ಭಟ್ಕಳ ತಾಲ್ಲೂಕಿನ ಗಾಣಿಗ ಸೇವಾ ಸಂಘದ ಇವರ ವತಿಯಿಂದ ಜನಪದ ಹಾಡುಗಾರಿಕೆ ಊರಿನಲ್ಲಿ ಪ್ರಸಿದ್ಧ ಪಡೆದ ಹೇಮಾವತಿ ಮಾದೇವ ಶೆಟ್ಟಿಯವರಿಗೆ ಅಭಿನಂದನಾ ಕಾರ್ಯಕ್ರಮವನ್ನು ತೆಂಗಿನಗುAಡಿಯ ಹೆರ್ತಾರನಲ್ಲಿ ಇರುವ ಇವರ ಸ್ವ -ಗೃಹದಲ್ಲಿ ಬುಧವಾರ ನಡೆಯಿತು.
76 ವರ್ಷದ ಹೇಮಾವತಿಯವರು ಸಮಾಜದ ಯಾವುದೇ ಶುಭ ಕಾರ್ಯವಿರಲಿ ಅಲ್ಲಿ ಆ ಕಾರ್ಯಕ್ರಮ ನಿರ್ವಿಘ್ನವಾಗಿ ನಡೆಯುತ್ತದೆ ಪ್ರತಿ ಹಂತದ ಕಾರ್ಯಕ್ರಮದಲ್ಲಿ ಇವರ ಮಧುರ ಕಂಠದಿAದ ಹಾಡುಗಳು ನಿರರ್ಗಳವಾಗಿ ಹೊರಹೊಮ್ಮಿ ಕಾರ್ಯಕ್ರಮಕ್ಕೆ ಕಳೆಕಟ್ಟುವಂತ್ತಿರುತ್ತದೆ.
ಮದುವೆ, ಮುಂಜಿ, ನಾಂದಿ, ಮಗುವಿನ ನಾಮಕರಣ, ಗೃಹ ಪ್ರವೇಶ, ದೇವರ ಕೆಲಸ ಯಾವುದೇ ಶುಭಕಾರ್ಯಕ್ರಮವಿರಲಿ ಹೇಮಾವತಿ ಯವರಿದ್ದರೆ ಅಷ್ಟೇ ಸಂಪ್ರದಾಯ ಪ್ರಕಾರವೇ ಆಗುವಂತೆ ಮುಂದೆ ನಿಂತು ಜವಾಬ್ದಾರಿ ವಹಿಸಿಕೊಳ್ಳುವ ರೀತಿ ನಿಜಕ್ಕೂ ಹೆಮ್ಮೆಯ ವಿಷಯ ಇವರದು ಅಗಾಧವಾದ ಜ್ಞಾಪಕ ಶಕ್ತಿ, ಯಾವುದೇ ಹಾಡುಗಳು ಬರವಣಿಗೆ ಇಲ್ಲದೆ ನೋಡದೆ ಹಾಡುವ ರೀತಿ ನಿಜಕ್ಕೂ ಶ್ಲಾಘನೀಯ, ಅಷ್ಟೆನೂ ಓದು ಬರಹವಿಲ್ಲದಿದ್ದರೂ ಅವರ ಪ್ರತಿ ಮಾತುಗಳು ಕೂಡ ಮೌಲಯುತವಾಗಿರುವಂತಹದು ಇಂತಹ ಘನ ವ್ಯಕ್ತಿತ್ವದ ಮಹಿಳೆಗೆ ಭಟ್ಕಳ ತಾಲೂಕಾ ಗಾಣಿಗ ಸೇವಾ ಸಂಘದವತಿಯಿAದ ಅಭಿನಂದಸಿದರು.
ಈ ಸಂದರ್ಭದಲ್ಲಿ ಗಾಣಿಗ ಸೇವಾ ಸಂಘ ಅಧ್ಯಕ್ಷ ಸುಭಾಷ್ ಎಮ್. ಶೆಟ್ಟಿ,ಸಂಘಟನೆ ಕಾರ್ಯದರ್ಶಿ ಪ್ರಕಾಶ್ ಶಿರಾಲಿ,ಖಜಾಂಚಿ ರಾಜೇಶ್ ಶೆಟ್ಟಿ,ಕಾರ್ಯದರ್ಶಿ ಮನೋಜ್ ಶೆಟ್ಟಿ,ಸದಸ್ಯರಾದ ವಿಜಿತ್ ಶೆಟ್ಟಿ,ಶಂಕರ್ ಶೆಟ್ಟಿ,ಎಂ. ಆರ್. ಮುಡೇಶ್ವರ,ಗಜಾನನ್ ಶೆಟ್ಟಿ, ಹಾಗೂ ಕುಟುಂಬದವರಾದ ಸುಧಾಕರ ಶೆಟ್ಟಿ, ರಾಜೇಶ್ ಶೆಟ್ಟಿ, ವಿನೋದ ಶೆಟ್ಟಿ, ಮುಂದಾದರು ಉಪಸ್ಥಿತರಿದ್ದರು.
More Stories
ಭಟ್ಕಳದ ಅಂಜುಮಾನ್ ಇಂಜಿನಿಯರಿAಗ್ ಕಾಲೇಜು ಗುಡ್ಡದ ಮೇಲಿನ ಸ್ವರ್ಗ – ಡಾ. ದಿನೇಶ್ ಗಾಂವ್ಕರ್
ಭಟ್ಕಳದ ಏಐಟಿಎಮ್ ನಲ್ಲಿ ಕ್ಯೂ ಸ್ಪೈಡರ್ಸ್ ನಿಂದ ಕ್ಯಾಂಪಸ್ ಸಂದರ್ಶನ
ವಿಶ್ವ ಭೂಮಿ ದಿನಾಚರಣೆಯನ್ನು ಹಿರಿಯ ಸಿವಿಲ್ ನ್ಯಾಯಾಧೀಶ ಕಾಂತ ಕುರಣಿ ಉದ್ಘಾಟಿಸಿದರು.