May 10, 2024

Bhavana Tv

Its Your Channel

ನಿರ್ಲಕ್ಷ್ಯ ತೋರಿಸಿದ ಸರ್ಕಾರಿ ಆಸ್ಪತ್ರೆಯ ವೈದ್ಯೆ, ಆರೋಪ

ಕುಮಟಾ : ಹೆಗಡೆಯಲ್ಲಿ ತಿಮ್ಮಪ್ಪ ಮುಕ್ರಿ ಮೃತಪಟ್ಟಿದ್ದು, ವಿಷಯವನ್ನು ಕುಮಟಾ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ ತಕ್ಷಣವೇ ಪಿ.ಎಸ್.ಐ ಆನಂದಮೂರ್ತಿ ಸಿಬ್ಬಂದಿಗಳ ಜೊತೆ ಸ್ಥಳ ಪರಿಶೀಲಿಸಿ, ಪಂಚನಾಮೆ ನಡೆಸಿ, ಶವವನ್ನು ಮರಣೋತ್ತರ ಪರೀಕ್ಷೆಗಾಗಿ ಸರ್ಕಾರಿ ಆಸ್ಪತ್ರೆಯ ಶವಾಗಾರಕ್ಕೆ ಸಾಗಿಸಿದ್ದಾರೆ.

ಆದರೂ ಬೆಳಿಗ್ಗೆಯಿಂದ ರಾತ್ರಿ ವರೆಗೂ ಕಾದರೂ ಮರಣೋತ್ತರ ಪರೀಕ್ಷೆ ನಡೆಸುವ ವೈದ್ಯೆ ಮಾತ್ರ ಆಗಮಿಸಿಲ್ಲ. ಸ್ಥಳೀಯ ಕೋಡ್ಕಣಿಯ ನಿವಾಸಿಯಾಗಿರುವ ವೈದ್ಯೆಯನ್ನು ಸಂಪರ್ಕಿಸಿ, ಬೆಳಿಗ್ಗೆಯೇ ಶವವನ್ನು ತಂದು ಇಡಲಾಗಿದೆ. ಸಂಜೆಯಾದರೂ ಮೃತದೇಹ ಕುಟುಂಬಸ್ಥರಿಗೆ ಹಸ್ತಾಂತರಿಕೆಯಾಗಿಲ್ಲ. ಆದಷ್ಟು ಶೀಘ್ರವಾಗಿ ಆಗಮಿಸಿ, ಶವದ ಮರಣೋತ್ತರ ಪರೀಕ್ಷೆ ನಡೆಸಿಕೊಡುವಂತೆ ವಿನಂತಿಸಿಕೊoಡರೂ, ನಿರ್ಲಕ್ಷ್ಯ ತೋರಿಸಿದ್ದಾರೆ ಎಂದು ಕುಟುಂಬಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಶಾಸಕರು ಗಮನಿಸ ಬೇಕೆಂದು ಪ್ರಜ್ಙಾವಂತ ನಾಗರಿಕರ ಆಗ್ರವಾಗಿದೆ.
ವರದಿ ; ನಟರಾಜ ಗದ್ದೆಮನೆ, ಕುಮಟಾ

error: