಿನ ಹಡಿನಬಾಳ ಪಂಚಾಯತ್ ಗುಂಡಬಾಳ ರಸ್ತೆಯಿಂದ ಹುಡಗೋಡು ರಸ್ತೆ ಕಾಂಕ್ರಿಟೀಕರಣ ಕಾಮಗಾರಿಗೆ ೫ ಲಕ್ಷ. ಹಾಡಗೇರಿ ನವಗ್ರಾಮ ಸೋನಾರಕೇರಿಗೆ ಹೋಗುವ ರಸ್ತೆಗೆ ೫ ಲಕ್ಷ. ಖರ್ವಾ ಪಂಚಾಯತ್ ಕೊಳಗದ್ದೆ ಗಣಪತಿ ದೇವಸ್ಥಾನದ ರಸ್ತೆ ಕಾಂಕ್ರಿಟೀಕರಣ ಕಾಮಗಾರಿಗೆ ೩೦ ಲಕ್ಷ. ಜಲವಳ್ಳಿ ಪಂಚಾಯತ್ ಹರಣಿಕೇರಿ ರಸ್ತೆ ಕಾಂಕ್ರೆಟೀಕರಣ ಕಾಮಗಾರಿಗೆ ೨೦ ಲಕ್ಷ. ಹೆರಂಗಡಿ ಪಂಚಾಯತ ಅಳ್ಳಂಕಿ ಹೈಸ್ಕೂಲಿನಿಂದ ಹರಿಜನಕೇರಿ ರಸ್ತೆ ಕಾಂಕ್ರೆಟೀಕರಣ ಕಾಮಗಾರಿಗೆ ೨೦ ಲಕ್ಷ ಒಟ್ಟೂ ೮೦ ಲಕ್ಷ ವೆಚ್ಚದ ಕಾಮಗಾರಿಗೆ ಭಟ್ಕಳ- ಹೊನ್ನಾವರ ವಿಧಾನಸಭಾ ಕ್ಷೇತ್ರದ ಶಾಸಕರಾದ ಸುನೀಲ್ ನಾಯ್ಕ ಗುದ್ದಲಿ ಪೂಜೆ ನೆರವೇರಿಸಿದರು.
ನಂತರ ಮಾದ್ಯಮದವರೋಂದಿಗೆ ಮಾತನಾಡಿದ ಭಟ್ಕಳ-ಹೊನ್ನಾವರ ವಿಧಾನ ಸಭಾ ಕ್ಷೇತ್ರದ ಶಾಸಕ ಸುನೀಲ ನಾಯ್ಕ ಇಂದು ಒಟ್ಟೂ ೮೦ ಲಕ್ಷದ ಕಾಮಗಾರಿಗೆ ಚಾಲನೆ ನೀಡಿದ್ದೆನೆ ನಾನು ಶಾಸಕನಾಗುವ ಪೂರ್ವದಲ್ಲಿ ಬಹುದಿನದ ಬೇಡಿಕೆಯಾಗಿತ್ತು ಅದನ್ನು ಇಡೆರಿಸಿದ್ದೆನೆ. ಶಿಕ್ಷಣಕ್ಕೆ ಮತ್ತು ರಸ್ತೆಗೆ ಮೋದಲ ಆದ್ಯತೆ ನೀಡುತ್ತಿದ್ದೆನೆ ಮುಂದಿನ ದಿನಗಲ್ಲಿ ನನ್ನ ಕ್ಷೇತ್ರದ ಎಲ್ಲಾ ರಸ್ತೆಯ ಪೂರ್ಣಗೋಳಿಸುವ ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಬಿಜೆಪಿ ತಾಲೂಕಾ ಪ್ರಧಾನ ಕಾರ್ಯದರ್ಶಿ ಮಂಜುನಾಥ ನಾಯ್ಕ ಗೇರುಸೋಪ್ಪಾ. ಒಬಿಸಿ ಮೋರ್ಚಾ ಜಿಲ್ಲಾ ಉಪಾಧ್ಯಕ್ಷ ಗಣಪತಿ ನಾಯ್ಕ ಬಿ ಟಿ. ತಾಲೂಕಾ ಯುವ ಮೋರ್ಚಾ ಅಧ್ಯಕ್ಷ ಸಚಿನ್ ಶೇಟ್. ತಾಲೂಕಾ ಪಂಚಾಯತ ಸದಸ್ಯ ಆರ್ ಪಿ ನಾಯ್ಕ. ಮುಖಂಡರುಗಳಾದ ಹರಿಯಪ್ಪ ನಾಯ್ಕ. ಮಾರುತಿ ಗೌಡ. ಅನಂತ ಹೆಬ್ಬಾರ. ಕಮಲಾಕರ ಆಚಾರಿ. ಜಯಂತ ನಾಯ್ಕ, ನಿಲಾವತಿ ನಾಯ್ಕ, ವಿಘ್ನೇಶ್ವರ ಹೆಗಡೆ. ನಾಗರಾಜ ಮೆಸ್ತ. ಗಣೇಶ ಹಳ್ಳೆರ. ಪ್ರದೀಪ ನಾಯ್ಕ. ವೆಂಕಟೇಶ ಪ್ರಭು. ರಮೇಶ ನಾಯ್ಕ ತುಂಭೋಳಿ. ಬಾಲಚಂದ್ರ ಗೌಡ. ಹರಿಶ್ಚಂದ್ರ ನಾಯ್ಕ ಮಾವಿನಕುರ್ವಾ. ಮುಂತಾದವರು ಇದ್ದರು.
More Stories
ನಾನು ಮಾಡಿದಷ್ಟು ಅಭಿವೃದ್ಧಿ ಕನಸಿನಲ್ಲೂ ಕಾಗೇರಿ ಮಾಡಿಲ್ಲ: ದೇಶಪಾಂಡೆ
ಉಳವಿಯಲ್ಲಿ ನಡೆದ ಕನ್ನಡ ಸಾಹಿತ್ಯ ಸಮ್ಮೇಳನದ ಲೆಕ್ಕಪತ್ರ ಮಂಡಿಸಿದ ಜಿಲ್ಲಾ ಕಸಾಪ
ಉಳವಿಯಲ್ಲಿ ಗಡಿ ಪ್ರಾಧಿಕಾರದಿಂದ ಸಾಂಸ್ಕೃತಿಕ ಸಂಭ್ರಮ