ಭಟ್ಕಳ: ಸತತವಾಗಿ ಸುರಿದ ಭಾರಿ ಗಾಳಿ ಮಳೆಗೆ ಭಟ್ಕಳ ತಾಲೂಕಿನ ಎರಡು ತೀರಾ ಬಡ ಕುಟುಂಬದವರ ಮನೆಯ ಮೇಲೆ ಮರಬಿದ್ದು ಹಾನಿ ಉಂಟಾಗಿದ್ದು ಶುಕ್ರವಾರದಂದು ಸಂತ್ರಸ್ಥರ ಮನೆಗೆ ಶಾಸಕ ಸುನೀಲ ನಾಯ್ಕ ಭೇಟಿ ನೀಡಿ ಸರಕಾರದಿಂದ ಪರಿಹಾರದ ಆದೇಶ ಪ್ರತಿ ಹಸ್ತಾಂತರಿಸಿದರು.
ಜುಲೈ 5 ರಂದು ಸುರಿದ ಗಾಳಿ ಮಳೆಗೆ ಶಿರಾಲಿಯ ವೆಂಕಟರಮಣ ಅಣ್ಣಪ್ಪ ನಾಯ್ಕ ಶಿರಾಲಿ ಚಿತ್ರಾಪುರ ಬಂಡಿಕಾಶಿ ಹಾಗೂ ಮಾವಳ್ಳಿ-2 ಚಂದ್ರಹಿತ್ಲು ನಿವಾಸಿ ಲಕ್ಷ್ಮಿ ಸುಬ್ಬಯ್ಯ ನಾಯ್ಕ ಎಂಬುವವರ ಮನೆಗೆ ಭಾರಿ ಹಾನಿ ಸಂಭವಿಸಿತ್ತು. ಘಟನೆಯ ಬಗ್ಗೆ ತಿಳಿದು ಘಟನೆಯ ದಿನದಂದು ಎರಡು ಸಂತ್ರಸ್ತರ ಮನೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿ ಶಾಸಕ ಸುನೀಲ ನಾಯ್ಕ ವೈಯಕ್ತಿಕ ನೆರವನ್ನೂ ನೀಡಿದ್ದರು. ಹಾಗೂ ಸರಕಾರದಿಂದ ಅಧಿಕ ಪರಿಹಾರ ಒದಗಿಸಿಕೊಡುವ ಭರವಸೆ ನೀಡಿ ಕುಟುಂಬಕ್ಕೆ ಸಾಂತ್ವನ ನೀಡಿದ್ದರು. ಅದರಂತೆ ಶುಕ್ರವಾರದಂದು ಸರ್ಕಾರ ದಿಂದ ಸಾಧ್ಯವಾಗದಷ್ಟು ಹೆಚ್ಚಿನ ಪರಿಹಾರವನ್ನು ದೊರಕಿಸಿಕೊಟ್ಟಿದ್ದು, ಸಂತ್ರಸ್ಥರ ಸಮಸ್ಯೆಗೆ ಸರಕಾರ ಹಾಗೂ ಶಾಸಕ ಸುನೀಲ ನಾಯ್ಕ ಶೀಘ್ರ ಸ್ಪಂದನೆ ನೀಡಿ ಆದೇಶ ಪ್ರತಿಯನ್ನು ಕುಟುಂಬಸ್ಥರಿಗೆ ಹಸ್ತಾಂತರಿಸಲಾಯಿತು.
ಎರಡು ಕುಟುಂಬಕ್ಕೆ ತಲಾ ರೂ. 95,100 ರೂಪಾಯಿ ಪರಿಹಾರ ಆದೇಶ ಪ್ರತಿಯನ್ನು ನೀಡಲಾಯಿತು.
More Stories
ಅಕ್ಷಯ ತೃತೀಯ ದಿನದಂದು ಮನೆಗೆ ನುಗಿದ ಕಳ್ಳರು:
ಭಟ್ಕಳದ ಅಂಜುಮನ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಅಂಡ್ ಮ್ಯಾನೇಜ್ಮೆಂಟ್ನ ೪೧ ನೇ ವಾರ್ಷಿಕ ಅಥ್ಲೆಟಿಕ್ ಮೀಟ್
ಸಿದ್ದಾರ್ಥ ಆಂಗ್ಲ ಮಾದ್ಯಮ ಪ್ರೌಢಶಾಲೆ ಶಿರಾಲಿ ವಿದ್ಯಾರ್ಥಿಗಳು ಎಸ್.ಎಸ್.ಎಲ್.ಸಿ ಉತ್ತಮ ಸಾಧನೆ