ಭಟ್ಕಳ ಕಸಾಪ ವತಿಯಿಂದ ಶಿಕ್ಷಕರಿಗಾಗಿ ಕವನ ರಚನಾ ಸ್ಪರ್ಧೆ: ಪುಸ್ತಕ ಬಹುಮಾನವನ್ನು ಕಮಲಾವತಿ ರಾಮನಾಥ ಶ್ಯಾನಭಾಗ ಸಭಾಭವನದಲ್ಲಿ ನಡೆದ ಜಿಲ್ಲಾಮಟ್ಟದ ಶಿಕ್ಷಕ ದಿನಾಚರಣೆಯ ಕಾರ್ಯಕ್ರಮದ ವೇದಿಕೆಯಲ್ಲಿ ವಿತರಿಸಲಾಯಿತು.
ಶಿಕ್ಷಕರ ದಿನಾಚರಣೆಯ ಹಿನ್ನೆಲೆಯಲ್ಲಿ ತಾಲೂಕಾ ಕನ್ನಡ ಸಾಹಿತ್ಯ ಪರಿಷತ್ ಸ್ವಾತಂತ್ರ್ಯೋತ್ಸವ ಅಮೃತಮಹೋತ್ಸವ ಸಂಭ್ರಮ ಎಂಬ ವಿಷಯದ ಕುರಿತು ಪ್ರಾಥಮಿಕ ಹಾಗೂ ಪ್ರೌಢಶಾಲಾ ಶಿಕ್ಷಕರು ಹಾಗೂ ಕಾಲೇಜು ಉಪನ್ಯಾಸಕರಿಗಾಗಿ ಕವನ ರಚನಾ ಸ್ಪರ್ಧೆಯನ್ನು ಏರ್ಪಡಿಸಿತ್ತು. ಪ್ರಾಥಮಿಕ ವಿಭಾಗದಲ್ಲಿ ಸುಮಲತಾ ಡಿ.ನಾಯ್ಕ, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಹೊನ್ನೆಮಡಿ, ಪ್ರಥಮ, ಪರಮೇಶ್ವರ ನಾಯ್ಕ, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಕೊಡಸೂಳ್ ದ್ವ್ವಿತೀಯ, ಸೌಮ್ಯ ದೇವಾಡಿಗ, ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ, ಕೆರೆಗದ್ದೆ. ತೃತೀಯ ಹಾಗೂ ವಿಜಯಕುಮಾರ ನರ್ವೆಕರ, ಸ.ಕಿ.ಪ್ರಾ.ಶಾಲೆ, ಹೇರೂರು, ಶ್ರೀ ಎಚ್.ಎನ್.ನಾಯ್ಕ, ಮಾದರಿ ಹಿ.ಪ್ರ.ಶಾಲೆ, ಚಿತ್ರಾಪುರ ಇವರುಗಳು ಪ್ರೋತ್ಸಾಹಕ ಬಹುಮಾನ ಪಡೆದರು. ಪ್ರೌಢಶಾಲಾ ವಿಭಾಗದಲ್ಲಿ ಎನ್.ಜಿ.ಗೌಡ, ಸರ್ಕಾರಿ ಪ್ರೌಢಶಾಲೆ, ಬೆಳ್ಕೆ ಪ್ರಥಮ, ಸವಿತಾ ನಾಯ್ಕ, ಸರ್ಕಾರಿ ಪ್ರೌಢಶಾಲೆ, ಸೋನಾರಕೇರಿ
ದ್ವಿತೀಯ, ಶಿವಮ್ಮ ಗೊಂಡ. ಸರ್ಕಾರಿ ಉರ್ದು ಪ್ರೌಢಶಾಲೆ, ನವಾಯತ ಕಾಲನಿ, ತ್ರತೀಯ ಹಾಗೂ ಕುಮಾರ ನಾಯ್ಕ, ಸರ್ಕಾರಿ ಪ್ರೌಢಶಾಲೆ ಕುಂಟವಾಣಿ, ವಿಮಲಾ ಪಟಗಾರ, ಸರ್ಕಾರಿ ಪ್ರೌಢಶಾಲೆ, ತೆಂಗಿನಗುAಡಿ ಇವರುಗಳು ಪ್ರೋತ್ಸಾಹಕ ಬಹುಮಾನ ಪಡೆದರು. ಕಾಲೇಜುವಿಭಾಗದಲ್ಲಿ ವಿಶ್ವನಾಥ ಭಟ್ಟ, ಗುರು ಸುಧೀಂದ್ರ ಕಾಲೇಜು, ಪ್ರಥಮ, ಹೇಮಾವತಿ ನಾಯ್ಕ, ಬೀನಾ ವೈದ್ಯ ಕಾಲೇಜು ,ಮುರ್ಡೇಶ್ವರ ದ್ವಿತೀಯ, ಪೆಟ್ರಿಕ್ ಟೆಲ್ಲಿಸ್, ಆನಂದಾಶ್ರಮ ಪ.ಪೂ.ಕಾಲೇಜು,ತ್ರತೀಯ ಸ್ಥಾನ ಪಡೆದರೆ ಮನೋರಮಾ, ಸಿದ್ಧಾರ್ಥ ಪದವಿ ಕಾಲೇಜು ಪ್ರೋತ್ಸಾಹಕ ಬಹುಮಾನ ಪಡೆದರು. ಭಾಗವಹಿಸಿದ ಎಲ್ಲರಿಗೂ ಪುಸ್ತಕ ಬಹುಮಾನವನ್ನು ಕಮಲಾವತಿ ರಾಮನಾಥ ಶ್ಯಾನಭಾಗ ಸಭಾಭವನದಲ್ಲಿ ನಡೆದ ಜಿಲ್ಲಾಮಟ್ಟದ ಶಿಕ್ಷಕ ದಿನಾಚರಣೆಯ ಕಾರ್ಯಕ್ರಮದ ವೇದಿಕೆಯಲ್ಲಿ ವಿತರಿಸಲಾಯಿತು. ಶಿಕ್ಷಕರಿಗಾಗಿ ಆಯೋಜಿಸಿದ ಸ್ವರಚಿತ ಕವನ ರಚನಾ ಸ್ಪರ್ಧೆಯಲ್ಲಿ ಉತ್ಸಾಹದಿಂದ ಭಾಗವಹಿಸುತ್ತಿರುವ ಶಿಕ್ಷಕಸಮೂಹಕ್ಕೆ ಹಾಗೂ ಬಹುಮಾನಿತ ಶಿಕ್ಷಕರುಗಳಿಗೆ ಕಸಾಪ ತಾಲೂಕಾಧ್ಯಕ್ಷ ಗಂಗಾಧರ ನಾಯ್ಕ ಅಭಿನಂದಿಸಿದ್ದಾರೆ.
More Stories
ಮೊಬೈಲ್ ಹ್ಯಾಕ್ ಮಾಡಿ ಖಾತೆಯಲ್ಲಿದ್ದ ಲಕ್ಷಾಂತರ ಹಣ ಕ್ಷಣಾರ್ಧದಲ್ಲಿ ಮಾಯ,
ಅಕ್ಷಯ ತೃತೀಯ ದಿನದಂದು ಮನೆಗೆ ನುಗಿದ ಕಳ್ಳರು:
ಭಟ್ಕಳದ ಅಂಜುಮನ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಅಂಡ್ ಮ್ಯಾನೇಜ್ಮೆಂಟ್ನ ೪೧ ನೇ ವಾರ್ಷಿಕ ಅಥ್ಲೆಟಿಕ್ ಮೀಟ್