ವರದಿ: ವೆಂಕಟೇಶ ಮೇಸ್ತ ಹೊನ್ನಾವರ
ಹೊನ್ನಾವರ – ಪಟ್ಟಣ ಪಂಚಾಯತ ಹೊನ್ನಾವರದಲ್ಲಿ ನಡೆದ ಪೌರಕಾರ್ಮಿಕರ ದಿನಾಚರಣೆಯೆಂದು ಪೌರಕಾರ್ಮಿಕರಿಗೆ ಸನ್ಮಾನ ಹಾಗು ಅಭಿನಂದನಾ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮ ಉದ್ಘಾಟಿಸಿ ಮತನಾಡಿದ ಪಟ್ಟಣ ಪಂಚಾಯತ ಅಧ್ಯಕ್ಷ ಶಿವರಾಜ ಮೇಸ್ತರವರು ಪೌರಕಾರ್ಮಿಕರು ಮಾಡುವ ಕೆಲಸ ದೇವರ ಕೆಲಸದಷ್ಟೆ ಅತ್ಯಂತ ಪವಿತ್ರವಾದದ್ದು.ಅವರು ಕಾರ್ಯಕ್ಕೆ ನಾವು ಸದಾ ಕೃತಜ್ಞಾರಾಗಿರಬೇಕು. ಪಟ್ಟಣವನ್ನು ಸ್ವಚ್ಚವಾಗಿಡುವ ಕಾಯಕಕ್ಕಾಗಿ ಅವರು ನಿತ್ಯವು ನಸುಕಿನಿಂದಲೇ ಕಾರ್ಯಾರಂಭಮಾಡುತ್ತಾರೆ. ಕೋವಿಡ್ ಮಹಾಮಾರಿಯ ಸಂದರ್ಭದಲ್ಲು ಒಂದು ದಿನವು ತಪ್ಪದೇ ಕರ್ತವ್ಯ ನಿರ್ವಹಿಸಿದ್ದಾರೆ ಎಂದರು.
ಹಿರಿಯ ಲಯನ್ಸ್ ಸದಸ್ಯರು, ಮಾಜಿ ಪ್ರಾಂಶುಪಾಲರು ಆದ ಎಸ್ ಜೆ ಕೈರನ್ ರವರು ಮಾತನಾಡಿ ನಮ್ಮ ಪೌರಕಾರ್ಮಿಕರು.ಇಡೀ ನಗರವನ್ನೆ ಸ್ವಚ್ಚಗೊಳಿಸಿ ನಮ್ಮನ್ನು ಆರೋಗ್ಯ ಉತ್ತಮವಾಗಿಡಲು ಹಗಲಿರುಳು ಶ್ರಮಿಸುತ್ತಾರೆ. ಅಂತಹವರನ್ನು ಸದಾ ಗೌರವಿಸಿ ಸ್ಮರಿಸಬೆಕಾಗಿದೆ ಎಂದರು.
ಕಾರ್ಯಕ್ರಮದಲ್ಲಿ ತಹಶೀಲ್ದಾರ ನಾಗರಾಜ ನಾಯ್ಕಡ್, ಮುಖ್ಯಾಧಿಕಾರಿ ಪ್ರವೀಣನಾಯಕ, ಪಟ್ಟಣಪಂಚಾಯತ ಉಪಾಧ್ಯಕ್ಷೆ ಮೇಧಾ ನಾಯ್ಕ ಉಪಸ್ಥಿತರಿದ್ದರು. ಪಟ್ಟಣ ಪಂಚಾಯತ ಸದಸ್ಯರಾದ ಜೋಸ್ಪಿನ್ ಡಾಯಾಸ , ಸುಬ್ರಾಯ ಗೌಡ, ಸುರೇಶ ಹೊನ್ನಾವರ, ನಾಗರಾಜ ಭಟ್ಟ, ಶ್ರೀಪಾದ ನಾಯ್ಕ, ಭಾಗ್ಯಾ ಲೋಕೇಶ ಮೇಸ್ತ, ಸುಜಾತ ಯೋಗೇಶ ಮೇಸ್ತ, ಸುಭಾಷ ಹರಿಜನ್,ವಿನೋದ ಮೇಸ್ತ, ನೀಶಾ ಮೋಹನ ಶೇಟ್ರವರು ಪಾಲ್ಗೊಂಡು ಪೌರಕಾರ್ಮಿಕರನ್ನು ಸನ್ಮಾನಿಸಿದರು. ಸಿಬ್ಬಂದಿಗಳಾದ ಸದಾನಂದ ನಾಯ್ಕ,ವೆಂಕಟೇಶ ನಾಯ್ಕ, ಮುಂತಾದವರು ಉಪಸ್ಥಿತರಿದ್ದರು. ಮುಖ್ಯಾಧಿಕಾರಿ ಪ್ರವೀಣ ನಾಯಕ ಪ್ರಾಸ್ತಾವಿಕವಾಗಿ ಮಾತನಾಡಿದರು. ಆರೋಗ್ಯ ನೀರೀಕ್ಷಕ ಸುನೀಲ್ ರವರು ಸ್ವಾಗತಿಸಿ ಕಾರ್ಯಕ್ರಮ ನಿರ್ವಹಿಸಿದರು.
More Stories
ಖಾಸಗಿ ಬಸ್ ಪಲ್ಟಿಯಾಗಿ ಬಸ್ಸಿನಲ್ಲಿದ್ದ ಪ್ರಯಾಣಿಕರಿಗೆ ಗಂಭೀರ ಗಾಯ, ೨ ಸಾವು
ಜಿಲ್ಲಾಧಿಕಾರಿಗಳು ಗಣಿ ಅಧಿಕಾರಿಗಳು ದೊಡ್ಡಮಟ್ಟದ ಭೃಷ್ಟಚಾರ ನಡೆಸಿದ್ದಾರೆ, ಸಾಮಾಜಿಕ ಕಾರ್ಯಕರ್ತರಾದ ರಮೇಶ ನಾಯ್ಕ ತುಂಬೊಳ್ಳಿ ಗಂಭೀರ ಆರೋಪ.
ಸದ್ಗುರು ಭಗವಾನ್ ಶ್ರೀ ಶ್ರೀಧರ ಸ್ವಾಮಿಗಳ ಪಾದುಕಾ ಪ್ರತಿಷ್ಟಾಪನಾ ಸುರ್ಣ ಮಹೊತ್ಸವ