May 3, 2024

Bhavana Tv

Its Your Channel

ದಿ.ಬಾಸ್ಕರ ಭಟ್ಟ ಇವರು ಸ್ಮರಣಾರ್ಥ ಹಳವಳ್ಳಿಯಲ್ಲಿ ಕ್ರಿಕೆಟ್ ಪಂದ್ಯ ಆಯೋಜನೆ

ವರದಿ:ವೇಣುಗೋಪಾಲ ಮದ್ಗುಣಿ

ಅಂಕೋಲಾ : ರಾಜ್ಯ ಮಟ್ಟದ ಹವ್ಯಕ ಪಂದ್ಯಾವಳಿಯಲ್ಲಿ ಕೆಸಿಎಲ್ ಚಾಂಪಿಯನಪಟ್ಟ ತನ್ನದಾಗಿಸಿಕೊಂಡಿತು. ಅಂಕೋಲಾ ತಾಲೂಕಿನ ಹಳವಳ್ಳಿಯಲ್ಲಿ ದಿ. ಭಾಸ್ಕರ ಭಟ್ಟ ಸ್ಮರಣಾರ್ಥ ರಾಜ್ಯ ಮಟ್ಟದ ಹವ್ಯಕ ಸಮಾಜದ ಹವ್ಯಕ ಅಂಡರ್ ಆರ್ಮ್ ಪಂದ್ಯಾವಳಿ ನಡೆಸಲಾಯಿತು.ಇದರ ಪ್ರಾಯೋಜತ್ವವನ್ನು ರೂಪಾಲಿ ನಾಯ್ಕ ಶಾಸಕರು ಅಂಕೋಲಾ ಕಾರವಾರ ವಿಧಾನಸಭಾ ಕ್ಷೇತ್ರ ಇವರು ವಹಿಸಿದ್ದರು. ಹವ್ಯಕ ಕ್ರಿಕೆಟ್ ಅಸೋಸಿಯೇಷನ್ ಹಳವಳ್ಳಿ ಇವರ ಆಯೋಜನೆಯಲ್ಲಿ ಜರುಗಿತು.
ಬಹು ಮುಖದ ಪ್ರತಿಭೆಯ ಭಾಸ್ಕರ ಭಟ್ಟರು ಎಲ್ಲಾ ರಂಗದಲ್ಲುಆಸಕ್ತಿ ಹೊಂದಿದ್ದರು. ಕ್ರೀಡೆ ಅಂದರೆ ಅವರಿಗೆ ಅಚ್ಚುಮೆಚ್ಚು,ಕ್ರಿಕೆಟ್ ಲ್ಲಿ ಉತ್ತಮ ಆಟಗಾರರಾಗಿದ್ದರು,ಸ್ನೇಹ ಜೀವಿಗಳಾಗಿದ್ದರು.ಹಳವಳ್ಳಿ ಯಲ್ಲಿ ಮೊದಲಿನಿಂದಲೂ ಸಂಘಟನಾ ಶಕ್ತಿ ಇದೆ .ಯುವ ಮಿತ್ರರು ಮತ್ತೊಮ್ಮೆ ಅದನ್ನು ಸಾಬೀತು ಪಡಿಸಿದರು. ಶಾಸಕರ ಸಹಕಾರದಿಂದ ಇಲ್ಲಿ ಪಂದ್ಯ ನಡೆಸಲು ಸಾಧ್ಯವಾಯಿತು. ಹಿರಿಯ ಕ್ರೀಡಾಪಟುಗಳು,ಬ್ರಾಹ್ಮಣ ಮಹಾಸಭಾ ಜಿಲ್ಲಾ ಸದಸ್ಯರಾದ ಗೋಪಾಲಕೃಷ್ಣ ವೈದ್ಯರವರು ಉದ್ಘಾಟಿಸಿ ಮಾತನಾಡಿದರು.ಹವ್ಯಕ ಸಂಘದ ಪ್ರಧಾನ ಕಾರ್ಯದರ್ಶಿಗಳಾದ ವಿ ಬಿ ಭಟ್ಟ ಶೆವ್ಕಾರ ಮಾತನಾಡಿ ಹವ್ಯಕ ಸಮಾಜದ ಯುವಕರ ಪ್ರಯತ್ನ ಹಳವಳ್ಳಿ ಊರವರ ಸಹಕಾರದಿಂದ ಇಂತಹ ಕುಗ್ರಾಮದಲ್ಲೂ ಇಂತಹ ರಾಜ್ಯ ಮಟ್ಟ ಪಂದ್ಯಾವಳಿ ಆಯೋಜಿಸಿದ್ದು ಸಾಹಸವೇ ಸರಿ ಎಂದರು.ಶಾಲಾಭೀವೃದ್ದಿ ಸಮಿತಿಯ ಅಧ್ಯಕ್ಷರಾದ ದಿನಕರ ಹೆಬ್ಬಾರ ಮಾತನಾಡಿದರು.ಯುವಕ ಮಂಡಲದ ಅಧ್ಯಕ್ಷರಾದ ವಿಶ್ವನಾಥ ಹೆಬ್ಬಾರ.
ಗ್ರಾಮ ಪಂಚಾಯತ ಡೋಂಗ್ರಿ ಉಪಾಧ್ಯಕ್ಷರಾದ ಪುಟ್ಟು ಕನಕನಹಳ್ಳಿ ,ಸದಸ್ಯರಾದ ನಿತ್ಯಾನಂದ ಭಟ್ಟ ಹಳವಳ್ಳಿ. ರೇಣುಕಾ ಸಿದ್ದಿ.ಹವ್ಯಕ ಟ್ರಸ್ಟ್ ನ ಅಧ್ಯಕ್ಷರಾದ ಸದಾನಂದ ಭಟ್ಟ,ಯುವ ಮುಖಂಡರು ಕ್ರೀಡಾ ಪ್ರೋತ್ಸಾಹಕರಾದ ನಾರಾಯಣ ಹೆಗಡೆ.ನಾಗರಾಜ ಹೆಗಡೆ ಕೊಡ್ಲಗದ್ದೆ
ವೇದಿಕೆ ಮೇಲೆ ಉಪಸ್ಥಿತರಿದ್ದರು.ಇದೆ ಸಂದರ್ಭದಲ್ಲಿ ಬಾನಂಗಳದಲ್ಲಿ ಪಟಾಕಿಗಳ ಚಿತ್ತಾರ ಮೊಳಗಿತು.
ಕೆ ಸಿ ಎಲ್ ಕಾನಗೋಡ ಚಾಂಪಿಯನ
ಸAಜೆ 5 ಗಂಟೆಯಿAದ ಪ್ರಾರಂಭವಾದ ಪಂದ್ಯಾವಳಿಯಲ್ಲಿ ವಿವಿಧ ಭಾಗಗಳಿಂದ 16 ಹವ್ಯಕ ತಂಡಗಳು ಭಾಗವಹಿಸಿದ್ದವು. ರೋಚಕ ಪೈನಲ್ ಪಂದ್ಯದಲ್ಲಿ ಆತಿಥೇಯ ಟೀಮ್ ಹಳವಳ್ಳಿ ತಂಡವನ್ನು 2 ರನ್ ಗಳಿಂದ ಮಣಿಸಿ ಕೆ ಸಿ ಎಲ್ ಕಾನ್ಗೋಡು ತಂಡ ವಿಜಯಶಾಲಿಯಾಗಿ ಹೊರ ಹೊಮ್ಮಿತು .ಕೆ ಸಿ ಎಲ್ ತಂಡದ ಮಹೇಶ ಸರಣಿ ಶ್ರೇಷ್ಠರಾಗಿ ,ಅದೇ ತಂಡದ ಗುರುಪ್ರಸಾದ ಉತ್ತಮ ದಾಂಡಿಗನಾಗಿಯೂ ಹಳವಳ್ಳಿ ತಂಡದ ವಿನಯ್ ಹೆಬ್ಬಾರ ಉತ್ತಮ ಎಸೆತಗಾರನಾಗೀಯೂ ,ಅದೇ ತಂಡದ ಹರ್ಷಮಾಣಿ ಉತ್ತಮ ಕ್ಷೇತ್ರ ರಕ್ಷಕರಾಗಿ ಹೊರಹೊಮ್ಮಿದರು.
ಹಿರಿಯ ಸಾಮಾಜಿಕ ಕಾರ್ಯಕರ್ತರಾದ ನಾರಾಯಣ ಹೆಬ್ಬಾರ,ಕ್ರೀಡಾ ಪ್ರೋತ್ಸಾಹಕರಾದ ಎಸ್ ಎಂ ಹೆಗಡೆ ಹಳವಳ್ಳಿ, ದಾಮೋದರ ಹೆಬ್ಬಾರ ,ನಿತ್ಯಾನಂದ ಭಟ್ಟ ಬಹುಮಾನ ವಿತರಣೆಯನ್ನು ನಡೆಸಿಕೊಟ್ಟರು.

error: