ಭಟ್ಕಳ ಆಸರಕೇರಿಯ ಗುರುಮಠ ಶ್ರೀ ನಿಚ್ಚಲಮಕ್ಕಿ ತಿರುಮಲ ವೆಂಕಟರಮಣ ದೇವಸ್ಥಾನದಲ್ಲಿ ಶ್ರೀ ವೆಂಕಟೇಶ್ವರ ಭಜನಾ ಮಂಡಳಿ ಆಶ್ರಯದಲ್ಲಿ ಶುಕ್ರವಾರ ರಾತ್ರಿ ಕಾರ್ತಿಕ ಮಾಸದ ಭಜನಾ ಮಂಗಲೋತ್ಸವ ಕಾರ್ಯಕ್ರಮ ಅದ್ದೂರಿಯಾಗಿ ನರೆವೇರಿತು.
ಮಂಗಲೋತ್ಸವ ನಿಮಿತ್ತ ಹಮ್ಮಕೊಂಡ ಭಜನಾ ಕುಣಿತ ಸ್ಪರ್ಧೆಯಲ್ಲಿ ಪ್ರಥಮ ಬಹುಮಾವನ್ನು ಬೆಣಂದೂರಿನ ಹಾರ್ಸಿಕಾನ ಯಕ್ಷ ದೇವತಾ ಭಜನಾ ತಂಡ ಪಡೆಯಿತು. ಶ್ರೀ ನಾಗಚೌಡೇಶ್ವರಿ ಮಹಿಳಾ ಭಜನಾ ತಂಡ ಬೆಳ್ನಿ ದ್ವಿತೀಯ ಸ್ಥಾನ ಶ್ರೀ ವೆಂಕಟೇಶ್ವರ ಭಜನಾ ತಂಡ ಆಸರಕೇರಿ, ತೃತೀಯ ಸ್ಥಾನ ಪಡೆಯಿತು. ಶ್ರೀ ಮಹಾಸತಿ ಭಜನಾ ತಂಡ ಹಲ್ಲಾರಿ ಹಾಗೂ ಶ್ರೀ ಲಕ್ಷಿö್ಮÃ ನಾರಾಯಣ ಭಜನಾ ಮಂಡಳಿ ಮಾಲೇಕೊಡ್ಲು ಬೆಂಗ್ರೆ ಸಮಾಧಾನಕರ ಬಹುಮಾನ ಪಡೆದರು.
ಬಹುಮಾನ ವಿತರಣಾ ಸಮಾರಂಭದಲ್ಲಿ ಉಪಸ್ಥಿತರಿದ್ದ ಪಶ್ಚಿಮಘಟ್ಟ ಕಾರ್ಯಪಡೆಯ ಅದ್ಯಕ್ಷ
ಗೋವಿಂದ ನಾಯ್ಕ ಬಹುಮಾನ ವಿತರಿಸಿ ಇಂದು ಮಹಿಳೆಯರು ಎಲ್ಲಾ ರಂಗಗಳಲ್ಲಿ ಮುಂದೆ ಬರುತ್ತಿದ್ದು ಭಜನಾ ಕುಣಿತ ಸ್ಪರ್ದೇಯಲ್ಲೂ ಭಾಗವಹಿಸಿ ಉತ್ತಮ ಸ್ಪರ್ಧೆ ನೀಡಿದ್ದಾರೆ. ಮಹಿಳೆಯರು ತಮ್ಮ ಮಕ್ಕಳಿಗೆ ಸಂಸ್ಕಾರದೊAದಿಗೆ ಧಾರ್ಮಿಕತೆಯನ್ನು ಕಲಿಸಬೇಕಾದ ಜವಾಬ್ದಾರಿ ಇದೆ, ತಂದೆ ತಾಯಿಗಳು ಬಾಲ್ಯದಲ್ಲಿ ಮಕ್ಕಳಿಗೆ ಉತ್ತಮ ಶಿಕ್ಷಣದೊಂದಿಗೆ ನಮ್ಮ ಧಾರ್ಮಿಕ ಸಂಕೇತವಾದ ಭಜನೆಯನ್ನು ಕಲಿಸಿಕೊಡಬೇಕು. ಈ ಮೂಲಕ ಭಜನೆಗಳು ಪ್ರತಿನಿತ್ಯ ನಮ್ಮ ನಮ್ಮ ಮನೆಗಳಲ್ಲಿ ಕೇಳುವಂತಾಗಬೇಗು ಎಂದರು.
ಕಾರ್ಯಕ್ರಮದ ಆಧ್ಯಕ್ಷತೆಯನ್ನು ಶ್ರೀ ನಿಚ್ಚಲಮಕ್ಕಿ ವೆಂಕಟರಮಣ ದೇವಸ್ಥಾನದ ಅಧ್ಯಕ್ಷ ಕೃಷ್ಣಾ ನಾಯ್ಕ ವಹಿಸಿ ಮಾತನಾಡಿದರು. ಶ್ರೀಧರ ನಾಯ್ಕ ಭಜನೆಯ ಮಹತ್ವದ ಬಗ್ಗೆ ಪ್ರಾಸ್ತಾವಿಕವಾಗಿ ಮಾತನಾಡಿದರು. ಶ್ರೀಕಾಂತ ನಾಯ್ಕ ಹಾಗೂ ಪಾಂಡುರAಗ ನಾಯ್ಕ ಕಾರ್ಯಕ್ರಮ ನಿರೂಪಿಸಿದರು. ಕುಣಿತ ಸ್ಪರ್ಧೆಯ ನಿರ್ಣಾಯಕರಾಗಿ ಸಮಾಜ ಸೇವಕ ಭಾಸ್ಕರ ನಾಯ್ಕ, ಗಂಗಾಧರ ನಾಯ್ಕ ಹಾಗೂ ನಾರಾಯಣ ನಾಯ್ಕ, ನಿರ್ವಹಿಸಿದರು. ಕಾರ್ಯಕ್ರಮದಲ್ಲಿ ದೇವಸ್ಥಾನದ ಆಡಳಿತ ಮಂಡಳಿಯ ಸದಸ್ಯರು, ವೆಂಕಟೇಶ್ವರ ಯುವಕ ಸಂಘದ ಅಧ್ಯಕ್ಷ ವಸಂತ ನಾಯ್ಕ ಮತ್ತಿತರರು ಉಪಸ್ಥಿತರಿದ್ದರು.
More Stories
ಅಕ್ಷಯ ತೃತೀಯ ದಿನದಂದು ಮನೆಗೆ ನುಗಿದ ಕಳ್ಳರು:
ಭಟ್ಕಳದ ಅಂಜುಮನ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಅಂಡ್ ಮ್ಯಾನೇಜ್ಮೆಂಟ್ನ ೪೧ ನೇ ವಾರ್ಷಿಕ ಅಥ್ಲೆಟಿಕ್ ಮೀಟ್
ಸಿದ್ದಾರ್ಥ ಆಂಗ್ಲ ಮಾದ್ಯಮ ಪ್ರೌಢಶಾಲೆ ಶಿರಾಲಿ ವಿದ್ಯಾರ್ಥಿಗಳು ಎಸ್.ಎಸ್.ಎಲ್.ಸಿ ಉತ್ತಮ ಸಾಧನೆ