May 18, 2024

Bhavana Tv

Its Your Channel

ಸುಳ್ಳು ಭರವಸೆ ಮೂಲಕ ಅಧಿಕಾರಕ್ಕೆ ಬಂದ ಬಿಜೆಪಿ ಸರ್ಕಾರ -ಶಿವಾನಂದ ಹೆಗಡೆ ಕಡತೋಕಾ

ಹೊನ್ನಾವರ: ಸುಳ್ಳು ಭರವಸೆ ಮೂಲಕ ಅಧಿಕಾರಕ್ಕೆ ಬಂದ ಬಿಜೆಪಿ ಸರ್ಕಾರ ಬಡ ಹಾಗೂ ಮಧ್ಯಮ ವರ್ಗದ ವಿರೋಧಿ ಆಡಳಿತ ನೀಡುತ್ತಿದೆ ಎಂದು ಉತ್ತರ ಕನ್ನಡ ಕಿಸಾನ್ ಕಾಂಗ್ರೆಸ್ ಅಧ್ಯಕ್ಷ ಶಿವಾನಂದ ಹೆಗಡೆ ಕಡತೋಕಾ ಆರೋಪಿಸಿದರು.

ಕೇಂದ್ರ ಸರಕಾರದ ಮೂರು ಪ್ರಮುಖ ಕಾಯ್ದೆ ವಿರೋಧಿಸಿ ಸೋಮವಾರ ಹೊನ್ನಾವರದಲ್ಲಿ ನಡೆದ ಭಾರತ್ ಬಂದ್ ಪ್ರತಿಭಟನೆಯಲ್ಲಿ ಮಾತನಾಡಿದ ಅವರು ಕೇಂದ್ರ ಹಾಗೂ ರಾಜ್ಯ ಬಿಜೆಪಿ ಸರಕಾರಗಳ ವಿರುದ್ದ ಜನರು ಎಚ್ಚರಗೊಂಡಿದ್ದು, ಬೀದಿಗಳಿದು ಪ್ರತಿಭಟನೆ ಮಾಡುವ ಕಾಲ ಬಂದಿದೆ ಎಂದರು. ಪೆಟ್ರೂಲ್ ಡಿಸೇಲ್ ಗ್ಯಾಸ್ ಬೆಲೆ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದ್ದು, ಹಣದುಬ್ಬರ ಹೆಚ್ಚಾಗಿದೆ. ಎಪಿಎಂಸಿ ನಾಶವಾಗುತ್ತಿದೆ. ರೈತರ ಬೆಳೆಗಳನ್ನು ಖಾಸಗಿಯವರು ಖರೀದಿಸುವಂತೆ ಮಾಡುತ್ತಿದ್ದಾರೆ. ಪ್ರತಿವರ್ಷ ಒಂದುವರೆ ಕೋಟಿಯಷ್ಟು ನಿರುದ್ಯೋಗ ನೀಡುತ್ತೇವೆ ಎಂದು ಅಧಿಕಾರಕ್ಕೆ ಬಂದು ನಿರುದ್ಯೋಗ ಸಮಸ್ಯೆ ಹೆಚ್ಚುವಂತೆ ಮಾಡಿದ್ದಾರೆ. ಅಗತ್ಯವಸ್ತುಗಳ ಬೆಲೆ ಏರುತ್ತಲ್ಲೆ ಇದೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಕಚ್ಚಾ ತೈಲದ ಬಲೆ ಕಡಿಮೆ ಇದ್ದರೂ ಪೆಟ್ರೋಲ್, ಡಿಸೇಲ್ ಬೆಲೆ ಗಗನಕ್ಕೇರಿತ್ತಿದೆ. ಜನಸಾಮಾನ್ಯರು ಜೀವನ ನಡೆಸುವುದು ಕಷ್ಟವಾಗುತ್ತಿದೆ. ಕೇಂದ್ರ ಹಾಗೂ ರಾಜ್ಯದಲ್ಲಿ ಬಿಜೆಪಿ ಸರಕಾರಗಳನ್ನು ಕಿತ್ತೆಸೆಯಬೇಕು. ಚುನಾವಣೆ ಸಮಯದಲ್ಲಿ ಭಯೊತ್ಪಾದನೆಯ ಗುಮ್ಮ ಬಿಟ್ಟು ಅಧಿಕಾರಕ್ಕೆ ಬಂದು ಶ್ರೀಮಂತ ವರ್ಗದ ಪರ ಆಡಳಿತ ಮಾಡುತ್ತಾ ಖಾಸಗಿಯವರಿಗೆ ಎಲ್ಲವನ್ನು ಮಾರಾಟ ಮಾಡುತ್ತಿದ್ದಾರೆ ಎಂದರು.

ಪುಷ್ಟಾ ಮಹೇಶ ನಾಯ್ಜ ಮಾತನಾಡಿ ಬಿಜೆಪಿ ಆಡಳತದಲ್ಲಿ ಅಡುಗೆ ಅನಿಲದ ಬಲೆ ಏರಿಕೆ ಜನರನ್ನು ಸಂಕಷ್ಟಕಕ್ಕೀಡು ಮಾಡಿದೆ.

ರಸ್ತೆ ತಡೆ: ಶರಾವತಿ ವೃತ್ತದಲ್ಲಿ ಪ್ರತಿಭಟನಾ ಸಭೆ ಬಳಿಕ ಪ್ರತಿಭಟನಾ ಕಾರರು ರಾಷ್ಟೀಯ ಹೆದ್ದಾರಿ ೬೬ ದಲ್ಲಿ ರಸ್ತೆ ತಡೆ ನಡೆಸಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಬಿಜೆಪಿ ಸರಕಾರ ಹಾಗೂ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದ ರಾಜ್ಯ ಬಿಜೆಪಿ ಸರಕಾರದ ವಿರುದ್ದ ಘೋಷಣೆ ಕೂಗಿದರು.

ಜನಜೀವನ ಸಹಜ ಸ್ಥಿತಿ: ಪಟ್ಟಣದಲ್ಲಿ ಹಾಗೂ ಗ್ರಾಮೀಣ ಭಾಗದಲ್ಲಿ ಜನಜೀವನ ಎಂದಿನAತೆ ಸಹಜ ಸ್ಥಿತಿಯಲ್ಲಿತ್ತು. ಅಂಗಡಿ ಮುಂಗಟ್ಟುಗಳು, ಹೊಟೆಲ್ ಗಳು ಎಂದಿನAತೆ ತೆರೆದಿದ್ದು ಬಂದ್ ಎಪೆಕ್ಟ ಇರಲಿಲ್ಲ. ಕಿಸಾನ್ ಕಾಂಗ್ರೇಸ್ ಸಿ.ಐಟಿಯು ರೈತ ಸಂಘದ ಹೊರತಾಗಿ ಕನ್ನಡಪರ ಹಾಗೂ ಉಳಿದ ಸಂಘಟನೆ ರಾಜ್ಯ ಮಟ್ಟದಲ್ಲಿ ಬೆಂಬಲ ನೀಡಿದರೂ ತಾಲೂಕಿನಲ್ಲಿ ಹೋರಾಟದಲ್ಲಿ ಪಾಲ್ಗೊಂಡಿರಲಿಲ್ಲ.

ಈ ಸಂದಭಧದಲ್ಲಿ ಕಿಸಾನ್ ಕಾಂಗ್ರೆಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ದೀಪಕ ನಾಯ್ಕ ಮಂಕಿ, ತಾಲೂಕ ಅಧ್ಯಕ್ಷ ಹರಿಶ್ಚಂದ್ರ ನಾಯ್ಕ, ಕಿಸಾನ್ ಕಾಂಗ್ರೆಸ್ ಮಂಕಿ ಘಟಕದ ಅಧ್ಯಕ್ಷ ಅಣ್ಣಪ್ಪ ನಾಯ್ಕ ಮಂಕಿ, ಚಂದ್ರಶೇಖರ ಗೌಡ,ಅಣ್ಣಪ್ಪ ಗೌಡ, ತಿಮ್ಮಪ್ಪ ಗೌಡ ಮತ್ತಿತರರು ಪಾಲ್ಗೊಂಡಿದ್ದರು.

error: