ಹೊನ್ನಾವರ : ರೇ.ಸಿ. ಮಾರಿಯಾ ಗೊರಟ್ಟಿ ಆರಂಭಿಸಿದ ಜಿಲ್ಲೆಯಾದ್ಯಂತ ಶಾಖೆಗಳಿರುವ ಪ್ರತಿಭೋದಯ, ಬಾಲ ಪ್ರಗತಿ ಕೇಂದ್ರದ ವಿದ್ಯಾರ್ಥಿ ಪಾಲಕರಿಗೆ ಅಕ್ಕಿ, ಬೇಳೆ, ಗೋಧಿ, ಮೊದಲಾದ ಜೀವನಾವಶ್ಯಕ ವಸ್ತುಗಳನ್ನು ಕೋವಿಡ್ ಪರಿಹಾರವಾಗಿ ನೀಡುವ ಕಾರ್ಯಕ್ರಮ ಪ್ರತಿಭೋದಯದಲ್ಲಿ ನಡೆಯಿತು.
ವಿದ್ಯಾರ್ಥಿಗಳನ್ನು, ಪಾಲಕರನ್ನು ಕರೆಸಿಕೊಂಡ ಸಂಸ್ಥೆಯ ಆಡಳಿತ ನಿರ್ದೇಶಕ ಫಾದರ್ ಗಾಬ್ರಿಯಲ್ ಈ ಸಂದರ್ಭದಲ್ಲಿ ಮಾತನಾಡಿ ೩೦೦ ವಿದ್ಯಾರ್ಥಿಗಳಿಗೆ ಕಿಟ್ನ್ನು ದಾನಿಸಂಸ್ಥೆಯೊoದು ನೀಡಿತು. ನಾವು ವಿದ್ಯಾರ್ಥಿಗಳಲ್ಲಿ ಬೇಧ ಬೇಡ ಎಂದು ಇತರ ದಾನಿಗಳಿಂದಲೂ ಸಂಗ್ರಹಿಸಿ ಜಿಲ್ಲೆಯ ಎಲ್ಲ ೭೮೮ ವಿದ್ಯಾರ್ಥಿಗಳಿಗೆ ಇದನ್ನು ನೀಡುತ್ತಿದ್ದೇವೆ. ಈ ಸಣ್ಣ ಸಹಾಯವನ್ನು ಸ್ವೀಕರಿಸಿ ಮಕ್ಕಳು ಶ್ರದ್ಧೆಯಿಂದ ಕಲಿಯುವಂತೆ ಪ್ರೇರಣೆ ಪಡೆಯಲಿ ಎಂದು ಅವರು ಹಾರೈಸಿದರು. ನಗರದ ಗಣ್ಯರು, ಪತ್ರಕರ್ತರು ಉಪಸ್ಥಿತರಿದ್ದರು.
More Stories
ಸಾನ್ವಿ ರಾವ್ ಹೊನ್ನಾವರ, ದ್ವೀತಿಯ ಪಿಯುಸಿ ಕಾಮರ್ಸ ನಲ್ಲಿ ರಾಜ್ಯಕ್ಕೆ ಪ್ರಥಮ ಸ್ಥಾನ. :
ಬಿಜೆಪಿ ಜಿಲ್ಲೆಯಲ್ಲಷ್ಟೇ ಅಲ್ಲ, ರಾಜ್ಯದಲ್ಲೂ ಏನೂ ಮಾಡಿಲ್ಲ: ಮಂಕಾಳ ವೈದ್ಯ ಟೀಕೆ
ಬಿಜೆಪಿ ಬಿಜೆಪಿ ಎಂದು ಕುಣಿಯುವ ಯುವಕರಿಗೆ ಮತದಾನದ ಹಕ್ಕು ನೀಡಿದ್ದು ಕಾಂಗ್ರೆಸ್: ದೇಶಪಾಂಡೆ