May 13, 2024

Bhavana Tv

Its Your Channel

ಭಟ್ಕಳದಲ್ಲಿ `ಒಟ್ಟು’ ಮಲಯಾಳಂ ಚಲನಚಿತ್ರ ಚಿತ್ರೀಕರಣ

ಭಟ್ಕಳ: ಮಲೆಯಾಳಿ, ತಮಿಳು ಸೇರಿದಂತೆ ಬಹುಭಾಷಾ ತಾರೆ ಅರವಿಂದ ಸ್ವಾಮಿ ಅಭಿನಯದ “ಒಟ್ಟು” ಮಲಯಾಳಂ ಚಿತ್ರೀಕರಣ ಭಟ್ಕಳದ ಶಂಶುದ್ಧೀನ್ ಸರ್ಕಲ್, ಮುಖ್ಯ ರಸ್ತೆ, ಮೀನು ಮಾರುಕಟ್ಟೆಗಳಲ್ಲಿ ಒಂದು ದಿನದ ಚಿತ್ರೀಕರಣ ನಡೆಯಿತು.

ದೃಶ್ಯವೊಂದರಲ್ಲಿ ನಿಂತಿರುವ ಕಾರೊಂದರ ಹಿಂದುಗಡೆ ನಿಂತಿರುವ ಅರವಿಂದ ಸ್ವಾಮಿ ದೂರವಾಣಿಯಲ್ಲಿ ಮಾತನಾಡುತ್ತಾ ಭಟ್ಕಳ್, ಭಟ್ಕಳ್ ಎನ್ನುವ ದೃಶ್ಯವನ್ನು ಚಿತ್ರೀಕರಿಸಲಾಯಿತು. ಇನ್ನೊಂದು ದೃಶ್ಯದಲ್ಲಿ ನಗರದ ಹಳೇ ಪುರಸಭಾ ಕಟ್ಟಡದ ಒಳಗಿರುವ ತರಕಾರಿ ಮಾರುಕಟ್ಟೆಯೊಳಕ್ಕೆ ಹೋಗಿ ಹೊರ ಬರುವ ದೃಶ್ಯವಿದೆ. ಬಹುಬಾಷಾ ಹೀರೋ ಭಟ್ಕಳದಲ್ಲಿ ಬಂದಿರುವ ಸುದ್ದಿ ತಿಳಿಯುತ್ತಲೇ ಸಿನಿಮಾ ಪ್ರಿಯರು ನೂರಾರು ಸಂಖ್ಯೆಯಲ್ಲಿ ಜಮಾಯಿಸಿದ್ದು ಬೆಳಿಗ್ಗೆಯಿಂದ ಸಂಜೆಯ ತನಕವೂ ಕೂಡಾ ಅವರ ಹಿಂದೆ ಬಿದ್ದಿದ್ದ ಹಲವರು ಶೂಟಿಂಗ್ ಮುಗಿಯುವ ತನಕವೂ ಅಲ್ಲಿದ್ದು ಒಂದೊAದೇ ವಿಶ್ಲೇಷಣೆಯಲ್ಲಿ ತೊಡಗಿದ್ದರು.
ಚಿತ್ರೀಕರಣದ ವೇಳೆ ಕೆಮರಾ ಮೆನ್, ಸಹ ನಟರು, ಸಹಾಯಕರು ಸೇರಿದಂತೆ ೫೦ಕ್ಕೂ ಹೆಚ್ಚು ಜನರು ಬಂದಿದ್ದು ಚಿತ್ರೀಕರಣದ ಸ್ಥಳದಲ್ಲಿ ಜನರನ್ನು ನಿಯಂತ್ರಿಸುವುದು ಪೊಲೀಸರಿಗೆ ಸವಾಲಾಯಿತು. ಹಲರು ಕಡೆಗಳಲ್ಲಿ ಪೊಲೀಸರು ಜನರನ್ನು ನಿಯಂತ್ರಿಸುತ್ತಿರುವುದು ಕಂಡು ಬಂತು.
ಪ್ರಮುಖ ಮಲೆಯಾಳಿ ನಟ ಕುಂಚಾಕೋ ಬೋಬಾನ್, ನಟಿ ಈಶಾ ರೆಬ್ಬಾ ಕೂಡಾ ಹಾಜರಿದ್ದರು. ಎಸ್. ಸಂಜೀವ ಅವರ ಕಥೆಯನ್ನಾಧರಿಸಿ ಆಗಸ್ಟ್ ಸಿನೆಮಾಸ್ ಮತ್ತು ಸಿನಿ ಹಾಲಿಕ್ಸ ನಿರ್ಮಾಣದಡಿಯಲ್ಲಿ ಚಿತ್ರ ಮೂಡಿಬರುತ್ತಿದ್ದು ಪಿಲ್ಲಿನಿ ಟಿ.ಪಿ. ನಿರ್ದೇಶನದಲ್ಲಿ ಚಿತ್ರೀಕರಣ ನಡೆಯುತ್ತಿದೆ. ಆಹ್ ಖಾಸೀಫ್ ಸಂಗೀತ ನಿರ್ದೇಶಕರಾಗಿದ್ದು ಇದೇ ವರ್ಷ ಬಿಡುಗಡೆಯಾಗುವ ಸಾಧ್ಯತೆ ಇದೆ ಎನ್ನಲಾಗಿದೆ. ಒಟ್ಟಾರೆ ಕರೊನಾದ ನಂತರ ಭಟ್ಕಳದ ಸುತ್ತಮುತ್ತ ಚಿತ್ರೀಕರಣಗೊಂಡ ಮೊದಲ ಚಿತ್ರ ಇದಾಗಿದ್ದು ಜನರಲ್ಲಿ ಹೆಚ್ಚು ಕುತೂಹಲ ಮೂಡಲು ಕಾರಣವಾಗಿತ್ತು.

error: