April 27, 2024

Bhavana Tv

Its Your Channel

ಬಸ್ ಸಮಸ್ಯೆಗಳ ಬಗ್ಗೆ ದಾಂಡೇಲಿ ಡಿಪೋ ಮ್ಯಾನೇಜರ್ ಜೊತೆ ಚರ್ಚೆ

ವರದಿ: ವೇಣುಗೋಪಾಲ ಮದ್ಗುಣಿ

ದಾಂಡೇಲಿ : ಇತ್ತೀಚಿಗೆ ನಗರದ ಬಸ್ ಡಿಪೋ ವ್ಯವಸ್ಥಾಪಕರ ಜೊತೆಗೆ ಹಿರಿಯ ನಾಗರಿಕ ಸಮಿತಿಯ ಪದಾಧಿಕಾರಿಗಳು ಮತ್ತು ದಾಂಡೇಲಿ ಸಮಗ್ರ ಅಭಿವೃದ್ಧಿ ಹೋರಾಟ ಸಮಿತಿಯ ಪದಾಧಿಕಾರಿಗಳು ಚರ್ಚೆ ನಡೆಸಲಾಯಿತು ಮತ್ತು ಬಸ್ಸಿನಿಂದ ಹಳೆಯ ದಾಂಡೇಲಿಯ ಸಾರ್ವಜನಿಕರಿಗೆ ತೊಂದರೆ ಬಗ್ಗೆ ಚರ್ಚೆ ನಡೆಸಲಾಯಿತು ಈಗಾಗಲೇ ದಾಂಡೇಲಿಯ ಒಳಚರಂಡಿ ಕಾಮಗಾರಿ ಹಳೆ ದಾಂಡೇಲಿ ಹೋಗುವ ಮುಖ್ಯ ರಸ್ತೆಯಾದ ಪಿಡಬ್ಲ್ಯೂಡಿ ಬಂಗಲೆಯಿAದ ಹಳೆ ಕೋರ್ಟಿನ ಮುಖ್ಯರಸ್ತೆಯ ಕಾಮಗಾರಿ ಮುಗ್ದಿದ್ದು ಹೊರಗಡೆಯಿಂದ ಬರುವ ಬಸ್ಸನ್ನು ಹಳೆ ದಾಂಡೇಲಿ ಕೆನಡಿಯವರ ಮನೆಯವರೆಗೆ ಬಸ್ಸು ಬರುವ ವ್ಯವಸ್ಥೆಯನ್ನು ಮಾಡಬೇಕೆಂದು ಚರ್ಚೆ ನಡೆಸಿದರು ಅದನ್ನು ಸಹ ಪ್ರಾರಂಭಿಸಲು ಒಪ್ಪಿಕೊಂಡರು. ಪಟೇಲ್ ನಗರದಿಂದ ಹಳೆ ದಾಂಡೇಲಿಯ ಕಾಮಗಾರಿ ಮುಗಿದಿದ್ದರಿಂದರ ಈ ಹಿಂದೆ ಇದ್ದ ಬಸ್ ದೀಪು ಹಳೇ ದಾಂಡೇಲಿ ಮೂಲಕ ಬಸ್ಸುಗಳನ್ನು ಓಡಿಸುವ ವ್ಯವಸ್ಥೆ ಮಾಡಬೇಕೆಂದು ಒತ್ತಾಯಿಸಿದರು ಇದನ್ನು ಸಹ ಒಳಚರಂಡಿ ಇಲಾಖೆ ಯವರ ಜೊತೆಗೆ ಮಾತನಾಡಿ ಹಳೆ ಮಾರ್ಗದಲ್ಲಿ ಬಸ್ಸುಗಳು ಬಿಡುವ ಹಾಗೂ ಎಲ್ಲಿ ಕಾಮಗಾರಿ ನಡೆದಿದೆ ಅಲ್ಲಿ ಮಾತ್ರ ಬಸ್ಸನ್ನು ಓಡಿಸದೇ ರೀತಿಯಲ್ಲಿ ಕ್ರಮವಹಿಸಲಾಗುವುದು ದಾಂಡೇಲಿ ಮತ್ತು ಹಳಿಯಾಳ ದಿಂದ ಹೊರಡುವ ಪ್ರತಿಯೊಂದು ಬಸ್ಸನ್ನು ಈ ಹಿಂದೆ ಇದ ಧಾರವಾಡದ ಹಳೆ ಬಸ್ ಸ್ಟ್ಯಾಂಡಕ್ಕೆ ಪ್ರಯಾಣಿಕರನ್ನು ಇಳಿಸುವ ಮತ್ತು ಹತ್ತಿಸುವ ವ್ಯವಸ್ಥೆಯನ್ನು ನೀಡಬೇಕೆಂದು ಒತ್ತಾಯಿಸಿದರು ಅದೇ ರೀತಿ ಹುಬ್ಬಳ್ಳಿಗೂ ಸಹ ಹೊಸೂರ್ ಬಸ್ ನಿಲ್ದಾಣದಿಂದ ಸೇವೆ ಸಿಗಬೇಕು ಮತ್ತು ಹುಬ್ಬಳ್ಳಿಗೆ ಹೆಚ್ಚಿನ ಬಸ್ಸಿನ ವ್ಯವಸ್ಥೆ ಬೇಕೆಂದು ಒತ್ತಾಯಿಸಿದರು ಶಾಲಾ ಕಾಲೇಜು ಮತ್ತು ಉದ್ಯೋಗಕ್ಕೆ ಹೋಗುವ ಸಾರ್ವಜನಿಕರಿಗೆ ಹಳಿಯಾಳಕ್ಕೆ ಹೆಚ್ಚಿನ ಬಸ್ಸಿನ ಸೇವೆ ಸಿಗಬೇಕು ಹಾಗೂ ಬರುವ ಮತ್ತು ಹೋಗುವ ಬಸ್ಸನ್ನು ನಿಲ್ಲುವ ವ್ಯವಸ್ಥೆ ಮಾಡಬೇಕೆಂದು ಒತ್ತಾಯಿಸಿದರು ಈ ವಿಷಯ ಬಗ್ಗೆ ಕೂಡಲೇ ಪರಿಹಾರ ನೀಡಬೇಕೆಂದು ಒತ್ತಾಯಿಸಿದರು ಅಲ್ಲದೆ ದಾಂಡೇಲಿಯಿAದ ಬೆಂಗಳೂರು ಮತ್ತು ಬಳ್ಳಾರಿಗೆ ಸಿಗಬೇಕೆಂದು ಎಂದು ಸಮಿತಿಯ ಅಧ್ಯಕ್ಷರಾದ ಅಕ್ರಂ ಖಾನ್ ರಮೇಶ್ ನಾಯಕ್ ಸತೀಶ್ ನಾಯಕ್ ಶಬಸ್ತೀನ ಡಿಮೇಲೊ ,ಮುಜಿಬಾಚಬಿ ,ಹಾಗೂ ಜಂಟಿ ಸಮಿತಿಯ ಪದಾಧಿಕಾರಿಗಳು ಉಪಸ್ಥಿತರಿದ್ದರು

error: