ಭಟ್ಕಳ: ಕೋವಿಡ್ ನಿಯಮ ಪಾಲನೆ ಕುರಿತು ಪರಿಶೀಲಿಸಲು ಹೋಗಿದ್ದ ಮಾವಳ್ಳಿ-೨ರ ಗ್ರಾಮ ಲೆಕ್ಕಾಧಿಕಾರಿಗೆ ವ್ಯಕ್ತಿಯೊಬ್ಬ ಕೆನ್ನೆಗೆ ಹೊಡೆದು ಕರ್ತವ್ಯಕ್ಕೆ ಅಡ್ಡಿಪಡಿಸಿ ಜೀವ ಬೆದರಿಕೆ ಹಾಕಿದ ಬಗ್ಗೆ ಮುರ್ಡೇಶ್ವರ ಠಾಣೆಯಲ್ಲಿ ದೂರು ದಾಖಲಾಗಿದೆ.
ಸೆ. ೧೪ರಂದು ರಾತ್ರಿ ೭.೪೫ರ ಸುಮಾರಿಗೆ ಮುರ್ಡೇಶ್ವರ ಮೀನು ಮಾರುಕಟ್ಟೆ ಬಳಿ ಜನಜಗುಳಿ ಸೇರಿದ್ದು, ಕೋವಿಡ್ ನಿಯಮ ಪಾಲಿಸುತ್ತಿಲ್ಲ ಎಂಬ ಮಾಹಿತಿ ಬಂದಿದ್ದರಿoದ ನಾನು ಮತ್ತು ಕಂದಾಯ ನಿರೀಕ್ಷಕ ಶ್ರೀನಿವಾಸ ಆರ್ ಮಾಸ್ತಿ ಅವರು ಬೈಕ್ನಲ್ಲಿ ತೆರಳಿದೇವು. ದೀವಗಿರಿಯ ಸಚಿನ್ ನಾಯ್ಕ ರಸ್ತೆಯಲ್ಲಿ ವಾಹನ ನಿಲ್ಲಿಸಬೇಡಿ. ಬೇರೆಡೆ ನಿಲ್ಲಿಸಿ ಎಂದು ಕಂದಾಯ ನಿರೀಕ್ಷಕರ ಜತೆ ವಾಗ್ವಾದ ನಡೆಸಿದರು. ನಾನು ಆತನಿಗೆ ಮೇಲಧಿಕಾರಿಗಳ ಬಳಿ ಗೌರವದಿಂದ ಮಾತನಾಡಿ ಎಂದ ಹೇಳಲು ಹೋದಾಗ ಬೈಕ್ ಅಡ್ಡಗಟ್ಟಿ ಕೈಯಿಂದ ಹೊಡೆದಿದ್ದಾರೆ. ಪೊಲೀಸ್ ದೂರು ಕೊಟ್ಟರೆ ಜೀವ ತೆಗೆಯುವುದಾಗಿ ಬೆದರಿಕೆ ಹಾಕಿದ್ದಾನೆ ಎಂದು ದೂರಿನಲ್ಲಿ ತಿಳಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಮುರ್ಡೇಶ್ವರ ಪಿಎಸೈ ತನಿಖೆ ಕೈಗೊಂಡಿದ್ದಾರೆ.
More Stories
ಭಟ್ಕಳದ ಅಂಜುಮಾನ್ ಇಂಜಿನಿಯರಿAಗ್ ಕಾಲೇಜು ಗುಡ್ಡದ ಮೇಲಿನ ಸ್ವರ್ಗ – ಡಾ. ದಿನೇಶ್ ಗಾಂವ್ಕರ್
ಭಟ್ಕಳದ ಏಐಟಿಎಮ್ ನಲ್ಲಿ ಕ್ಯೂ ಸ್ಪೈಡರ್ಸ್ ನಿಂದ ಕ್ಯಾಂಪಸ್ ಸಂದರ್ಶನ
ವಿಶ್ವ ಭೂಮಿ ದಿನಾಚರಣೆಯನ್ನು ಹಿರಿಯ ಸಿವಿಲ್ ನ್ಯಾಯಾಧೀಶ ಕಾಂತ ಕುರಣಿ ಉದ್ಘಾಟಿಸಿದರು.