May 4, 2024

Bhavana Tv

Its Your Channel

ಮಾವಳ್ಳಿ-೨ರ ಗ್ರಾಮ ಲೆಕ್ಕಾಧಿಕಾರಿ ಮೇಲೆ ಹಲ್ಲೆ, ಜೀವಬೆದರಿಕೆ: ಮುರ್ಡೇಶ್ವರ ಠಾಣೆಯಲ್ಲಿ ದೂರು ದಾಖಲು

ಭಟ್ಕಳ: ಕೋವಿಡ್ ನಿಯಮ ಪಾಲನೆ ಕುರಿತು ಪರಿಶೀಲಿಸಲು ಹೋಗಿದ್ದ ಮಾವಳ್ಳಿ-೨ರ ಗ್ರಾಮ ಲೆಕ್ಕಾಧಿಕಾರಿಗೆ ವ್ಯಕ್ತಿಯೊಬ್ಬ ಕೆನ್ನೆಗೆ ಹೊಡೆದು ಕರ್ತವ್ಯಕ್ಕೆ ಅಡ್ಡಿಪಡಿಸಿ ಜೀವ ಬೆದರಿಕೆ ಹಾಕಿದ ಬಗ್ಗೆ ಮುರ್ಡೇಶ್ವರ ಠಾಣೆಯಲ್ಲಿ ದೂರು ದಾಖಲಾಗಿದೆ.
ಸೆ. ೧೪ರಂದು ರಾತ್ರಿ ೭.೪೫ರ ಸುಮಾರಿಗೆ ಮುರ್ಡೇಶ್ವರ ಮೀನು ಮಾರುಕಟ್ಟೆ ಬಳಿ ಜನಜಗುಳಿ ಸೇರಿದ್ದು, ಕೋವಿಡ್ ನಿಯಮ ಪಾಲಿಸುತ್ತಿಲ್ಲ ಎಂಬ ಮಾಹಿತಿ ಬಂದಿದ್ದರಿoದ ನಾನು ಮತ್ತು ಕಂದಾಯ ನಿರೀಕ್ಷಕ ಶ್ರೀನಿವಾಸ ಆರ್ ಮಾಸ್ತಿ ಅವರು ಬೈಕ್‌ನಲ್ಲಿ ತೆರಳಿದೇವು. ದೀವಗಿರಿಯ ಸಚಿನ್ ನಾಯ್ಕ ರಸ್ತೆಯಲ್ಲಿ ವಾಹನ ನಿಲ್ಲಿಸಬೇಡಿ. ಬೇರೆಡೆ ನಿಲ್ಲಿಸಿ ಎಂದು ಕಂದಾಯ ನಿರೀಕ್ಷಕರ ಜತೆ ವಾಗ್ವಾದ ನಡೆಸಿದರು. ನಾನು ಆತನಿಗೆ ಮೇಲಧಿಕಾರಿಗಳ ಬಳಿ ಗೌರವದಿಂದ ಮಾತನಾಡಿ ಎಂದ ಹೇಳಲು ಹೋದಾಗ ಬೈಕ್ ಅಡ್ಡಗಟ್ಟಿ ಕೈಯಿಂದ ಹೊಡೆದಿದ್ದಾರೆ. ಪೊಲೀಸ್ ದೂರು ಕೊಟ್ಟರೆ ಜೀವ ತೆಗೆಯುವುದಾಗಿ ಬೆದರಿಕೆ ಹಾಕಿದ್ದಾನೆ ಎಂದು ದೂರಿನಲ್ಲಿ ತಿಳಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಮುರ್ಡೇಶ್ವರ ಪಿಎಸೈ ತನಿಖೆ ಕೈಗೊಂಡಿದ್ದಾರೆ.

error: