ಹೊನ್ನಾವರ; ಜಿಲ್ಲೆಯಾದ್ಯಂತ ಮಂಗಳವಾರ ಮತ್ತು ಶುಕ್ರವಾರ ಮಾತ್ರ ಅಂಗಡಿ ತೆರೆದಿರುತ್ತದೆ ಮತ್ತೆ ಊಳಿದ ೫ ದಿನ ಲಾಕ್ ಡೌನ್ ಇರುತ್ತದೆ ಎಂಬ ಆದೇಶಕ್ಕೆ, ಇಂದು ಮಂಗಳವಾರ ಪಟ್ಟಣದ ತುಂಬೆಲ್ಲಾ ಕರೋನಾ ಸೋಂಕಿನ ಭಯವಿಲ್ಲದೆ ಗುಂಪು ಗುಂಪಾಗಿ ಜನರು ಒಡಾಟ ಪ್ರಾರಂಭಿಸಿದ್ದು ಕಂಡು ಬಂತು, ವಾಹನ ದಟ್ಟಣೆಯುಂದ ಮಾರ್ಕೆಟ್ ರೋಡ್ ಟ್ರಾಪಿಕ್ ಜಾಮ್ ಆದಂತಿತ್ತಿ, ಪೋಲೀಸರು ಸಾರ್ವಜನಿಕರನ್ನು ಹಾಗೂ ವಾಹನಗಳನ್ನು ತಡೆಯಲು ಹರ ಸಾಹಸ ಮಾಡುತ್ತಿದ್ದು ಜನ ಪೋಲೀಸರಿಗೂ ಡೋಟ್ ಕೇರ್ ಎಂಬAತೆ ಸಂಚರಿಸುತ್ತಲೇ ಇದ್ದರು. ಅದೇ ರೀತಿ ಅಂಗಡಿಗಳಲ್ಲು ಸಹ ಜನರು ಸಾಮಾಜಿಕ ಅಂತರ ಕಾಪಾಡದೆ ವ್ಯಾಪಾರ ವಹಿವಾಟಿನಲ್ಲಿ ತಲ್ಲಿನರಾಗಿದ್ದು ಕಂಡು ಬಂದಿತು. ಅಗತ್ಯ ವಸ್ತುಗಳನ್ನ ಕೊಂಡು ಕೊಳ್ಳಲು ಬೆಳಗ್ಗೆ ೬ ರಿಂದ ೧೦ ವರೆಗೆ ಮಾತ್ರ ಪ್ರತಿ ಮಂಗಳವಾರ ಮತ್ತು ಶುಕ್ರವಾರ ಅವಕಾಶ ನೀಡಲಾಗಿದೆ. ಈ ರೀತಿ ಜನಜಂಗುಳಿಯಿAದ ಕೋರೊನಾ ಇಳಿಮುಖವಾಗುವ ಲಕ್ಷಣ ಕಣ್ಮರೆಯಾಗುತ್ತಿದ್ದು ಇಂದಿನ ಜಂಗುಳಿಯಿAದ ತಾಲೂಕಾಡಳಿತಕ್ಕೆ ತಲೆ ಬಿಸಿಯಾಗಿದೆ. ಜನರು ತಾವು ಸ್ವತಃ ಲಾಕ್ ಡೌನ್ಗೆ ಸಹಕರಿಸಿ ಮಾಸ್ಕ, ಸಮಾಜಿಕ ಅಂತರ ಪಾಲಿಸಿದರೆ ಮುಂದೆ ನಮ್ಮ ಹಾಗೂ ಕುಟುಂಬದ ರಕ್ಷಣೆ ಆಗುವುದು ಎನ್ನುವುದನ್ನು ಮರೆಯಬಾರದಾಗಿದೆ.
More Stories
ನಾನು ಮಾಡಿದಷ್ಟು ಅಭಿವೃದ್ಧಿ ಕನಸಿನಲ್ಲೂ ಕಾಗೇರಿ ಮಾಡಿಲ್ಲ: ದೇಶಪಾಂಡೆ
ಉಳವಿಯಲ್ಲಿ ನಡೆದ ಕನ್ನಡ ಸಾಹಿತ್ಯ ಸಮ್ಮೇಳನದ ಲೆಕ್ಕಪತ್ರ ಮಂಡಿಸಿದ ಜಿಲ್ಲಾ ಕಸಾಪ
ಉಳವಿಯಲ್ಲಿ ಗಡಿ ಪ್ರಾಧಿಕಾರದಿಂದ ಸಾಂಸ್ಕೃತಿಕ ಸಂಭ್ರಮ