May 19, 2024

Bhavana Tv

Its Your Channel

ಕಾನಗೋಡ ಚನ್ನಕೇಶವ ದೇವಸ್ಥಾನದಲ್ಲಿ ಕಾಣಿಕೆ ಹುಂಡಿ ಕಳ್ಳತನ.

ಹೊನ್ನಾವರ : ಸುಪ್ರಸಿದ್ದ ದೇವಾಲಯದಲ್ಲಿ ಒಂದಾದ ತಾಲೂಕಿನ ಜಲವಳ್ಳಿ ಗ್ರಾಮ ಪಂಚಾಯತ ವ್ಯಾಪ್ತಿಯ ಕಾನಗೋಡಿನ ಚನ್ನಕೇಶವ ದೇವಾಲಯದಲ್ಲಿ ಮಂಗಳವಾರ ಮದ್ಯಾಹ್ನ ೩ ಗಂಟೆ ಸುಮಾರಿಗೆ ಕಾಣಿಕೆ ಹುಂಡಿ ಕಳುವಾದ ಬಗ್ಗೆ ಹೊನ್ನಾವರ ಪೊಲೀಸ್ ಠಾಣೆಯಲ್ಲಿ ದೂರುದಾಖಲಾಗಿದೆ.

ದೇವಸ್ಥಾನದ ಹೊರಗಡೆ ಇದ್ದ ಕಾಣಿಗೆ ಹುಂಡಿ ಹಾಡ ಹಗಲಲ್ಲೇ ಕಳ್ಳತನವಾಗಿದೆ. ಅಂದಾಜು ೨೫ ಸಾವಿರಕ್ಕೂ ಹೆಚ್ಚು ಹಣ ಇದ್ದಿರಬಹುದು ಎಂದು ದೂರು ದಾಖಲಾಗಿದೆ. ದೇವಸ್ಥಾನಕ್ಕೆ ಭಕ್ತಾದಿಗಳು ಬಂದು ಹೋಗುವುದು ಬಿಟ್ಟರೆ ಇಲ್ಲಿ ಜನರ ಓಡಾಟ ತೀರಾ ಕಡಿಮೆ. ದೇವಾಲಯಕ್ಕೆ ಬಂದ ಭಕ್ತರು ಮಹಾಮಂಗಳಾರತಿ ಮುಗಿಸಿ ಮನೆಗೆ ಹೋದ ಸಮಯದಲ್ಲಿ ಕಳ್ಳರು ತಮ್ಮ ಕೈ ಚಳಕ ತೋರಿದ್ದಾರೆ. ಹೊನ್ನಾವರ ಸಿ. ಪಿ. ಐ. ಶ್ರೀಧರ ಎಸ್. ಎಚ್ ದೂರು ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.

error: