May 18, 2024

Bhavana Tv

Its Your Channel

ಹೆಡ್ ಕಾನ್ಸ್ಟೇಬಲ್ ನಾರಾಯಣ್ ನಾಯ್ಕ ನಿಧನ.

ಭಟ್ಕಳ: ತಾಲ್ಲೂಕಿನ ನಗರ ಠಾಣೆಯ ಹೆಡ್ ಕಾನ್ಸ್ಟೇಬಲ್ ನಾರಾಯಣ್ ನಾಯ್ಕ (೪೩) ಅವರು ಶನಿವಾರ ಮಂಗಳೂರಿನ ಖಾಸಗಿ ಆಸ್ಪತ್ರೆಯೊಂದರಲ್ಲಿ ನಿಧನರಾಗಿದ್ದಾರೆ.
ಮೂಲತ ಕುಮಟಾ ಚಿತ್ರಗಿಯವರಾಗಿದ್ದ ನಾರಾಯಣ ನಾಯ್ಕ ಅವರು ಭಟ್ಕಳ ತಾಲೂಕಿನ ವಾಸವಿದ್ದರು. ಕಳೆದ ೮ ವರ್ಷಗಳಿಂದ ಭಟ್ಕಳ ನಗರ ಠಾಣೆಯಲ್ಲಿ ಹೆಡ್ ಕಾನ್ಸ್ಟೇಬಲ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದ ಅವರು ಕೆಲವು ತಿಂಗಳ ಹಿಂದೆ ಅನಾರೋಗ್ಯ ಕ್ಕೊಳಗಾಗಿದ್ದರು, ಅವರನ್ನು ಇತ್ತೀಚೆಗೆ ಚಿಕಿತ್ಸೆಗಾಗಿ ಮಂಗಳೂರಿನ ಕೆ.ಎಸ್.ಹೆಗಡೆ ಆಸ್ಪತ್ರೆಗೆ ದಾಖಲಿಸಲಾಗಿತ್ತು ಆದರೆ ಚಿಕಿತ್ಸೆ ಫಲಿಸದೇ ಕೊನೆಯುಸಿರೆಳೆದಿದ್ದಾರೆ.
ನಾರಾಯಣ್ ಅವರು ಶಿರಸಿ,ಮಂಕಿ,ಠಾಣೆಗಳಲ್ಲಿ ಈ ಹಿಂದೆ ಕರ್ತವ್ಯ ನಿರ್ವಹಿಸಿದ್ದರು ಎನ್ನಲಾಗಿದೆ
ಮೃತರು ಪತ್ನಿ ಹಾಗೂ ಪುತ್ರಿಯನ್ನು ಅಗಲಿದ್ದಾರೆ. ಡಿವೈಎಸ್ಪಿ ಕೆ.ಯು.ಬೆಳ್ಳಿಯಪ್ಪ ಸಿ.ಪಿ.ಐ ದಿವಾಕರ,ಪಿ.ಎಸ್.ಐ ಸುಮಾ ಬಿ, ಪಿ.ಎಸ್.ಐ ಹನುಮಂತಪ್ಪ ಕುಡಗುಂಟಿ, ಗ್ರಾಮೀಣ ಠಾಣೆ ಪಿ.ಎಸ್.ಐ ಭರತ್ ಸಂತಾಪ ಸೂಚಿಸಿದ್ದಾರೆ.

error: