April 29, 2024

Bhavana Tv

Its Your Channel

ಅಂದರ- ಬಾಹರ ಆಡುತ್ತಿದ್ದವರ ಬಂಧನ

ಭಟ್ಕಳ: ಇಸ್ಪೀಟ್ ಎಲೆ ಬಳಿಸಿ ಅಂದರ ಬಾಹರ ಆಡುತ್ತಿದ್ದ ನಾಲ್ವರನ್ನು ಗ್ರಾಮೀಣ ಠಾಣೆಯ ಪೊಲೀಸರು ಬಂಧಿಸಿ ಪ್ರಕರಣ ದಾಖಲಿಸಿಕೊಂಡ ಘಟನೆ ನಡೆದಿದೆ. ಶಿರಾಲಿಯ ತಟ್ಟಿಹಕ ಬ್ರಿಡ್ಜ್ ಹತ್ತಿರದ ಸಾರ್ವಜನಿಕ ಸ್ಥಳದಲ್ಲಿ ಶಿರಾಲಿಯ ತಟ್ಟಿಹಕ್ಕಿನ ಗೋಪಾಲ ವೆಂಕಟಯ್ಯ ದೇವಡಿಗ, ಗುಮ್ಮನಹಕ್ಕಲ್‌ನ ಮಂಜುನಾಥ ಮಾಸ್ತಪ್ಪ ನಾಯ್ಕ, ಸಾರದೊಳೆಯ ಸಣ್ಣಪ್ಪು ಕಂಚಿಗುAಡಿ ನಾಯ್ಕ, ನಾಗಪ್ಪ ನಾರಾಯಣ ನಾಯ್ಕ ಎನ್ನುವವರು ಇಸ್ಪೀಟ್ ಎಲೆ ಬಳಸಿ ಅಂದರೆ ಬಾಹರ ಆಡುತ್ತಿದ್ದಾಗ ಖಚಿತ ಮಾಹಿತಿಯ ಮೇರೆಗೆ ಗ್ರಾಮೀಣ ಠಾಣೆಯ ಕೈಂ ಪಿಎಸೈ ರತ್ನಾ ಸಂಕಪ್ಪ ಕುರಿ ಮತ್ತು ಸಿಬ್ಬಂದಿಗಳು ದಾಳಿ ನಡೆಸಿ ಆರೋಪಿತರಿಂದ ಇಸ್ಪೀಟ್ ಎಲೆಗಳು, ರೂ.೨೬೭೫೦ ವಶಪಡಿಸಿಕೊಂಡಿದ್ದಾರೆ.

error: