May 12, 2024

Bhavana Tv

Its Your Channel

ಕುಂಟವಾಣಿ ಮಾರುಕೇರಿ ಪ್ರೌಢಶಾಲೆ ವಿದ್ಯಾರ್ಥಿಗಳಿಂದ ಹಾಡವಳ್ಳಿ ಜೈನ ಬಸದಿಯಲ್ಲಿ ಕೋಟಿ ಕಂಠ ಗಾಯನ

ಭಟ್ಕಳ:   ಕರ್ನಾಟಕ ಸರಾಕಾರದ ಮಹಾತ್ವಾಕಾಂಕ್ಷಿ ಕಾರ್ಯಕ್ರಮವಾದ ಕೋಟಿ ಕಂಠ ಗಾಯನ ಕಾರ್ಯಕ್ರಮ ಭಟ್ಕಳ ತಾಲೂಕಿನ ಹಾಡವಳ್ಳಿ ಗ್ರಾಮದ ಇತಿಹಾಸ ಪ್ರಸಿದ್ಧ ಜೈನ ಬಸದಿ ಯಲ್ಲಿ  ನೆರವೇರೀತು. 
ತಾಲೂಕಾ ಆಡಳಿತ  ಭಟ್ಕಳ ಗ್ರಾಮ ಪಂಚಯತ ಹಾಡವಳ್ಳಿ ಹಾಗೂ  ಗ್ರಾಮ ಪಂಚಾಯತ ಮಾರುಕೇರಿಯ ನೇತೃತ್ವದಲ್ಲಿ ಸರಕಾರಿ ಪ್ರೌಢಶಾಲೆ ಕುಂಟವಾಣಿ ಹಾಗೂ ಶಿವಶಾಂತಿಕಾ ಪರಮೇಶ್ವರಿ ಪ್ರೌಢಶಾಲೆ ಮಾರುಕೇರಿ ವಿದ್ಯಾರ್ಥಿಗಳಿಂದ ಏಕಕಂಠದಲ್ಲಿ ಕನ್ನಡದ 6 ಗೀತೆಗಳ ಗಾಯನ ನಡೆಯಿತು.

ಮಕ್ಕಳು ಕನ್ನಡ ದ್ವಜದೊಂದಿಗೆ ಸಾಂಪ್ರದಾಯಿಕ ಉಡುಪಿನಲ್ಲಿ ಕಾರ್ಯಕ್ರಮ ದಲ್ಲಿ ಭಾಗವವಹಿದ್ದರು. ಕಾರ್ಯಕ್ರಮದಲ್ಲಿ ಹಾಡವಳ್ಳಿ ಗ್ರಾಮ ಪಂಚಾಯತ ಅಧ್ಯಕ್ಷರಾದ ನಾಗಮ್ಮ ನಾಯ್ಕ ತೋಟಗಾರಿಕೆ ಇಲಾಖೆಯ ಎಚ್ ಕೆ ಬೀಳಗಿ ರೇಷ್ಮೆ ಇಲಾಖೆಯ ಡಾ ಸಂಧ್ಯಾ ಭಟ್ ಪಿ.ಡಿ.ಓ ಯಾದವ ನಾಯ್ಕ ಗ್ರಾಮ ಪಂಚಾಯತ ಸದಸ್ಯರು ಎಸ್.ಡಿ. ಎಂ.ಸಿ ಅಧ್ಯಕ್ಷರಾದ ವೆಂಕಟೇಶ ನಾಯ್ಕ ಪಾಲಕ ಪೋಷಕರು ಊರ ನಾಗರಿಕರು ಭಾಗವಹಿಸಿದ್ದರು. ಉದ್ಯಮಿಗಳಾದ ಜೀವನ ಶೆಟ್ಟಿ ಅವರು ಎಲ್ಲಾ ಮಕ್ಕಳಿಗೆ ಕನ್ನಡ ದ್ವಜವನ್ನು ಕೊಡುಗೆಯಾಗಿ ನೀಡಿದರು.
ಸಿ.ಆರ್.ಪಿ ಸುರೇಶ್ ಮುರ್ಡೇಶ್ವರ ಹಾಗೂ ಶ್ರೀನಿವಾಸ ಉಪಾಧ್ಯಾಯ ಅವರು ಮಾತನಾಡಿದರು. ಮುಖ್ಯಾಧ್ಯಾಪಕರಾದ ಡಾ ಸುರೇಶ ತಾಂಡೇಲ್ ಎಲ್ಲರನ್ನು ಸ್ವಾಗತಿಸಿ ಪ್ರಾಸ್ತಾವಿಕ ಮಾತನಾಡಿದರು ಮಾರುತಿ ನಾಯ್ಕ ಸಂಕಲ್ಪ ವಿಧಿ ಬೋಧಿಸಿದರು. ಕುಮಾರನಾಯ್ಕ ವಂದಿಸಿದರೆ ಆನಂದ ನಾಯ್ಕ ಕಾರ್ಯಕ್ರಮ ನಿರೂಪಿಸಿದರು..

error: