May 14, 2024

Bhavana Tv

Its Your Channel

ಬ್ರಹ್ಮಶ್ರೀ ನಾರಾಯಣ ಗುರು ಧರ್ಮ ಪರಿಪಾಲನ ಸಂಘಟನೆಯಿOದ ಶ್ರೀ ನಾರಾಯಣ ಗುರುಗಳ ಪುಣ್ಯ ತಿಥಿ

ಹೊನ್ನಾವರ : ಬ್ರಹ್ಮಶ್ರೀ ನಾರಾಯಣ ಗುರು ಧರ್ಮ ಪರಿಪಾಲನ ಸಂಘಟನೆ ಹೊನ್ನಾವರದ ಇದರ ವತಿಯಿಂದ ಶ್ರೀ ನಾರಾಯಣ ಗುರುಗಳ ಪುಣ್ಯ ತಿಥಿಯನ್ನು ರಾಯಲಕೇರಿಯ ಅಂಬೆಡ್ಕರ್ ಸಭಾಭವನದಲ್ಲಿ ಆಚರಿಸಲಾಯಿತು.

ಈ ಸಂದರ್ಭದಲ್ಲಿ ತಾಲೂಕಾ ಅಧ್ಯಕ್ಷರಾದ ಧನಂಜಯ್ ನಾಯ್ಕ್ ರಾಯಲಕೇರಿ ಮಾತನಾಡಿ ” ನಾರಾಯಣ ಗುರುಗಳ ತತ್ತ್ವ ಸಿದ್ಧಾಂತ ಅತ್ಯಂತ ಸರಳ ಮತ್ತು ಸುಲಭವಾಗಿ ಎಲ್ಲರಿಗು ಅರ್ಥ ಆಗುವಂತದ್ದು. ಶ್ರೀ ನಾರಯಣ ಗುರುಗಳು ಒಂದೆ ಜಾತಿ ಒಂದೆ ಮತ ಒಂದೆ ಕುಲ ಎಂದು ಮನುಕುಲಕ್ಕೆ ಸಾರಿದರು. ಸಮಾಜದಲ್ಲಿ ಇದ್ದ ಜಾತೀಯತೆ, ಅಸ್ಪೃಶ್ಯತೆ, ಜೀತ, ಜಮೀನ್ದಾರಿ ಪದ್ಧತಿ, ಮೂಢನಂಬಿಕೆ ವಿರುದ್ಧ ಹೋರಾಡಿದರು. ಸಮಸ್ತ ಮನುಕುಲದ ಒಳಿತಿಗಾಗಿ ನಾವು ಅವರ ತತ್ತ್ವ ಸಿದ್ಧಾಂತವನ್ನು ಪಾಲಿಸಬೆಕು “ಎಂದೂ ಹೇಳಿದರು.
ಈ ಸಂದರ್ಭದಲ್ಲಿ ಪ್ರಧಾನ ಕಾರ್ಯದರ್ಶಿಗಳಾದ ಸಂತೋಶ್ ನಾಯ್ಕ ಹಾಗು ಪದಾಧಿಕಾರಿಗಳಾದ ದಿನೇಶ ನಾಯ್ಕ , ಶ್ರೀನಿವಾಸ ನಾಯ್ಕ , ಅವಿನಾಶ ನಾಯ್ಕ , ಗಣಪತಿ ನಾನಾಯ್ಕ , ಪ್ರದೀಪ ನಾಯ್ಕ , ನಾಗರಾಜ ನಾಯ್ಕ , ಶ್ರೀನಾಥ ನಾಯ್ಕ , ಸಂದೀಪ ನಾಯ್ಕ , ಸಿಡಿ ರಾಘವೇಂದ್ರ, ಪ್ರದೀಪ ನಾಯ್ಕ , ವಿನೊದ್ ನಾಯ್ಕ , ಶರತ್ ನಾಯ್ಕ ಇನ್ನು ಮುಂತಾದವರು ಗುರುಗಳ ಭಾವಚಿತ್ರಕ್ಕೆ ನಮಸ್ಕರಿಸಿ ಆಶಿರ್ವಾದ ಪಡೆದರು.

error: