May 19, 2024

Bhavana Tv

Its Your Channel

ಭಟ್ಕಳ ತಾಲ್ಲೂಕಿನ ಪುರಸಭೆ ವ್ಯಾಪ್ತಿಯಲ್ಲಿ ಬೀದಿ ನಾಯಿಗಳ ಕಾಟ, ಪುರಸಭೆ ಅಧಿಕಾರಿಗಳ ದಿವ್ಯ ನಿರ್ಲಕ್ಷ, ಸಾರ್ವಜನಿಕರಿಂದ ಆರೋಪ,

ಭಟ್ಕಳ: ಇತ್ತೀಚೆಗೆ ಭಟ್ಕಳ ತಾಲ್ಲೂಕಿನ ಪುರಸಭೆ ವ್ಯಾಪ್ತಿಯಲ್ಲಿ ಬೀದಿ ನಾಯಿಗಳ ಹಾವಳಿ ಹೆಚ್ಚಾಗುತ್ತಿದೆ. ಬೀದಿ ನಾಯಿಗಳ ಗುಂಪು ಜನರ ಮೇಲೆ ಏಕಾಏಕಿ ದಾಳಿ ನಡೆಸುತ್ತಿದೆ. ಅದೇರೀತಿ ಒಂದೂವರೆ ವರ್ಷದ ಮಗುವೊಂದರ ಮೇಲೆ ಬೀದಿ ನಾಯಿ ಒಂದು ದಾಳಿ ನಡೆಸಿದ್ದು ಮಗುವನ್ನು ನಾಯಿ ಕಚ್ಚಿ ಎಳೆದಾಡಿದ್ದು,ಮಗುವಿನ ಮೂಗಿನ ಮೇಲೆ ಮತ್ತು ಮುಖಕ್ಕೆ ಕಚ್ಚಿ ಗಾಯಗೊಳಿಸಿದೆ.
ಗಾಯಗೊಂಡಿರುವ ಮಗು ಇಸ್ಮಾಯಿಲ್ ತೈಮೂರ್ ಜಾಕಿರ್ ಸಿದ್ದಿ ಬಾಪಾ,ಡೊಂಗರಪಲ್ಲಿ ನಿವಾಸಿಯ ಮಗು ಎಂದು ತಿಳಿದು ಬಂದಿದೆ.
ಮಗುವನ್ನು ತಕ್ಷಣ ಭಟ್ಕಳ ಸರ್ಕಾರಿ ಆಸ್ಪತ್ರೆಯಲ್ಲಿ ತುರ್ತು ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗೆ ಮಣಿಪಾಲಕ್ಕೆ ಆಸ್ಪತ್ರೆಗೆ ಸಾಗಿಸಲಾಯಿತು.
ಮನೆಯ ಹೊರಗಡೆ ಆಟವಾಡುವ ಸಮಯದಲ್ಲಿ ನಾಯಿ ದಾಳಿ ನಡೆದಿದ್ದು ಕೂಡಲೇ ಮನೆಯವರು ಹೊರಗೆ ಬಂದು ನಾಯಿಯಿಂದ ಬಾಲಕನನ್ನು ರಕ್ಷಿಸಿದ್ದಾರೆ ಎನ್ನಲಾಗಿದೆ. ಪುರಸಭೆ ಅಧಿಕಾರಿಗಳ ದಿವ್ಯ ನಿರ್ಲಕ್ಷ್ಯಕ್ಕೆ ಈ ಘಟನೆ ಸಾಕ್ಷಿಯಾಗಿದೆ.

error: