May 16, 2024

Bhavana Tv

Its Your Channel

ಮಾಜಿ ಶಾಸಕ ಮಾಂಕಾಳು ವೈದ್ಯರು ಮತ್ತೊಮ್ಮೆ ಶಾಸಕರಾಗಲಿ ಎಂದು ಅಭಿಮಾನಿಯೊಬ್ಬರು ತೀರ್ಥ ಕ್ಷೇತ್ರಗಳಿಗೆ ಯಾತ್ರೆಗೆ ತೆರಳಿ ದೇವರಲ್ಲಿ ಪ್ರಾರ್ಥನೆ

ಭಟ್ಕಳ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕ ಮಾಂಕಾಳು ವೈದ್ಯರು ಮತ್ತೊಮ್ಮೆ ಶಾಸಕರಾಗಲಿ ಎಂದು ಅಭಿಮಾನಿಯೊಬ್ಬರು ತೀರ್ಥ ಕ್ಷೇತ್ರಗಳಿಗೆ ಯಾತ್ರೆಗೆ ತೆರಳಿ ದೇವರಲ್ಲಿ ಪ್ರಾರ್ಥಿಸಿದ್ದಾರೆ.

ಹೊನ್ನಾವರ ತಾಲೂಕಿನ ಮಂಕಿ ಗ್ರಾಮದ ದಾಮೋದರ ಎಂ.ಎಸ್. ಎಂಬ ಅಭಿಮಾನಿಯೊಬ್ಬರು ಈಗ ಉತ್ತರಖಾಂಡ್ ನಲ್ಲಿರುವ ಖೇದಾರಾನಾಥ್ ದೇವಾಲಯಕ್ಕೆ ತೀರ್ಥ ಯಾತ್ರೆಗೆ ತೆರಳಿ, ಮಂಕಾಳು ವೈದ್ಯರು ಮತ್ತೊಮ್ಮೆ ಶಾಸಕರಾಗಲಿ ಎಂದು ವಿಶೇಷ ಪೂಜೆ ಸಲ್ಲಿಸಿದ್ದಾರೆ.

ಯಾವ ಪಕ್ಷದ ಕಾರ್ಯಕರ್ತನೂ ಅಲ್ಲದ ಮಂಕಿ ಊರಿನ ಈ ಸಾಮಾನ್ಯ ಯುವಕ ಮಾಂಕಾಳು ವೈದ್ಯರ ಮೇಲಿನ ಅಭಿಮಾನಕ್ಕೆ ಖೇದಾರಾನಾಥ, ಬದರಿನಾಥ, ಯಮುನೋತ್ರಿ, ಗಂಗೋತ್ರಿ ಮುಂತಾದ ಕ್ಷೇತ್ರಗಳ ಯಾತ್ರೆ ಪೂರೈಸಿ ಈಗ ವೈಷ್ಣೋದೇವಿ, ಅಯೋದ್ಯೆ ರಾಮಮಂದಿರ, ಅಮರಾನಾಥ ಯಾತ್ರೆಯತ್ತ ಸಾಗುತ್ತಿದ್ದಾನೆ.

ಮುಂದಿನ ವರ್ಷ ರಾಜ್ಯದ ವಿಧಾನಸಭಾ ಚುನಾವಣೆ ನಡೆಯಲಿದ್ದು, ಈ ಚುನಾವಣೆಯಲ್ಲಿ ತನ್ನ ಕ್ಷೇತ್ರದಿಂದ ಮಂಕಾಳ ವೈದ್ಯರು ವಿಜಯಿಯಾಗಲಿ ಎಂದು ಪ್ರಾರ್ಥಿಸುತ್ತಿದ್ದಾನೆ. ಆತನ ಅಭಿಮಾನಕ್ಕೆ ಸಾಮಾಜಿಕ ಜಾಲತಾಣದಲ್ಲೂ ಉತ್ತಮ ಪ್ರಶಂಸೆ ವ್ಯಕ್ತವಾಗುತ್ತಿದೆ.

ವರದಿ: ನರಸಿಂಹ ನಾಯ್ಕ್ ಹರಡಸೆ.

error: