May 15, 2024

Bhavana Tv

Its Your Channel

ಕೊಂಕಣ್ ರೈಲ್ವೆ ಒಬಿಸಿ ರೈಲ್ವೆ ನೌಕರರ ಸಂಘ ಹಾಗೂ ತಾಲೂಕಾ ಆಸ್ಪತ್ರೆ ಭಟ್ಕಳ ಸಹಯೋಗದಲ್ಲಿ ನಡೆದ ಬೃಹತ್ ರಕ್ತದಾನ ಶಿಬಿರ

ಭಟ್ಕಳ :ಪರ್ಯಾಯ ವ್ಯವಸ್ಥೆ ಇಲ್ಲದ ದಾನವೆಂದರೆ ರಕ್ತದಾನ ಮಾತ್ರ. ಒಂದು ಜೀವನ ಉಳಿಸಬಲ್ಲ ಶಕ್ತಿ ಇರುವದು ರಕ್ತದಾನಕ್ಕೆ ಮಾತ್ರ ಎಂದು ಕೊಂಕಣ್ ರೈಲ್ವೆ ಒಬಿಸಿ ರೈಲ್ವೆ ನೌಕರರ ಸಂಘದ ಪ್ರದಾನ ಕಾರ್ಯದರ್ಶಿ ಪ್ರಶಾಂತ ಮಹಾಜನ ಎಂದು ಹೇಳಿದರು.
ಅವರು ಕೋಂಕಣ್ ರೈಲ್ವೆ ತರಬೇತಿ ಕೇಂದ್ರ ಭಟ್ಕಳ ಆವರಣದಲ್ಲಿ ಅಖಿಲ ಭಾರತೀಯ ಒಬಿಸಿ ರೈಲ್ವೆ ನೌಕರರ ಸಂಘ ಕೊಂಕಣ್ ರೈಲ್ವೆ, ತಾಲೂಕಾ ಆಸ್ಪತ್ರೆ ಭಟ್ಕಳ ಮತ್ತು ಉಡುಪಿ ರಕ್ತನಿಧಿ ಕೇಂದ್ರ ಇವರ ಸಂಯುಕ್ತ ಆಶ್ರಯದಲ್ಲಿ ನಡೆದ ಬೃಹತ್ ರಕ್ತದಾನ ಶಿಬಿರದಲ್ಲಿ ಸ್ವಯಂ ಪ್ರೇರಿತ ರಕ್ತದಾನ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು.
ಕೊಂಕಣ ರೈಲ್ವೆ ನೌಕರರ ಸಂಘಟನೆ ಕಾರ್ಯದರ್ಶಿ ಉದಯ ಸಾರಂಗ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ಮಾನವನ ಯಾವುದೇ ಅಂಗಾAಗಗಳು ನಿಷ್ಕ್ರಿಯೆ ಗೊಂಡಾಗ ವೈದ್ಯರ ಸಲಹೆ ಮೇರಿಗೆ ಆ ಅಂಗವನ್ನು ಜೋಡನೆ ಮಾಡುವಾಗ ರಕ್ತದ ಅವಶ್ಯಕತೆ ಇರುತ್ತದೆ. ಪ್ರತಿಯೊಂದು ಔಷಧಿಯನ್ನು ಎಲ್ಲಿ ಬೇಕಾದರೂ ಕೊಂಡುಕೊಳ್ಳಬಹುದು ಆದರೆ ರಕ್ತ ಮಾತ್ರ ಎಲ್ಲಿಂದಲೋ ಪಡೆಯಲು ಸಾಧ್ಯವಿಲ್ಲ ಅದು ಮಾತ್ರ ಮಾನವನ ದೇಹದಿಂದ ಕೊಂಡುಕೊಳ್ಳಲು ಮಾತ್ರ ಸಾಧ್ಯವಿದೆ ಎಂದರು.
ಕಾರ್ಯಕ್ರಮದ ಮುಖ್ಯ ಅತಿಥಿಗಳಾದ ಭಟ್ಕಳ ತಾಲ್ಲೂಕು ಆಸ್ಪತ್ರೆ ವೈಧ್ಯಾಕಾರಿ ಡಾ ಸವಿತಾ ಕಾಮತ್,ಮಾತನಾಡಿ ಅಂಗಾAಗಗಳ ದಾನಗಳ ಬಗ್ಗೆ ಸಾಮಾನ್ಯ ಜನರಲ್ಲಿ ಜಾಗೃತಿ ಮೂಡಿಸುವ ಅಗತ್ಯತೆ ತೀರಾ ಇದ್ದು, ಮೆದುಳು ನಿಷ್ಕ್ರಿಯಗೊಂಡ ವ್ಯಕ್ತಿಯ ಅಂಗಾAಗಗಳನ್ನು ದಾನ ಮಾಡುವುದರಿಂದ ಇನ್ನೊಂದು ವ್ಯಕ್ತಿಗೆ ಜೀವದಾನ ನೀಡಬಹುದಾಗಿದೆ. ರಕ್ತದಾನ, ನೇತ್ರ ದಾನದಂತೆ ಅಂಗಾAಗ ದಾನಗಳ ಬಗ್ಗೆಯೂ ಜನರಲ್ಲಿ ತಿಳಿವಳಿಕೆ ಮೂಡಿಸಿದರೆ ಕ್ಲಿಷ್ಟಕರ ಸನ್ನಿವೇಶದಲ್ಲಿ ಜನರು ಸ್ವಯಂ ಪ್ರೇರಿತರಾಗಿ ಅಂಗಾAಗ ದಾನಕ್ಕೆ ಮುಂದೆ ಬರುತ್ತಾರೆ ಎಂದರು.
ಈ ಸಂದರ್ಭದಲ್ಲಿ ಕೊಂಕಣ ರೈಲ್ವೆ ಏರಿಯಾ ಅಧಿಕಾರಿಯಾದ ಎಲ್.ಎಮ್.ಹೆಗ್ಡೆ,ಉಡುಪಿ ಬ್ಲಡ್ ಬ್ಯಾಂಕ್ ರೋಗ ಶಾಸ್ತ್ರಜ್ಞನ್ನೆ ಡಾ ವೀಣಾ ಕುಮಾರಿ,ಉಪಸ್ಥಿತಿ ಇದ್ದರು.
ನಂತರ ಇದೇ ಸಂದರ್ಭದಲ್ಲಿ ಸಮಾಜ ಸೇವಕ ಮಂಜು ನಾಯ್ಕ ಮುಟ್ಟಳ್ಳಿ ಅವರಿಗೆ ಸನ್ಮಾನಿಸಿ ಗೌರವಿಸಿದರು.
ಸಿಬ್ಬಂದಿಗಳು ಸೇರಿದಂತೆ ಸಾರ್ವಜನಿಕರು ಸ್ವಯಂ ಪ್ರೇರಿತ ರಕ್ತದಾನ ಶಿಬಿರದಲ್ಲಿ ಪಾಲ್ಗೊಂಡರು ಒಟ್ಟು 35 ಬಾಟಲ್ ರಕ್ತವನ್ನು ಸಂಗ್ರಹಿಸಲಾಯಿತು. ಅಖಿಲ ಭಾರತೀಯ ಒಬಿಸಿ ರೈಲ್ವೆ ನೌಕರರದ ಸಂಘದ
ಕಾರ್ಯಕಾರಿಣಿ ಅಧ್ಯಕ್ಷ ಮಂಜುನಾಥ ದೇವಾಡಿಗ ಕಾರ್ಯಕ್ರಮದ ವಂದನಾರ್ಪಣೆ ಮಾಡಿದರು.
ಸಂಘಟನೆ ಕಾರ್ಯದರ್ಶಿ ಸದಾನಂದ ನಾಯ್ಕ ಕಾರ್ಯಕ್ರಮ ನಿರ್ವಹಿಸಿದರು.

error: