May 19, 2024

Bhavana Tv

Its Your Channel

ಸಿ.ಇ.ಟಿ ಫಲಿತಾಂಶ ಪ್ರಕಟ – ಉನ್ನತ ರ‍್ಯಾಂಕ್ ಪಡೆದ ಹೊನ್ನಾವರದ ತನ್ಮಯ್ ರಂಗನಾಥ ಪೂಜಾರಿ

ಹೊನ್ನಾವರ : ಸೋಮವಾರ ಪ್ರಕಟವಾದ ಸಿ.ಇ.ಟಿ ಫಲಿತಾಂಶದಲ್ಲಿ ಹೊನ್ನಾವರದ ತನ್ಮಯ್ ರಂಗನಾಥ ಪೂಜಾರಿ ಉನ್ನತ ರ‍್ಯಾಂಕ್ ಪಡೆದು ಸಾಧನೆ ತೋರಿದ್ದಾನೆ.

ಪಟ್ಟಣದಲ್ಲಿ ಖಾಸಗಿ ಕ್ಲಿನಿಕ್ ನಡೆಸುತ್ತಿರುವ ಖ್ಯಾತ ವೈದ್ಯರೂ ರೋಟರಿ ಕ್ಲಬ್ ಮಾಜಿ ಅಧ್ಯಕ್ಷರೂ ಹಾಲಿ ಸದಸ್ಯರೂ ಆಗಿರುವ ಡಾ.ರಂಗನಾಥ ಪೂಜಾರಿ ಅವರ ಮಗನಾದ ತನ್ಮಯ್ ಪೂಜಾರಿ ಎಂಜನಿಯರಿoಗ್ ಅಲ್ಲಿ ೭೪೩, ಬಿ.ಎನ್.ವೈ.ಎಸ್ ಅಲ್ಲಿ ೧೮೨, ಅಗ್ರಿಕಲ್ಚರ್ ಬಿ.ಎಸ್ಸಿ ಯಲ್ಲಿ ೧೭೧, ವೆಟರ್ನರಿ ಸೈನ್ಸ್ ಅಲ್ಲಿ ೧೮೧, ಬಿ.ಫಾರ್ಮಾದಲ್ಲಿ ಮತ್ತು ಫಾರ್ಮಾ.ಡಿ ಯಲ್ಲಿ ೨೭೫ ನೇ ರ‍್ಯಾಂಕ್
ಪಡೆದು ಸಾಧನೆ ತೋರಿದ್ದಾನೆ.

ಪಟ್ಟಣದ ಮಾರ್ಥೋಮಾ ಕಾನ್ವೆಂಟ್ ನಲ್ಲಿ ಪ್ರಾಥಮಿಕ ಶಿಕ್ಷಣ ಪಡೆದಿದ್ದ ತನ್ಮಯ್ ಹಟ್ಟಿಯಂಗಡಿಯಲ್ಲಿ ಪ್ರೌಢ ಶಿಕ್ಷಣ ಪೂರೈಸಿದ್ದ. ಪಿ.ಯು.ಶಿಕ್ಷಣನ್ನು ಮಂಗಳೂರಿನ ಹೆಸರಾಂತ ಶಿಕ್ಷಣ ಸಂಸ್ಥೆ ಎಕ್ಸ ಪರ್ಟ್ ಕಾಲೇಜಿನಲ್ಲಿ ಓದಿದ್ದಾನೆ.

error: