ಹೊನ್ನಾವರ: ಇನ್ನೊಬ್ಬರ ಕಷ್ಟಕ್ಕೆ ಸ್ಪಂದಿಸಿದರೆ ದೇವರ ಪ್ರೀತಿಗೆ ಪಾತ್ರರಾಗುತ್ತಾರೆ. ಕೊರೊನಾ ಜನಸಾಮಾನ್ಯರ ಬದುಕಿನ ಆನಂದವನ್ನು ಕಿತ್ತುಕೊಂಡಿದೆ. ಬಡವರ ಗೋಳು ಮುಗಿಲುಮುಟ್ಟಿದೆ. ಇಂತಹ ಕಷ್ಟಕಾಲದಲ್ಲಿ ಕಡತೋಕಾ ಶಿವಾನಂದ ಹೆಗಡೆ ವಿದ್ಯಾರ್ಥಿಗಳಿಗೆ ಕಲಿಕಾ ಸಾಮಾಗ್ರಿ ವಿತರಿಸುವ ಮೂಲಕ ವಿದ್ಯಾರ್ಥಿ ಮತ್ತು ಪೋಷಕರಲ್ಲಿ ಆನಂದ ಅರಳಿಸುತ್ತಿದ್ದಾರೆ ಎಂದು ಕರಿಕಾನ ಪರಮೇಶ್ವರಿ ದೇವಾಲಯದ ಅರ್ಚಕರಾದ ಸುಬ್ರಹ್ಮಣ್ಯ ಭಟ್ ಹೇಳಿದರು.
ತಾಲೂಕಿನ ಅರೇಅಂಗಡಿಯ ಎಸ್.ಕೆ.ಪಿ. ಪದವಿಪೂರ್ವ ಕಾಲೇಜಿನಲ್ಲಿ ಪೂರ್ವ ವಿದ್ಯಾರ್ಥಿಗಳು ಆಯೋಜಿಸಿದ `ವಿದ್ಯಾ ಪ್ರೇರಣ’ ಕಾರ್ಯಕ್ರಮದಲ್ಲಿ ಮಾತನಾಡಿದರು.
ಶಿವಾನಂದ ಹೆಗಡೆ ಅವರದ್ದು ಪಕ್ಷಾತೀತವಾದ ವ್ಯಕ್ತಿತ್ವ. ಕೈಲಾಗದವರಿಗೆ ಕೈಲಾದಷ್ಟು ಸಹಾಯ ಮಾಡುವ ಅವರ ಸ್ವಭಾವ ಮೆಚ್ಚುವಂತದ್ದು. ಇಲ್ಲಿನ ಪ್ರೌಢಶಾಲೆ ಮತ್ತು ಪ.ಪೂ. ಕಾಲೇಜಿನ ಇನ್ನೂರಕ್ಕೂ ಅಧಿಕ ವಿದ್ಯಾರ್ಥಿಗಳಿಗೆ ಅರವತ್ತು ಸಾವಿರ ರೂಪಾಯಿ ಮೌಲ್ಯದ ಕಲಿಕಾ ಸಾಮಾಗ್ರಿಗಳನ್ನು ಅವರು ನೀಡಿದ್ದಾರೆ. ಅವರ ಈ ಸಮಾಜ ಸೇವೆ ಉಳಿದವರಿಗೆ ಪ್ರೇರಣೆ ಆಗಲಿ ಎಂದರು.
ಎಸ್.ಕೆ.ಪಿ. ಪೂರ್ವ ವಿದ್ಯಾರ್ಥಿಗಳ ಸಂಘದ ಸನ್ಮಾನ ಸ್ವೀಕರಿಸಿ ಮಾತನಾಡಿದ ಕಡತೋಕಾ ಶಿವಾನಂದ ಹೆಗಡೆ, ಕರೋನಾ ಬಡವರ ಬದುಕನ್ನು ದುಸ್ಥಿತಿಗೆ ತಳ್ಳಿದೆ. ಜೀವನಮಟ್ಟ ಕುಸಿದಿದೆ. ಅದನ್ನು ನೋಡಿ ವಿದ್ಯಾರ್ಥಿಗಳಿಗೆ ಕಿಂಚಿತ್ ಸಹಾಯ ಮಾಡಿದ್ದೇನೆ. ಈ ಸಂಸ್ಥೆಯ ಪೂರ್ವ ವಿದ್ಯಾರ್ಥಿಗಳು ಒಂದಾಗಿ ಇಂತಹ ಸಮಾಜಮುಖಿ ಕೆಲಸಕ್ಕೆ ಮುಂದಾಗಿರುವುದು ಶ್ಲಾಘನೀಯ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಜಿ.ಆರ್.ನಾಯ್ಕ ಮಾತನಾಡಿ, ಇನ್ನೊಬ್ಬರ ಸುಖದಲ್ಲಿಯೇ ತನ್ನಸುಖಹ ಕಾಣುವ ಶಿವಾನಂದ ಹೆಗಡೆಯವರ ವ್ಯಕ್ತಿತ್ವ ಬಹಳ ದೊಡ್ಡದು. ಅವರಿಗೆ ನಮ್ಮ ಸಂಘ ಆಭಾರಿ ಎಂದರು.
ಸAಘದ ಕಾರ್ಯದರ್ಶಿ ಎಂ.ಜಿ.ಹೆಗಡೆ, ಕೆ.ಡಿ.ಸಿ.ಸಿ. ಬ್ಯಾಂಕ್ ವ್ಯವಸ್ಥಾಪಕ ಪಿ.ಜಿ.ಹೆಗಡೆ ಇತರರು ಉಪಸ್ಥಿತರಿದ್ದರು.
More Stories
ನೇತ್ರದಾನ ಮಾಡುವ ಮೂಲಕ ಸಾವಿನಲ್ಲೂ ಸಾರ್ಥಕತೆ ಮೆರೆದಿರುವ ಕೂಜಳ್ಳಿಯ ಹಿರಿಯ ಜೀವ ಅನಸೂಯಾ ಹೆಗಡೆ,
ಡಾ. ವಿಠ್ಠಲ ಭಂಡಾರಿಯವರ ನೆನಪಿನ ಮೂರನೇ ವರ್ಷ ಸಹಯಾನದ ಅಂಗಳದಲ್ಲಿ
ಪಿಎಸೈ ವಿರುದ್ದ ಇಲಾಖೆಯ ಮೇಲಾಧಿಕಾರಿಗೆ ಹಾಗೂ ಜನಪ್ರತಿನಿಧಿಗಳಿಗೆ ಗ್ರಾ.ಪಂ. ಸದಸ್ಯನಿಂದ ದೂರು,