May 3, 2024

Bhavana Tv

Its Your Channel

ರಾಜ್ಯದಲ್ಲಿ ನಡೆದ ಯುವಕರ ಕೊಲೆಗಳನ್ನು ಬಿಜೆಪಿ ಎನ್ಕ್ಯಾಶ್ ಮಾಡಿಕೊಂಡಿದೆ-ತಾಹೀರ್ ಹುಸೇನ್

ಭಟ್ಕಳ: ಉ.ಕಜಿಲ್ಲೆಯ ಹೊನ್ನಾವರದ ಪರೇಶ್ ಮೇಸ್ತಾ ಸಾವನ್ನು ಕೊಲೆ ಎಂದು ಬಿಂಬಿಸಿ ಅದನ್ನು ಮುಸ್ಲಿಮರ ತಲೆಗೆಕಟ್ಟಲು ಬಿಜೆಪಿ ನಡೆಸಿದ ಪ್ರಯತ್ನ ವಿಫಲಗೊಂಡಿದ್ದು ರಾಜ್ಯದಲ್ಲಿ ನಡೆದ ಯುವಕರ ಕೊಲೆ ಮತ್ತು ಸಾವುಗಳನ್ನು ಬಿಜೆಪಿ ಎನ್ಕ್ಯಾಶ್ ಮಾಡಿಕೊಂಡಿದೆ ಎಂದು ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾ ಕರ್ನಾಟಕ ರಾಜ್ಯಾಧ್ಯಕ್ಷ ನ್ಯಾಯಾವಾದಿ ತಾಹೀರ್ ಹುಸೇನ್ ಹೇಳಿದರು.
ಅವರು ಗುರುವಾರ ಭಟ್ಕಳದಲ್ಲಿ ನಡೆದ ಜನಜಾಗೃತಿ ಜಾಥಾದಲ್ಲಿ ಪಾಲ್ಗೊಂಡು ನಂತರ ಮಾಧ್ಯಮಗಳೊಂದಿಗೆ ಮಾತನಾಡಿದರು.
ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದಾಗಿನಿAದ ಕೋಮುಗಲಭೆಗಳನ್ನು ಸೃಷ್ಟಿಸುತ್ತಿದೆ ಎಂದು ಆರೋಪಿಸಿದ ಅವರು ಭ್ರಷ್ಟಾಚಾರ ಪರಮಾವಧಿಗೆ ತಲುಪಿದೆ. ನಮ್ಮ ಮುಖ್ಯಮಂತ್ರಿಯನ್ನು ಇನ್ನೊಂದು ರಾಜ್ಯಕ್ಕೆ ಹೋದಾಗ ಭ್ರಷ್ಟ ಮುಖ್ಯಮಂತ್ರಿ ಎಂದು ಜನ ಸ್ವಾಗತಿಸುವಂತಹ ಸ್ಥಿತಿ ನಿರ್ಮಾಣಗೊಂಡಿದೆ. ಇದು ಅತ್ಯಂತ ನಾಚಿಕೆಗೇಡು, ಬಿಜೆಪಿ ಅತ್ಯಂತ ನೀಚತನದ ರಾಜಕಾರಣಕ್ಕೆ ಇಳಿದಿದ್ದು ಸಾವುಗಳನ್ನು ಕೊಲೆಗಳು ಎಂದು ಬಿಂಬಿಸಿ ಆ ಮೂಲಕ ತಮ್ಮ ಪಕ್ಷವನ್ನು ಬಲಪಡಿಸಿಕೊಳ್ಳಲು ಹಣಿಸುತ್ತಿದ್ದಾರೆಎಂದರು. ಪರೇಶ್ ಮೇಸ್ತಾನ ಕುಟುಂಬಕ್ಕೆ ನ್ಯಾಯಾ ಕೊಡಿಸುತ್ತೇನೆಂದು ಹೇಳಿದ ಬಿಜೆಪಿಗರು ಅವರ ಕುಟುಂಬವನ್ನು ವಂಚಿಸಿವೆ. ಸಾವನ್ನು ಕೊಲೆಯನ್ನು ಎಂದು ಬಿಂಬಿಸಿದವರ ಕುರಿತು ತನಿಖೆಯಾಗಬೇಕು, ಇವರ ಷಡ್ಯಂತ್ರ ಹೊರಬರಬೇಕು ಎಂದು ಆಗ್ರಹಿಸಿದರು.
ಸರ್ಕಾರದಲ್ಲಿದ್ದು ಕೊಂಡು ಒಂದು ಜವಾಬ್ದಾರಿತ ಸ್ಥಾನದಲ್ಲಿದ್ದು ಮಂತ್ರಿಗಳು, ಶಾಸಕರು ತಮ್ಮ ಅಧಿಕಾರವನ್ನು ದುರೂಪಯೋಗ ಪಡೆಸಿಕೊಂಡಿದ್ದಾರೆ. ಮುಂದಿನ ದಿನಗಳಲ್ಲಿ ಸಾರ್ವಜನಿಕರುಎಚ್ಚೆತ್ತುಕೊಂಡು ಪಾಠವನ್ನು ಕಲಿಸಲಿದ್ದಾರೆಎಂದಅವರು, ರಾಜಕೀಯ ಪಕ್ಷಗಳ ಷಡ್ಯಂತ್ರಗಳಿಗೆ ಬಲಿಯಾಗದೆ ಪರಿಸ್ಥಿತಿಯನ್ನು ಅರ್ಥಮಾಡಿಕೊಳ್ಳಬೇಕು, ಪರೇಶ್ ಮೇಸ್ತಾನ ಕುಟುಂಬಕ್ಕೆ ನ್ಯಾಯಾ ಒದಗಿಸಿಕೊಡಬೇಕು ಎಂದುಅವರು ಆಗ್ರಹಿಸಿದರು.

error: