April 27, 2024

Bhavana Tv

Its Your Channel

ಭಟ್ಕಳ ಪುರಸಭೆಗೆ ಉರ್ದು ನಾಮಫಲಕ ಅಳವಡಿಸಿದನ್ನು ವಿರೋಧಿಸಿ ಕನ್ನಡ ಹಾಗೂ ಹಿಂದೂ ಸಂಘಟನೆಗಳು ಪುರಸಭೆ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ

ಭಟ್ಕಳ:ಇಲ್ಲಿನ ಪುರಸಭಾ ಕಾರ್ಯಾಲಯ ಎದುರು ಭಾಷಾ ವಿವಾದ ಭುಗಿಲೆದ್ದಿದ್ದು ಉರ್ದು ನಾಮಫಲಕ ಅಳವಡಿಸುವುದನ್ನು ವಿರೋಧಿಸಿ ಸೋಮವಾರ ಕನ್ನಡ ಹಾಗೂ ಹಿಂದೂ ಸಂಘಟನೆಗಳು ಪುರಸಭೆ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.


ಪುರಸಭೆ ಕಟ್ಟಡಕ್ಕೆ ಹೊಸದಾಗಿ ಬಣ್ಣ ಬಳಿದ ನಂತರ ಸೋಮವಾರ ಪುರಸಭೆ ಎದುರು ನಾಮಫಲ ಅಳವಡಿಸಲು ಗುತ್ತಿಗೆದಾರ ಸಿದ್ದತೆ ಮಾಡಿಕೊಂಡಿದ್ದರು. ಕನ್ನಡ, ಇಂಗ್ಲೀಷ ನಂತರ ಉರ್ದು ಭಾಷೆಯಲ್ಲಿ “ಪುರಸಭಾ ಕಾರ್ಯಾಲಯ ಭಟ್ಕಳ” ಎಂಬ ನಾಮಫಲಕವನ್ನು ಅಳವಡಿಸಲಾಗುತಿತ್ತು. ಇದನ್ನು ಗಮನಿಸಿದ ಕನ್ನಡಪರ ಹಾಗೂ ಹಿಂದೂ ಸಂಘಟನೆಯವರು ಉರ್ದು ನಾಮಫಲಕ ಅಳವಡಿಸದಂತೆ ಸ್ಥಳದಲ್ಲಿ ಗುಂಪು ಸೇರಿ ವಿರೋಧ ವ್ಯಕ್ತಪಡಿಸಿದರು. ಪೊಲೀಸರೆದುರೇ ಪ್ರತಿಭಟನಾಕಾರರು ಸ್ಥಳದಲ್ಲಿಯೇ ನಾಮಫಲಕ ತೆರವು ಮಾಡುವಂತೆ ಪಟ್ಟುಹಿಡಿದರು.
ಇದರಿಂದ ಕೆಲಕಾಲ ಸ್ಥಳದಲ್ಲಿ ಬಿಗುವಿನ ವಾತಾವರಣ ಸೃಷ್ಠಿಯಾಯಿತು. ಸ್ಥಳಕ್ಕೆ ಆಗಮಿಸಿದ ಪುರಸಭಾ ಅಧ್ಯಕ್ಷ ಪರ್ವೇಜ್ ಕಾಶೀಂಜೀ ಹಳೆಯ ಪುರಸಭೆ ಕಟ್ಟಡದಲ್ಲಿ ಪುರಸಭಾ ನಾಮಫಲಕವನ್ನು ಕನ್ನಡ, ಇಂಗ್ಲೀಷ ಹಾಗೂ ಉರ್ದು ಭಾಷೆಯಲ್ಲಿ ಬರೆಯಿಸಲಾಗಿತ್ತು. ಅದನ್ನೆ ಇಲ್ಲಿ ಅಳವಡಿಸಿದ್ದೇವೆ. ಹೊಸದಾಗಿ ನಾವು ಎನೂ ಬದಲಾವಣೆ ಮಾಡಿಲ್ಲ ಎಂದರು.
ಇದಕ್ಕೆ ಒಪ್ಪದ ಪ್ರತಿಭಟನಾಕಾರರು ಉರ್ದು ನಾಮಫಲಕ ತೆರವು ಮಾಡುವ ತನಕ ಸ್ಥಳದಿಂದ ಕದಲುವುದಿಲ್ಲ ಎಂದು ಪಟ್ಟು ಹಿಡಿದಿದ್ದು ಮುಸ್ಸಿಂ ಯುವಕರ ಮಧ್ಯ ಮಾತಿನ ಚಕಮಕಿ ನಡೆದಿದ್ದು ಪೋಲಿಸರು ಮಧ್ಯ ಪ್ರವೇಶಿಸಿ ಉದ್ರಿಕ್ತ ವಾತಾವರಣವನ್ನು ಶಮನ ಮಾಡುವ ಪ್ರಯತ್ನ ಪಟ್ಟಿದ್ದಾರೆ.
ಕನ್ನಡ ಹಿಂದಿ ಇಂಗ್ಲೀಷ ಬಿಟ್ಟು ಬೇರೆ ಭಾಷೆಗಳಿಗೆ ಆಧ್ಯತೆ ಇಲ್ಲ. ಪ್ರಾದೇಶಿಕ ಭಾಷೆಗೆ ತಕ್ಕಂತೆ ನಾಮಫಲಕ ಅಳವಡಿಸಿದರೆ ಹತ್ತು ಹಲವು ಭಾಷೆಗಳಿದ್ದು ಅವರೆಲ್ಲಾ ಭಾಷೆಗಳನ್ನು ಸರ್ಕಾರಿ ಕಚೇರಿಗಳಲ್ಲಿ ಅಳವಡಿಸಬೇಕಾಗುತ್ತದೆ.ಹಾಗಾಗಿ ಸರ್ಕಾರಿ ಕಚೇರಿಯಾಗಿರುವ ಭಟ್ಕಳ ಪುರಸಭೆಗೆ ಅಳವಡಿಸಿದ ಉರ್ದು ನಾಮಫಲಕವನ್ನು ತೆರವುಗೊಳಿಸಬೇಕು ಎಂದು ಭುವನೇಶ್ವರರಿ ಕನ್ನಡ ಸಂಘ ಹಾಗೂ ಭಟ್ಕಳದ ವಿವಿಧ ಸಂಘಟನೆಗಳು ಪುರಸಭೆ ಮುಖ್ಯ ಅಧಿಕಾರಿಗಳಿಗೆ, ಹಾಗೂ ತಹಶಿಲ್ದಾರರ ರಿಗೆ ಮತ್ತು ಡಿ ವೈ ಎಸ್ ಪಿ, ಅವರಿಗೆ ಅವರಿಗೆ ಮನವಿ ನೀಡಿ ಆಗ್ರಹಿಸಿದೆ.


ಈ ಸಂದರ್ಭದಲ್ಲಿ ಭುವನೇಶ್ವರರಿ ಕನ್ನಡ ಸಂಘ ಅಧ್ಯಕ್ಷ ರಮೇಶ್ ನಾಯ್ಕ ಮತ್ತು ಶ್ರೀಕಾಂತ್ ನಾಯ್ಕ ಮಾತನಾಡಿ ಆಕ್ರೋಶ ವ್ಯಕ್ತಪಡಿಸಿದರು.

ಸಿಪಿಐ ಮಹಾಬಲೇಶ್ವರ ನಾಯ್ಕ, ಪಿಎಸೈಗಳಾದ ಸುಮಾ, ಭರತ್ ಹಾಗೂ ಹನುಮಂತಪ್ಪ ಕುಡುಗುಂಟಿ ಸ್ಥಳದಲ್ಲಿ ಇದ್ದು ಅಹಿತಕರ ಘಟನೆ ನಡೆಯದಂತೆ ನೋಡಿಕೊಂಡರು.

error: